ಈ ಆರು ಜನರಲ್ಲಿ 'ಸರಿಗಮಪ-15' ಫೈನಲ್ ಗೆಲ್ಲೋದು ಯಾರು?
ಜೀ ಕನ್ನಡದಲ್ಲಿ ಪ್ರಸಾರವಾಗುವ ಸರಿಗಮಪ 15ನೇ ಆವೃತ್ತಿ ಫೈನಲ್ ಹಂತ ತಲುಪಿದ್ದು, ಈ ವಾರ ಫಿನಾಲೆ ಎಪಿಸೋಡ್ ನಡೆಯಲಿದೆ. ಒಟ್ಟು ಆರು ಜನ ಸ್ಪರ್ಧಿಗಳು ಫೈನಲ್ ಪ್ರವೇಶಿಸಿದ್ದು ಯಾರಿಗೆ ಗೆಲುವಿನ ಗೌರವ ಸಿಗಲಿದೆ ಎಂಬುದು ಕುತೂಹಲ ಮೂಡಿಸಿದೆ.
ತಮ್ಮದೇ ಪ್ರತಿಭೆಗಳ ಮೂಲಕ, ತಮ್ಮ ವಿಶಿಷ್ಠ ಗಾಯನದ ಮೂಲಕ ಜನರನ್ನ ಮತ್ತು ತೀರ್ಪುಗಾರರ ಗಮನ ಸೆಳೆದಿರುವ ಕೀರ್ತನ್, ವಿಜೇತ್, ಸಾದ್ವಿನಿ, ನಿಹಾಲ್, ಋತ್ವಿಕ್ ಹಾಗೂ ಹನುಮಂತ ಫೈನಲ್ ನಲ್ಲಿ ಹಣಾಹಣಿ ನಡೆಸಲಿದ್ದಾರೆ.
ಈ ಕಾರ್ಯಕ್ರಮವನ್ನ ಅನುಶ್ರಿ ನಿರೂಪಣೆ ಮಾಡ್ತಿದ್ದು, ವಿಜಯ ಪ್ರಕಾಶ್, ಅರ್ಜುನ್ ಜನ್ಯ, ರಾಜೇಶ್ ಕೃಷ್ಣನ್ ಜೊತೆ ನಾದಬ್ರಹ್ಮ ಹಂಸಲೇಖ ತೀರ್ಪುಗಾರರಾಗಿದ್ದಾರೆ. ಇದೇ ಶನಿವಾರ ಸಂಜೆ 6 ಗಂಟೆಯಿಂದ ಗ್ರಾಂಡ್ ಫಿನಾಲೆ ಲೈವ್ ಪ್ರಸಾರ ಆಗಲಿದೆ.

ಸರಿಗಮಪ 15 ಗ್ರ್ಯಾಂಡ್ ಫಿನಾಲೆ ಎಪಿಸೋಡ್ ಗೆ ಯಾರು ಮುಖ್ಯ ಅತಿಥಿ ಇರ್ತಾರೆ ಎಂಬುದು ಸದ್ಯಕ್ಕೆ ಗೌಪ್ಯವಾಗಿಯೇ ಉಳಿದುಕೊಂಡಿದೆ. ಒಟ್ಟಾರೆ, ಕಳೆದ ಹಲವು ದಿನಗಳಿಂದ ಕಿರುತೆರೆ ಪ್ರೇಕ್ಷಕರನ್ನ ರಂಜಿಸುತ್ತಿದ್ದ ಸರಿಗಮಪ ಕಾರ್ಯಕ್ರಮಕ್ಕೆ ಈ ವಾರ ತೆರೆ ಬೀಳುತ್ತಿದೆ.


Click it and Unblock the Notifications











