Don't Miss!
- News Siddaramaiah: ಹುಬ್ಬಳ್ಳಿಯ ನೇಹಾ ಹಿರೇಮಠ ನಿವಾಸಕ್ಕೆ ಸಿಎಂ ಭೇಟಿ: ಸಿದ್ದರಾಮಯ್ಯ ಕೊಟ್ಟ ಭರವಸೆ ಏನು?
- Lifestyle ದೇಹದಲ್ಲಿ ಈ ಬದಲಾವಣೆ ಆದರೆ ನಿಮ್ಮಲ್ಲಿ ವಿಟಮಿನ್ ಬಿ12 ಕೊರತೆಯಾಗಿದೆ ಎಂದರ್ಥ
- Sports IPL 2024: ಹೈದರಾಬಾದ್ ಅಂಗಳದಲ್ಲಿ ಗೆಲ್ಲುವುದೆ ಆರ್ಸಿಬಿ: ಟಾಸ್ ವರದಿ ಹೀಗಿದೆ
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಜೀ ಕನ್ನಡ' ತೊರೆಯುವ ಸುದ್ದಿ ಬಗ್ಗೆ ರಾಘವೇಂದ್ರ ಹುಣಸೂರು ಹೇಳಿದ್ದೇನು.?
Recommended Video
ಕನ್ನಡದ ಜನಪ್ರಿಯ ವಾಹಿನಿ 'ಜೀ ಕನ್ನಡ'ದ ಪ್ರೋಗ್ರಾಮಿಂಗ್ ಹೆಡ್ ಆಗಿರುವ ರಾಘವೇಂದ್ರ ಹುಣಸೂರು 'ಜೀ ಕನ್ನಡ' ಚಾನೆಲ್ ಬಿಡುವ ಮನಸು ಮಾಡಿದ್ದಾರೆ ಎನ್ನುವ ಸುದ್ದಿ ಈಗ ಎಲ್ಲೆಡೆ ಹರಿದಾಡಿದೆ.
ಈಗಾಗಲೇ ಕನ್ನಡ ಕಿರುತೆರೆಗೆ ಸಾಕಷ್ಟು ಸೂಪರ್ ಹಿಟ್ ಕಾರ್ಯಕ್ರಮಗಳನ್ನು ನೀಡಿರುವ ಇವರು ಈಗ 'ಜೀ ಕನ್ನಡ' ಬಿಟ್ಟು ಬೇರೆ ವಾಹಿನಿ ಸೇರಿಕೊಳ್ಳುತ್ತಾರೆ ಎನ್ನುವ ಮಾತಿದೆ. ಆದರೆ ಈ ಬಗ್ಗೆ ಸ್ವತಃ ರಾಘವೇಂದ್ರ ಹುಣಸೂರು ನಿಮ್ಮ 'ಫಿಲ್ಮಿ ಬೀಟ್ ಕನ್ನಡ' ದೊಂದಿಗೆ ಮಾತನಾಡಿದ್ದಾರೆ. ಮುಂದೆ ಓದಿ...
'ಸ್ಟಾರ್ ಸುವರ್ಣ'ಗೆ ಹೋಗ್ತಾರಾ.?
'ಜೀ ಕನ್ನಡ' ವಾಹಿನಿಯಲ್ಲಿ ಸದ್ಯ ಬಿಸಿನೆಸ್ ಮತ್ತು ಪ್ರೋಗ್ರಾಮಿಂಗ್ ಹೆಡ್ ಆಗಿ ಕೆಲಸ ಮಾಡುತ್ತಿರುವ ರಾಘವೇಂದ್ರ ಹುಣಸೂರು ಇದೀಗ 'ಸ್ಟಾರ್ ಸುವರ್ಣ' ವಾಹಿನಿಗೆ ಹೋಗ್ತಾರೆ ಎನ್ನುವ ಸುದ್ದಿ ಇದೆ.
ರಾಘವೇಂದ್ರ ಹುಣಸೂರು ಸ್ಪಷ್ಟನೆ
ನೀವು 'ಜೀ ಕನ್ನಡ' ವಾಹಿನಿಯಿಂದ ಹೊರಬರುವ ಸುದ್ದಿ ಇದೆ, ಅದು ನಿಜವೇ..? ಎನ್ನುವ ನಮ್ಮ ಪ್ರಶ್ನೆಗೆ ''ಇಲ್ಲ ಅದೆಲ್ಲ ರೂಮರ್.. ಗಾಸಿಪ್ ಅಷ್ಟೆ'' ಎಂದು ರಾಘವೇಂದ್ರ ಹುಣಸೂರು ಉತ್ತರಿಸಿದರು.
ಆಫರ್ ಬಂದಿವೆ
''ಇತರ ವಾಹಿನಿಯಿಂದ ಆಫರ್ ಬಂದಿರುವುದು ನಿಜ. ಆದರೆ ನಾನು 'ಜೀ ಕನ್ನಡ' ವಾಹಿನಿ ಬಿಡುವ ಬಗ್ಗೆ ಯಾವುದೇ ನಿರ್ಧಾರ ಮಾಡಿಲ್ಲ'' - ರಾಘವೇಂದ್ರ ಹುಣಸೂರು, ಜೀ ಕನ್ನಡ ಪ್ರೋಗ್ರಾಮಿಂಗ್ ಹೆಡ್
ಮಾತುಕತೆ ನಡೆಯುತ್ತಿದೆ
''ಕನ್ನಡದ ಬೇರೆ ಬೇರೆ ಚಾನಲ್ ಗಳಿಂದ ಅವಕಾಶಗಳು ಬಂದಿದೆ. ಅವು ಇನ್ನೂ ಮಾತುಕತೆಯ ಹಂತದಲ್ಲಿದೆ'' - ರಾಘವೇಂದ್ರ ಹುಣಸೂರು, ಜೀ ಕನ್ನಡ ಪ್ರೋಗ್ರಾಮಿಂಗ್ ಹೆಡ್
ಇಲ್ಲಿಯೇ ಮುಂದುವರೆಯುತ್ತೇನೆ
''ಸದ್ಯಕ್ಕೆ ಇಲ್ಲಿಯೇ (ಜೀ ಕನ್ನಡ) ಮುಂದುವರೆಯುತ್ತೇನೆ'' ಎಂದು ಹೇಳಿರುವ ರಾಘವೇಂದ್ರ ಹುಣಸೂರು ಈ ಮೂಲಕ ಎಲ್ಲ ಸುದ್ದಿಗೆ ತೆರೆ ಎಳೆದಿದ್ದಾರೆ.
'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮಕ್ಕೆ ಹಂಸಲೇಖ ಯಾಕೆ ಬರ್ಲಿಲ್ಲ.? ಕಾರಣ ಬಹಿರಂಗ.!
ಟಿ ಆರ್ ಪಿ
ಟಿ ಆರ್ ಪಿ ಯಲ್ಲಿ ಸದ್ಯ ಒಳ್ಳೆಯ ಸ್ಥಾನದಲ್ಲಿ ಇರುವ 'ಜೀ ಕನ್ನಡ' ವಾಹಿನಿಯ ಮಾಸ್ಟರ್ ಬ್ರೇನ್ ರಾಘವೇಂದ್ರ ಹುಣಸೂರು. ಅಕಸ್ಮಾತ್ತಾಗಿ ಅವರು ವಾಹಿನಿಯಿಂದ ಹೊರಗೆ ಬಂದರೆ ಟಿ ಆರ್ ಪಿ ಕಡಿಮೆ ಆದರೂ ಆಗಬಹುದು.
ಕೇಳ್ರಪ್ಪೋ ಕೇಳ್ರಿ, ಜಗ್ಗೇಶ್, ರಕ್ಷಿತಾ, ಭಟ್ರು ಮತ್ತೆ ಒಟ್ಟಿಗೆ ಬರ್ತಿದ್ದಾರೆ.!
ಯಶಸ್ವಿ ಕಾರ್ಯಕ್ರಮಗಳು
'ಜೀ ಕನ್ನಡ' ವಾಹಿನಿಯ ಯಶಸ್ವಿ ಕಾರ್ಯಕ್ರಮಗಳಾದ 'ವೀಕೆಂಡ್ ವಿತ್ ರಮೇಶ್', 'ಡ್ರಾಮಾ ಜೂನಿಯರ್ಸ್', 'ಕಾಮಿಡಿ ಕಿಲಾಡಿಗಳು', 'ಡ್ಯಾನ್ಸ್ ಕರ್ನಾಟಕ ಡ್ಯಾನ್' ಕಾರ್ಯಕ್ರಮಗಳ ಸೂತ್ರಧಾರ ರಾಘವೇಂದ್ರ ಹುಣಸೂರು.
ಸರಿಗಮಪ ಶೋ ನಿಂದ ಹೊರ ನಡೆದ ರಾಜೇಶ್ ಕೃಷ್ಣನ್
ರಾಘವೇಂದ್ರ ಹುಣಸೂರು ಕಾರ್ಯಕ್ರಮಗಳು
ಇನ್ನು ಕನ್ನಡ ಕಿರುತೆರೆಯಲ್ಲಿ ರಾಘವೇಂದ್ರ ಹುಣಸೂರು ಅನೇಕ ಸೂಪರ್ ಹಿಟ್ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಅವುಗಳಲ್ಲಿ 'ಪ್ಯಾಟೆ ಹುಡುಗಿರ ಹಳ್ಳಿ ಲೈಫು', 'ಹಳ್ಳಿ ಹೈದ ಪ್ಯಾಟೆಗೆ ಬಂದ' ಪ್ರಮುಖವಾಗಿವೆ.