'ಜೀ ಕನ್ನಡ' ತೊರೆಯುವ ಸುದ್ದಿ ಬಗ್ಗೆ ರಾಘವೇಂದ್ರ ಹುಣಸೂರು ಹೇಳಿದ್ದೇನು.?
Recommended Video

ಕನ್ನಡದ ಜನಪ್ರಿಯ ವಾಹಿನಿ 'ಜೀ ಕನ್ನಡ'ದ ಪ್ರೋಗ್ರಾಮಿಂಗ್ ಹೆಡ್ ಆಗಿರುವ ರಾಘವೇಂದ್ರ ಹುಣಸೂರು 'ಜೀ ಕನ್ನಡ' ಚಾನೆಲ್ ಬಿಡುವ ಮನಸು ಮಾಡಿದ್ದಾರೆ ಎನ್ನುವ ಸುದ್ದಿ ಈಗ ಎಲ್ಲೆಡೆ ಹರಿದಾಡಿದೆ.
ಈಗಾಗಲೇ ಕನ್ನಡ ಕಿರುತೆರೆಗೆ ಸಾಕಷ್ಟು ಸೂಪರ್ ಹಿಟ್ ಕಾರ್ಯಕ್ರಮಗಳನ್ನು ನೀಡಿರುವ ಇವರು ಈಗ 'ಜೀ ಕನ್ನಡ' ಬಿಟ್ಟು ಬೇರೆ ವಾಹಿನಿ ಸೇರಿಕೊಳ್ಳುತ್ತಾರೆ ಎನ್ನುವ ಮಾತಿದೆ. ಆದರೆ ಈ ಬಗ್ಗೆ ಸ್ವತಃ ರಾಘವೇಂದ್ರ ಹುಣಸೂರು ನಿಮ್ಮ 'ಫಿಲ್ಮಿ ಬೀಟ್ ಕನ್ನಡ' ದೊಂದಿಗೆ ಮಾತನಾಡಿದ್ದಾರೆ. ಮುಂದೆ ಓದಿ...

'ಸ್ಟಾರ್ ಸುವರ್ಣ'ಗೆ ಹೋಗ್ತಾರಾ.?
'ಜೀ ಕನ್ನಡ' ವಾಹಿನಿಯಲ್ಲಿ ಸದ್ಯ ಬಿಸಿನೆಸ್ ಮತ್ತು ಪ್ರೋಗ್ರಾಮಿಂಗ್ ಹೆಡ್ ಆಗಿ ಕೆಲಸ ಮಾಡುತ್ತಿರುವ ರಾಘವೇಂದ್ರ ಹುಣಸೂರು ಇದೀಗ 'ಸ್ಟಾರ್ ಸುವರ್ಣ' ವಾಹಿನಿಗೆ ಹೋಗ್ತಾರೆ ಎನ್ನುವ ಸುದ್ದಿ ಇದೆ.

ರಾಘವೇಂದ್ರ ಹುಣಸೂರು ಸ್ಪಷ್ಟನೆ
ನೀವು 'ಜೀ ಕನ್ನಡ' ವಾಹಿನಿಯಿಂದ ಹೊರಬರುವ ಸುದ್ದಿ ಇದೆ, ಅದು ನಿಜವೇ..? ಎನ್ನುವ ನಮ್ಮ ಪ್ರಶ್ನೆಗೆ ''ಇಲ್ಲ ಅದೆಲ್ಲ ರೂಮರ್.. ಗಾಸಿಪ್ ಅಷ್ಟೆ'' ಎಂದು ರಾಘವೇಂದ್ರ ಹುಣಸೂರು ಉತ್ತರಿಸಿದರು.

ಆಫರ್ ಬಂದಿವೆ
''ಇತರ ವಾಹಿನಿಯಿಂದ ಆಫರ್ ಬಂದಿರುವುದು ನಿಜ. ಆದರೆ ನಾನು 'ಜೀ ಕನ್ನಡ' ವಾಹಿನಿ ಬಿಡುವ ಬಗ್ಗೆ ಯಾವುದೇ ನಿರ್ಧಾರ ಮಾಡಿಲ್ಲ'' - ರಾಘವೇಂದ್ರ ಹುಣಸೂರು, ಜೀ ಕನ್ನಡ ಪ್ರೋಗ್ರಾಮಿಂಗ್ ಹೆಡ್

ಮಾತುಕತೆ ನಡೆಯುತ್ತಿದೆ
''ಕನ್ನಡದ ಬೇರೆ ಬೇರೆ ಚಾನಲ್ ಗಳಿಂದ ಅವಕಾಶಗಳು ಬಂದಿದೆ. ಅವು ಇನ್ನೂ ಮಾತುಕತೆಯ ಹಂತದಲ್ಲಿದೆ'' - ರಾಘವೇಂದ್ರ ಹುಣಸೂರು, ಜೀ ಕನ್ನಡ ಪ್ರೋಗ್ರಾಮಿಂಗ್ ಹೆಡ್

ಇಲ್ಲಿಯೇ ಮುಂದುವರೆಯುತ್ತೇನೆ
''ಸದ್ಯಕ್ಕೆ ಇಲ್ಲಿಯೇ (ಜೀ ಕನ್ನಡ) ಮುಂದುವರೆಯುತ್ತೇನೆ'' ಎಂದು ಹೇಳಿರುವ ರಾಘವೇಂದ್ರ ಹುಣಸೂರು ಈ ಮೂಲಕ ಎಲ್ಲ ಸುದ್ದಿಗೆ ತೆರೆ ಎಳೆದಿದ್ದಾರೆ.

ಟಿ ಆರ್ ಪಿ
ಟಿ ಆರ್ ಪಿ ಯಲ್ಲಿ ಸದ್ಯ ಒಳ್ಳೆಯ ಸ್ಥಾನದಲ್ಲಿ ಇರುವ 'ಜೀ ಕನ್ನಡ' ವಾಹಿನಿಯ ಮಾಸ್ಟರ್ ಬ್ರೇನ್ ರಾಘವೇಂದ್ರ ಹುಣಸೂರು. ಅಕಸ್ಮಾತ್ತಾಗಿ ಅವರು ವಾಹಿನಿಯಿಂದ ಹೊರಗೆ ಬಂದರೆ ಟಿ ಆರ್ ಪಿ ಕಡಿಮೆ ಆದರೂ ಆಗಬಹುದು.

ಯಶಸ್ವಿ ಕಾರ್ಯಕ್ರಮಗಳು
'ಜೀ ಕನ್ನಡ' ವಾಹಿನಿಯ ಯಶಸ್ವಿ ಕಾರ್ಯಕ್ರಮಗಳಾದ 'ವೀಕೆಂಡ್ ವಿತ್ ರಮೇಶ್', 'ಡ್ರಾಮಾ ಜೂನಿಯರ್ಸ್', 'ಕಾಮಿಡಿ ಕಿಲಾಡಿಗಳು', 'ಡ್ಯಾನ್ಸ್ ಕರ್ನಾಟಕ ಡ್ಯಾನ್' ಕಾರ್ಯಕ್ರಮಗಳ ಸೂತ್ರಧಾರ ರಾಘವೇಂದ್ರ ಹುಣಸೂರು.

ರಾಘವೇಂದ್ರ ಹುಣಸೂರು ಕಾರ್ಯಕ್ರಮಗಳು
ಇನ್ನು ಕನ್ನಡ ಕಿರುತೆರೆಯಲ್ಲಿ ರಾಘವೇಂದ್ರ ಹುಣಸೂರು ಅನೇಕ ಸೂಪರ್ ಹಿಟ್ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಅವುಗಳಲ್ಲಿ 'ಪ್ಯಾಟೆ ಹುಡುಗಿರ ಹಳ್ಳಿ ಲೈಫು', 'ಹಳ್ಳಿ ಹೈದ ಪ್ಯಾಟೆಗೆ ಬಂದ' ಪ್ರಮುಖವಾಗಿವೆ.


Click it and Unblock the Notifications











