Don't Miss!
- Lifestyle ಉಪ್ಪು ನೀರಿನಿಂದ ಮುಖ ತೊಳೆದರೆ ಆಗುವ ಲಾಭವೇನು.? ಇದರ ಅನಾನುಕೂಲವೇನು ಗೊತ್ತಾ?
- Finance ಬೆಂಗಳೂರಿಗೆ ಪ್ರತ್ಯೇಕ ನ್ಯಾವಿಗೇಟಿಂಗ್ ಅಪ್ಲಿಕೇಶನ್, ಟೆಕ್ ಕಂಪೆನಿಯೊಂದಿಗೆ ಒಪ್ಪಂದ
- Sports IPL 2024: ಆರ್ಸಿಬಿ ಕಪ್ ಗೆಲ್ಲದಿರಲು ಅತಿಯಾದ ಪಾರ್ಟಿ ಕಾರಣವೇ?; ರೈನಾ ಬಿಚ್ಚಿಟ್ಟ ಸತ್ಯ
- News Bengaluru Heat Wave: ಮಳೆಯ ನಡುವೆ ಮತ್ತೆ ದಾಖಲೆಯ ಗರಿಷ್ಠ ತಾಪಮಾನ: ಶಾಖದ ಅಲೆ ಮುನ್ಸೂಚನೆ
- Automobiles Ola: ಓಲಾದಿಂದ ಕಡಿಮೆ ಬೆಲೆಯ 'ಎಸ್1 ಎಕ್ಸ್' ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ದೊಡ್ಡ ಘೋಷಣೆ.. ಏನದು?
- Technology ನಾಳೆ ವಿವೋದ ಈ ಹೊಸ ಫೋನ್ ಫಸ್ಟ್ ಸೇಲ್!..ಬಜೆಟ್ ಬೆಲೆಗೆ ಲಭ್ಯ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಮರಿ ರಾಕಿಂಗ್ ಸ್ಟಾರ್' ಯಾವಾಗ ಎಂದು ಕೇಳಿದ್ದ ಅಮ್ಮನಿಗೆ ಯಶ್ ಸಿಹಿ ಸುದ್ದಿ
Recommended Video
ರಾಕಿಂಗ್ ಸ್ಟಾರ್ ಯಶ್ ಇತ್ತೀಚಿಗಷ್ಟೆ 'ಕನ್ನಡದ ಕೋಟ್ಯಧಿಪತಿ' ಕಾರ್ಯಕ್ರಮದಲ್ಲಿ ಅತಿಥಿಯಾಗಿ ಆಗಮಿಸಿದ್ದರು. ಅದ್ಭುತವಾಗಿ ಆಟವಾಡಿದ ಯಶ್ 25 ಲಕ್ಷ ಗೆದ್ದುಕೊಂಡು ಹೋದರು.
ಈ ಶೋನಲ್ಲಿ 25 ಲಕ್ಷ ಗೆದ್ದಿದ್ದಕ್ಕಿಂತ ಯಶ್ ಅವರ ತಾಯಿ ಕೇಳಿದ ಪ್ರಶ್ನೆಗೆ ಯಶ್ ಕೊಟ್ಟ ಉತ್ತರವೇ ಹೆಚ್ಚು ಗಮನ ಸೆಳೆಯಿತು. ಹೌದು, ಶೋ ಮಧ್ಯೆ ರಾಕಿಂಗ್ ಸ್ಟಾರ್ ಅವರ ತಾಯಿ, ತಮ್ಮ ಮಗನಿಗೆ ಒಂದು ಪ್ರಶ್ನೆ ಕೇಳಿದ್ದರು. ''ತಾಯಿಯಾಗಿ ಅಲ್ಲದೇ ಒಬ್ಬ ಅಭಿಮಾನಿಯಾಗಿ ಕೇಳ್ತಿದ್ದೀನಿ, ನಾನು ಅಜ್ಜಿ ಆಗೋದು ಯಾವಾಗ...? ''ಎಂದಿದ್ದರು.
'ನಾನು ಅಜ್ಜಿ ಆಗೋದು ಯಾವಾಗ' ಎಂದು ಕೇಳಿದ ಯಶ್ ತಾಯಿ.? ಯಶ್ ಏನಂದ್ರು.?
ಈ ಪ್ರಶ್ನೆ ಕೇಳಿ ಶಾಕ್ ಆದ 'ರಾಜಾಹುಲಿ' ತಮ್ಮ ಮನದಲ್ಲಿ ಮಾತುಗಳನ್ನ ಅಭಿಮಾನಿಗಳ ಮುಂದಿಟ್ಟರು. ಬಹುಶಃ ಈ ಉತ್ತರ ಕೇಳಿ ಯಶ್ ಅಭಿಮಾನಿಗಳು ಮತ್ತು ಅವರ ತಾಯಿ ಫುಲ್ ಹ್ಯಾಪಿ ಆಗಿರ್ತಾರೆ. ಅಷ್ಟಕ್ಕೂ, ಯಶ್ ಕೊಟ್ಟ ಉತ್ತರವೇನು.? ಮುಂದೆ ಓದಿ.....
ಯಶ್ ಪ್ಲಾನಿಂಗ್ ಏನು.?
ಅಮ್ಮನ ಪ್ರಶ್ನೆಗೆ ಉತ್ತರ ಕೊಟ್ಟ 'ರಾಜಾಹುಲಿ, ''ನಾವಿಬ್ಬರೂ ಏಳು ವರ್ಷ ರಿಲೇಷನ್ ಶಿಪ್ ನಲ್ಲಿದ್ವಿ. ಆಗ ಕಲಾವಿದರು. ಪಬ್ಲಿಕ್ ಆಗಿ ಎಲ್ಲೂ ಓಡಾಡೋಕೆ ಆಗಿಲ್ಲ. ಏಲ್ಲೂ ಹೋಗೋಕು ಆಗಲ್ಲಿಲ್ಲ. ಇಬ್ಬರಿಗೂ ಘನತೆ ಕಾಪಾಡಿಕೊಳ್ಳಬೇಕು ಎಂಬುದು ಮನಸ್ಸಲ್ಲಿತ್ತು. ನಮ್ಮ ಮನೆಯವರ ಜೊತೆ, ಕುಟುಂದವರು ಜೊತೆ ಇರ್ತಿದ್ವಿ'' - ಯಶ್
'ಕನ್ನಡದ ಕೋಟ್ಯಧಿಪತಿ'ಯಲ್ಲಿ ದಾಖಲೆ ಬರೆದ ರಾಕಿಂಗ್ ಸ್ಟಾರ್
ಎರಡು ವರ್ಷ ಆರಾಮಾಗಿರೋಣ
''ಆದ್ರೆ, ಮದುವೆ ಆದ್ಮೇಲೆ ರಾಜಾರೋಷವಾಗಿ ಎಲ್ಲಾ ಕಡೆ ಸುತ್ತಬಹುದು, ಓಡಾಡಬಹುದು ಎಂಬ ಧೈರ್ಯ ಬಂತು. ಆಗ ಇಬ್ಬರಲ್ಲೂ ಒಂದು ಚರ್ಚೆ ಆಯ್ತು. ಎರಡು ವರ್ಷ ಆರಾಮಾಗಿ ಇರೋಣ. ಸುತ್ತಾಡೋಣ. ಆಮೇಲೆ ಪ್ಲಾನ್ ಮಾಡೋಣ ಅಂತ ನಿರ್ಧಾರ ಮಾಡಿದ್ವಿ'' - ಯಶ್
'ಕನ್ನಡದ ಕೋಟ್ಯಧಿಪತಿ' ಶೋ ವಿರುದ್ಧ ಪ್ರತಾಪ್ ಸಿಂಹ ಪತ್ನಿ ಅಸಮಾಧಾನ
ಒತ್ತಡ ಹೆಚ್ಚಾಗುತ್ತಿದೆ
''ಈಗ ನನಗೆ ಒತ್ತಡವಿದೆ. ನನ್ನ ತಾಯಿ, ಸಂಬಂಧಿಕರು ಎಲ್ಲರು ಕೇಳ್ತಿದ್ದಾರೆ. ಆದ್ರೂ ನನಗೆ ಸಂಕೋಚ. ಎಲ್ಲೂ ಚರ್ಚೆ ಮಾಡೋಕು ಆಗಲ್ಲ. ಹೋಗ್ಲಿ ಬಿಡಿ, ನಮ್ಮಮ್ಮ ಸರಿಯಾದ ಜಾಗದಲ್ಲೇ ಕೇಳಿದ್ದಾರೆ.....ಆದಷ್ಟೂ ಬೇಗ....ಸದ್ಯಕ್ಕೆ ಅಷ್ಟೇ ಹೇಳೋದು...''ಎಂದು ಯಶ್ ನಕ್ಕರು.
ಮದುವೆ ಆಗಿ ಒಂದೂವರೆ ವರ್ಷ
ಅಂದ್ಹಾಗೆ, ನಟ ಯಶ್ ಮತ್ತು ರಾಧಿಕಾ ಪಂಡಿತ್ ಮದುವೆ ಆಗಿ ಒಂದೂವರೆ ವರ್ಷ ಆಗಿದೆ. 2016ರ ಡಿಸೆಂಬರ್ 9 ರಂದು 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಗೋವಾದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಈ ಜೋಡಿ ಬೆಂಗಳೂರಿನಲ್ಲಿ ಮದುವೆ ಆಗಿದ್ದರು.