Don't Miss!
- News ಹಾಸನದ ಬೀದಿಗಳಲ್ಲಿ ಚೆಲ್ಲಾಡುತ್ತಿರುವ ಪೆನ್ಡ್ರೈವ್ ಬಗ್ಗೆ ಹೇಳಿ? ಹೆಚ್ಡಿ ಕುಮಾರಸ್ವಾಮಿಗೆ ಕಾಂಗ್ರೆಸ್ ಪ್ರಶ್ನೆ
- Sports IPL 2024: ಹೈದರಾಬಾದ್ ಅಂಗಳದಲ್ಲಿ ಗೆಲ್ಲುವುದೆ ಆರ್ಸಿಬಿ: ಟಾಸ್ ವರದಿ ಹೀಗಿದೆ
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Lifestyle ಎಲೆಕೋಸಿಗೆ ಕೆಮಿಕಲ್ ಮಿಶ್ರಣ ಮಾಡ್ತಾರೆ ಹುಷಾರ್..! ವಿಡಿಯೋ ವೈರಲ್..!
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಕನ್ನಡದ ಕೋಟ್ಯಾಧಿಪತಿ' ಆಗ್ತಾರ ರಾಕಿಂಗ್ ಸ್ಟಾರ್ ಯಶ್ !
Recommended Video
ಕನ್ನಡ ಕಿರುತೆರೆಯ ಜನಪ್ರಿಯ ಕಾರ್ಯಕ್ರಮಗಳ ಪೈಕಿ 'ಕನ್ನಡದ ಕೋಟ್ಯಾಧಿಪತಿ' ಕೂಡ ಒಂದು. ಎರಡು ಯಶಸ್ವಿ ಸೀಸನ್ ಬಳಿಕ ಈ ಕಾರ್ಯಕ್ರಮ ಮತ್ತೆ ಈಗ ಬರಲಿದೆ ಎನ್ನುವ ಸುದ್ದಿ ಕೆಲ ದಿನಗಳಿಂದ ಹರಿದಾಡಿತ್ತು.
ವಿಶೇಷ ಅಂದರೆ ನಟ ಪುನೀತ್ ರಾಜ್ ಕುಮಾರ್ ಬದಲು ಈ ಬಾರಿ ಯಶ್ ಸಾರಥ್ಯದಲ್ಲಿ 'ಕನ್ನಡದ ಕೋಟ್ಯಾಧಿಪತಿ' ಕಾರ್ಯಕ್ರಮ ಬರಲಿದೆ ಎನ್ನುವ ಗುಸು ಗುಸು ಕೇಳಿ ಬಂದಿತ್ತು. ಆದರೆ ಈ ಬಗ್ಗೆ ಸ್ವತಃ ಯಶ್ ಇದೀಗ ಮಾತನಾಡಿದ್ದಾರೆ. 'ಕನ್ನಡದ ಕೋಟ್ಯಾಧಿಪತಿ'ಗೆ ತಮಗೆ ಆಫರ್ ಬಂದಿರುವ ವಿಷಯದ ಬಗ್ಗೆ ಯಶ್ ಸ್ಪಷ್ಟಪಡಿಸಿದ್ದಾರೆ. ಮುಂದೆ ಓದಿ...
'ಕನ್ನಡದ ಕೋಟ್ಯಾಧಿಪತಿ' ಬಗ್ಗೆ ಯಶ್ ಮಾತು
ನಟ ಯಶ್ ಇದೀಗ 'ಕನ್ನಡ ಕೋಟ್ಯಾಧಿಪತಿ' ನಿರೂಪಣೆ ಮಾಡುವ ಬಗ್ಗೆ ಇದ್ದ ಎಲ್ಲ ಗಾಸಿಪ್ ಗಳನ್ನು ನಿವಾರಿಸಿದ್ದಾರೆ.
ಆಫರ್ ಬಂದಿದ್ದು ನಿಜ
''ಕನ್ನಡದ ಕೋಟ್ಯಾಧಿಪತಿ' ಕಾರ್ಯಕ್ರಮ ನಿರೂಪಣೆಗಾಗಿ ಸುವರ್ಣ ವಾಹಿನಿ ಆಫರ್ ನೀಡಿದ್ದು ನಿಜ'' - ಯಶ್, ನಟ
ಇನ್ನು ಒಪ್ಪಿಕೊಂಡಿಲ್ಲ
''ಆದರೆ ಸುವರ್ಣ ವಾಹಿನಿ ಕಡೆಯಿಂದ ಬಂದಿರುವ ಆಫರ್ ಅನ್ನು ನಾನು ಇನ್ನು ಒಪ್ಪಿಕೊಂಡಿಲ್ಲ.'' - ಯಶ್, ನಟ
ಯಶ್ 'KGF' ಅಡ್ಡದಿಂದ ಹೊರಬಂದ 'ಪಾರ್ಟ್-2' ಕಥೆ ಇದು.!
ಮುಂದೆ ಗೊತ್ತಿಲ್ಲ
''ಸದ್ಯಕ್ಕೆ ಕಾರ್ಯಕ್ರಮವನ್ನು ನಾನು ಒಪ್ಪಿಕೊಂಡಿಲ್ಲ. ಆದರೆ ಮುಂದಿನ ದಿನದಲ್ಲಿ ಏನಾಗುತ್ತದೆ ಎನ್ನುವುದು ಗೊತ್ತಿಲ್ಲ.'' - ಯಶ್, ನಟ
ಆಹಾ... ಯಶ್ ಗೆ ಎಂಥಾ ಕೆಲಸ ಕೊಟ್ರಮ್ಮ ಹುಡುಗೀರಾ.!
ಪುನೀತ್ ಬದಲು ಯಶ್
ಪುನೀತ್ ಸದ್ಯ ಕಲರ್ಸ್ ಕನ್ನಡ ವಾಹಿನಿಗೆ 'ಫ್ಯಾಮಿಲಿ ಪವರ್' ಎಂಬ ಹೊಸ ಕಾರ್ಯಕ್ರಮವನ್ನು ಮಾಡುತ್ತಿದ್ದು, ಇದರಿಂದ ಯಶ್ ಗೆ 'ಕನ್ನಡ ಕೋಟ್ಯಾಧಿಪತಿ'ಯ ಆಫರ್ ನೀಡಲಾಗಿದೆ.
ಮೌನವಾಗಿದ್ದ ಯಶ್-ಯೋಗಿಯ ಸ್ನೇಹ ಮತ್ತೆ ಮಾತಾಡಿದೆ.!
ಯಶ್ ಒಪ್ಪುತ್ತಾರಾ
ಸದ್ಯ ಯಶ್ ತಮ್ಮ ಮಹತ್ವಾಕಾಂಕ್ಷೆಯ 'ಕೆ.ಜಿ.ಎಫ್' ಸಿನಿಮಾದಲ್ಲಿ ಬಿಜಿ ಇದ್ದು, ಇದರೊಂದಿಗೆ 'ಕನ್ನಡ ಕೋಟ್ಯಾಧಿಪತಿ' ಕಾರ್ಯಕ್ರಮವನ್ನು ನಿರೂಪಣೆ ಮಾಡುತ್ತಾರಾ ಎನ್ನುವುದು ದೊಡ್ಡ ಪ್ರಶ್ನೆಯಾಗಿದೆ.