Don't Miss!
- Finance Bengaluru Suburban Rail Project: ದೊಡ್ಡಜಾಲದಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ರೈಲು ಸಂಪರ್ಕ, ವಿವರ
- Automobiles Maruti: ಜಪಾನ್ನಲ್ಲಿ ಗರಿಷ್ಟ ಗುಣಮಟ್ಟದ ಸ್ವಿಫ್ಟ್ ಕಾರು! ಭಾರತಕ್ಕೆ ಮಾತ್ರ ಕಳಪೆ ಗುಣಮಟ್ಟ ಏಕೆ?
- News ನಂಬರ್ ಪ್ಲೇಟ್ ವಿಚಾರದಲ್ಲಿ ವಾಹನ ಮಾಲೀಕರೇ ಈ ತಪ್ಪು ಮಾಡಬೇಡಿ!
- Technology Jio: ಅಗ್ಗದ ಜಿಯೋ ಸಿನಿಮಾ ಪ್ರೀಮಿಯಂ ಚಂದಾದಾರಿಕೆ ಘೋಷಣೆ! 29 ರೂ.ಗಳಿಂದ ಪ್ರಾರಂಭ..
- Lifestyle ಖುಲಾಯಿಸಿತು ಅದೃಷ್ಟ: ಫ್ಯಾಂಟಸಿ ಗೇಮ್ನಲ್ಲಿ ₹1.5 ಕೋಟಿ ಗೆದ್ದ ಮೆಕ್ಯಾನಿಕ್..!
- Sports IPL 2024: ಸಿಕ್ಸ್ ಹೊಡೆದು ತಪ್ಪಾಯ್ತು ಎಂದಿದ್ದೇಕೆ ರಿಷಬ್ ಪಂತ್ ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅನಿತಾ ಕುಮಾರಸ್ವಾಮಿ ಪಾತ್ರದಲ್ಲಿ ನಟಿ ಭವ್ಯಾ
ಇಷ್ಟು ದಿನ ರಾಜಕೀಯ ಕ್ಷೇತ್ರದಲ್ಲಿ ಬಿಜಿಯಾಗಿದ್ದ ಅನಿತಾ ಅವರು ಇದೇ ಮೊದಲ ಬಾರಿಗೆ ತಮ್ಮದೇ ಕಥೆಗೆ ಪೆನ್ನು ಪುಸ್ತಕ ಹಿಡಿದು ಕಥೆ ಬರೆದಿದ್ದಾರೆ. ಈ ಧಾರಾವಾಹಿ ಹೆಸರು 'ಯಶೋಧರಾ ನೆಕ್ಸ್ಟ್ ಸಿಎಂ'. ಜನವರಿ 28ರಿಂದ ಈ ಧಾರಾವಾಹಿ ಪ್ರಸಾರವಾಗಲಿದೆ.
ಈ ವಿಭಿನ್ನ ಧಾರಾವಾಹಿಗೆ ರಂಗನಾಥ್ ಪಾರ್ಥ ಅವರು ಆಕ್ಷನ್ ಕಟ್ ಹೇಳಿದ್ದಾರೆ. ಮಹಿಳೆಯರು ಹಾಗೂ ರೈತರು ಎದುರಿಸುತ್ತಿರುವ ಸಮಸ್ಯೆಗಳೇ ಈ ಪೊಲಿಟಿಕಲ್ ಥ್ರಿಲ್ಲರ್ ಧಾರಾವಾಹಿಯ ಕಥಾವಸ್ತು. ಒಟ್ಟಿನಲ್ಲಿ ಈ ವಿಭಿನ್ನ ಕಥಾನಕ ತಮ್ಮ ವಾಹಿನಿಯ ಪ್ರೇಕ್ಷಕರಿಗೆ ಖಂಡಿತ ಇಷ್ಟವಾಗುತ್ತದೆ ಎಂಬ ವಿಶ್ವಾಸದಲ್ಲಿದ್ದಾರೆ ಕ್ರಿಯೇಟಿವ್ ಹೆಡ್ ರಾಜೇಶ್.
ಸುದೀರ್ಘ ಸಮಯದ ವಿರಾಮದ ಬಳಿಕ ನಟಿ ಭವ್ಯಾ ಅವರು ಈ ಧಾರಾವಾಹಿಯಲ್ಲಿ ಪ್ರಮುಖ ಪಾತ್ರ ಪೋಷಿಸಿದ್ದಾರೆ. ಅನಿತಾ ಅವರ ರಾಜಕೀಯ, ಸಾಮಾಜಿಕ ಅನುಭವಗಳ ಸಾರವೇ ಇಲ್ಲಿ ಕಥೆಯಾಗಿ ಹೊರಹೊಮ್ಮಿದೆ.
ಆದರೆ ಭವ್ಯಾ ಅವರ ಪಾತ್ರ ನಿಜಕ್ಕೂ ಅನಿತಾ ಕುಮಾರಸ್ವಾಮಿ ಅವರದೆ? ಎಂಬ ಪ್ರಶ್ನೆಗೆ ಸದ್ಯಕ್ಕೆ ನಿಖರ ಉತ್ತರವಿಲ್ಲ. ಧಾರಾವಾಹಿ ಪ್ರಸಾರವಾದ ಬಳಿಕವಷ್ಟೇ ಗೊತ್ತಾಗಬಹುದು. ಏತನ್ಮಧ್ಯೆ ಅನಿತಾ ಅವರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತಾವು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಯುವುದಾಗಿ ಘೋಷಿಸಿರುವುದು ಗೊತ್ತೇ ಇದೆ. (ಒನ್ಇಂಡಿಯಾ ಕನ್ನಡ)