Brahmagantu: ಅವಮಾನಕ್ಕೆ ಉತ್ತರ ಕೊಡಲು ಬಂದಳು ದಿಶಾ; ಸೌಂದರ್ಯಗೆ ಕಾದಿದೆ ಬಿಗ್ ಶಾಕ್…
ಜೀ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿ 'ಬ್ರಹ್ಮಗಂಟು' ಈಗ ಕುತೂಹಲಕಾರಿ ಘಟ್ಟಕ್ಕೆ ಬಂದು ತಲುಪಿದೆ. ಇಷ್ಟು ದಿನ ಸೌಂದರ್ಯ ಆಟಕ್ಕೆ ಬೆದರಿದ್ದ ಕುಟುಂಬಕ್ಕೆ ಈಗ ಹೊಸ ಆನೆಬಲ ಬಂದಿದೆ. ಹೌದು, ದಿಶಾಳ ಎಂಟ್ರಿ ಇಡೀ ಮನೆಯ ಚಿತ್ರಣವನ್ನೇ ಬದಲಿಸಿದೆ.
ಸದ್ಯ ಬಿಡುಗಡೆಯಾಗಿರುವ ಮಹಾಸಂಚಿಕೆಯ ಪ್ರೋಮೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ ಅಭಿಮಾನಿಗಳು ದಿಶಾಳ ಧೈರ್ಯಕ್ಕೆ ಫಿದಾ ಆಗಿದ್ದಾರೆ. ಮನೆಯಲ್ಲಿ ಸೌಂದರ್ಯ ಇಟ್ಟ ಪ್ರತಿ ಹೆಜ್ಜೆಗೂ ದಿಶಾ ಈಗ ಬ್ರೇಕ್ ಹಾಕುತ್ತಿದ್ದಾಳೆ.

ಅವಮಾನ ಎದುರಿಸಿದ ಜಾಗದಲ್ಲೇ ಗೌರವ ಪಡೆಯಲು ದಿಶಾ ಸಜ್ಜಾಗಿದ್ದಾಳೆ. ಈ ಮಹಾಸಂಚಿಕೆಯಲ್ಲಿ ನಡೆಯಲಿರುವ ಹೈವೋಲ್ಟೇಜ್ ಡ್ರಾಮಾ ಹೇಗಿರಲಿದೆ ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ. ಇಂದಿನ ರಾತ್ರಿ 10 ರಿಂದ 11 ಗಂಟೆಯವರೆಗೆ ವಿಶೇಷ ಸಂಚಿಕೆ ಪ್ರಸಾರವಾಗಲಿದೆ.
ಸೌಂದರ್ಯ ಸವಾಲಿಗೆ ದಿಶಾ ತಿರುಗೇಟು...
ಪ್ರೋಮೋದ ಆರಂಭದಲ್ಲಿ ಸೌಂದರ್ಯ ಮತ್ತು ದಿಶಾ ನಡುವಿನ ಮಾತಿನ ಚಕಮಕಿ ಜೋರಾಗಿದೆ. ಚೀರು ಬಂದು ನಿನ್ನನ್ನು ತನ್ನ ರೂಮಿಗೆ ಕರೆದುಕೊಂಡು ಹೋಗುವವರೆಗೂ ನಾನು ಇಲ್ಲಿಂದ ಕದಲುವುದಿಲ್ಲ ಎಂದು ಸೌಂದರ್ಯ ಶಪಥ ಮಾಡುತ್ತಾಳೆ. ಮಳೆಯಲ್ಲೇ ನೆನೆಯುತ್ತಾ ನಿಂತಿರುವ ಸೌಂದರ್ಯಳ ಛಲ ನಿದ್ದೆ ಗೆಡಿಸಿದೆ. ಇಷ್ಟು ದಿನ ತಾನು ಹೇಳಿದ್ದೇ ಆಟ ಎಂದುಕೊಂಡಿದ್ದ ಸೌಂದರ್ಯಗೆ ಈಗ ದಿಶಾ ಸರಿಯಾದ ಎದುರಾಳಿಯಾಗಿ ನಿಂತಿದ್ದಾಳೆ.
ದಂಪತಿಗಳಾಗಿ ಮನೆಗೆ ಬಂದ ದಿಶಾ-ಚಿರು...
ದಿಶಾಳ ಪಟ್ಟು ಕೊನೆಗೂ ಗೆದ್ದಿದೆ. ಸೌಂದರ್ಯ ಹಾಕಿದ ಎಲ್ಲಾ ಪ್ಲಾನ್ ಉಲ್ಟಾ ಹೊಡೆದಿದೆ. ಚೀರು ಮತ್ತು ದಿಶಾ ಇಬ್ಬರೂ ದಂಪತಿಗಳಾಗಿ ಮನೆ ಒಳಗೆ ಬರುವ ದೃಶ್ಯ ಪ್ರೋಮೋದಲ್ಲಿದೆ. "ತುಂಬಾ ದಿವಸ ಇಬ್ಬರೂ ಒಟ್ಟಿಗೆ ಮನೆ ಒಳಗೆ ಬರಬೇಕು" ಎಂಬ ಡೈಲಾಗ್ ಕೇಳಿಬರುತ್ತಿದೆ. ಇದು ಸೌಂದರ್ಯಗೆ ಆಗಿರುವ ಮೊದಲ ಸೋಲು ಎನ್ನಬಹುದು. ಮನೆಯವರೆಲ್ಲರೂ ದಿಶಾಳನ್ನು ಸ್ವಾಗತಿಸಲು ಸಿದ್ಧರಾಗಿ ನಿಂತಿದ್ದಾರೆ.
ಗೃಹಪ್ರವೇಶ ಮಾಡಿದ ನವವಧು...
ಸಾಂಪ್ರದಾಯಿಕವಾಗಿ ಅಕ್ಕಿ ತುಂಬಿದ ಸೇರನ್ನು ಕಾಲಿನಿಂದ ತಳ್ಳಿ ದಿಶಾ ಮನೆ ಒಳಗೆ ಪ್ರವೇಶಿಸುತ್ತಾಳೆ. ಕೆಂಪು ಮತ್ತು ನೇರಳೆ ಬಣ್ಣದ ರೇಷ್ಮೆ ಸೀರೆಯಲ್ಲಿ ದಿಶಾ ದೇವತೆಯಂತೆ ಕಂಗೊಳಿಸುತ್ತಿದ್ದಾಳೆ. ಚೀರು ಕೂಡ ಸಾಂಪ್ರದಾಯಿಕ ಪಂಚೆ ಮತ್ತು ಶರ್ಟ್ ಧರಿಸಿ ದಿಶಾ ಜೊತೆ ಹೆಜ್ಜೆ ಹಾಕುತ್ತಿದ್ದಾನೆ. ಈ ದೃಶ್ಯವು ಅಭಿಮಾನಿಗಳಿಗೆ ಬಹಳ ಖುಷಿ ನೀಡಿದೆ. ಇಷ್ಟು ದಿನ ಅನುಭವಿಸಿದ ಕಷ್ಟಕ್ಕೆ ಕೊನೆಗೂ ಫಲ ಸಿಕ್ಕಂತಾಗಿದೆ.
ಸೌಂದರ್ಯಗೆ ಬಿಗ್ ಶಾಕ್...
ಮನೆಗೆ ಬಂದ ಮೇಲೆ ದಿಶಾ ಸುಮ್ಮನೆ ಕೂರುವವಳಲ್ಲ. ಅವಳು ಡೈನಿಂಗ್ ಟೇಬಲ್ ಬಳಿ ಸೌಂದರ್ಯನ ಸೀಟನ್ನೇ ಕಸಿದುಕೊಂಡಿದ್ದಾಳೆ. "ದಿಸ್ ಈಸ್ ಮೈ ಸೀಟ್" ಎಂದು ಅಧಿಕಾರದಿಂದ ಹೇಳುವ ಮೂಲಕ ಸೌಂದರ್ಯಗೆ ಅವಮಾನ ಮಾಡಿದ್ದಾಳೆ. ಸೌಂದರ್ಯ ಮುಖ ಸಣ್ಣದಾಗಿದ್ದು, ದಿಶಾ ಅಲ್ಲಿ ಕೂತು ರಾಜಾತಿಥ್ಯ ಸವಿಯುತ್ತಿದ್ದಾಳೆ. ತಟ್ಟೆಯಲ್ಲಿರುವ ಸಿಹಿಯನ್ನು ತಿನ್ನುತ್ತಾ ದಿಶಾ ನೀಡುವ ಎಕ್ಸ್ಪ್ರೆಶನ್ ಸಖತ್ ಕ್ಯೂಟ್ ಆಗಿದೆ.
ಬದಲಾಗಲಿದೆಯೇ ಬ್ರಹ್ಮಗಂಟು ಕಥೆ?
ಈ ಮಹಾಸಂಚಿಕೆಯು ಧಾರಾವಾಹಿಯ ತಿರುವು ಎನ್ನಲಾಗುತ್ತಿದೆ. ದಿಶಾ ಮನೆಯ ಅಧಿಕಾರ ಕೈಗೆತ್ತಿಕೊಂಡ ಮೇಲೆ ಸೌಂದರ್ಯನ ಗತಿ ಏನಾಗಲಿದೆ? ಸೌಂದರ್ಯ ಸುಮ್ಮನೆ ಕೂರುತ್ತಾಳಾ ಅಥವಾ ಮತ್ತೆ ಪ್ಲಾನ್ ಮಾಡುತ್ತಾಳಾ? ಚೀರು ತನ್ನ ಹೆಂಡತಿಗೆ ಹೇಗೆ ಸಾಥ್ ಕೊಡುತ್ತಾನೆ? ಈ ಎಲ್ಲಾ ಪ್ರಶ್ನೆಗಳಿಗೆ ಇಂದಿನ ಸಂಚಿಕೆಯಲ್ಲಿ ಉತ್ತರ ಸಿಗಲಿದೆ. ತಪ್ಪದೇ ರಾತ್ರಿ 10 ಗಂಟೆಗೆ ಜೀ ಕನ್ನಡ ನೋಡಿ.


Click it and Unblock the Notifications











