Don't Miss!
- News ಇಂದು ಕರ್ನಾಟಕಕ್ಕೆ ಮೋದಿ :11 ಪ್ರಶ್ನೆಗಳ ಬಾಣ ಬಿಟ್ಟ ಸಿದ್ದರಾಮಯ್ಯ
- Automobiles ಸಣ್ಣ ಕುಟುಂಬಗಳಿಗೆ ಬೆಸ್ಟ್ ಕಾರು... 5.36 ಲಕ್ಷ ರೂ. ಬೆಲೆ... 34 ಕಿ.ಮೀ ಮೈಲೇಜ್!
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Technology ಒಪ್ಪೋ ಸಂಸ್ಥೆಯ ಈ ಫೋನ್ ಬೆಲೆಯಲ್ಲಿ ಭರ್ಜರಿ ಇಳಿಕೆ; ಆಫರ್ಗೆ ಗ್ರಾಹಕರು ಫಿದಾ!
- Sports ಐಪಿಎಲ್ನಿಂದ ದೂರವುಳಿದಿದ್ದ ಟೀಮ್ ಇಂಡಿಯಾ ವೇಗಿ ಟಿ20 ವಿಶ್ವಕಪ್ ಆಡುತ್ತಾರಾ?: ಆಟಗಾರ ಹೇಳಿದ್ದೇನು?
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಕ್ಕ ತಂಗಿ ಬಾಂಧವ್ಯದ ಹೊಸ ಕಥನ 'ಮೇಘ ಮಯೂರಿ'
ಗೋಕರ್ಣದ ಸಿಂಪಲ್ ಹುಡುಗಿ ಮೇಘಾ ಮತ್ತು ಬೆಂಗಳೂರಿನ ಡಿಂಪಲ್ ಹುಡುಗಿ ಮಯೂರಿ, ಈ ಮೂಲಕ ಕನ್ನಡಿಗರ ಮನೆಯೊಳಗೆ ಹೆಜ್ಜೆಯಿಡಲು ಸಿದ್ಧರಾಗಿದ್ದಾರೆ. ಈಗಾಗಲೇ ಕೆಲವು ಪಾತ್ರಗಳಲ್ಲಿ ಕ್ಯಾಮರಾ ಎದುರಿಸಿರುವ ಅಮೃತಾ ರಾಮಮೂರ್ತಿ ಮಯೂರಿಯಾಗಿ, ಹರ್ಷಿತಾ ಮೇಘಾಳಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
'ರಾಮಾಚಾರಿ', 'ಯುಗಪುರುಷ' ಮೊದಲಾದ ಸಿನಿಮಾಗಳಲ್ಲಿ ನಟಿಸಿರುವ ಹಿರಿಯ ನಟಿ ಜ್ಯೋತಿ, ಮೇಘಾಳ ಅಮ್ಮ ಸುಮತಿಯಾಗಿ ಪ್ರಮುಖ ಪಾತ್ರದಲ್ಲಿದ್ದಾರೆ. 'ಗುಪ್ತಗಾಮಿನಿ' ಧಾರಾವಾಹಿ ಮೂಲಕ ಅಪಾರ ಜನಪ್ರಿಯತೆ ಪಡೆದಿದ್ದ ಮಲ್ಲಿಕಾ ಪ್ರಸಾದ್, ಮಯೂರಿಯ ಅಮ್ಮ ಸ್ವಾತಿಯಾಗಿ ಬರುತ್ತಿರುವುದು ಇನ್ನೊಂದು ವಿಶೇಷ.
'ಕೂರ್ಗ್ ಕ್ರಿಯೇಷನ್ಸ್' ಮಾಲೀಕ ಗಣೇಶ್, ಈ ಧಾರಾವಾಹಿ ಮೂಲಕ ಮೊದಲ ಬಾರಿಗೆ ನಿರ್ಮಾಪಕರಾಗಿದ್ದಾರೆ. ಬೆಂಗಳೂರಿನ ಎರಡು ಕಾಲೇಜುಗಳ ಹುಡುಗಿಯರ ಗುಂಪು, ಮೇಘ ಮತ್ತು ಮಯೂರಿಯ ತಂಡವಾಗಿ ನಡೆಸುವ ಸಂವಾದದ ಮೂಲಕ, ಈ ಧಾರಾವಾಹಿ ಉದ್ಘಾಟನೆಗೊಳ್ಳುತ್ತಿದೆ.
'ಯುವ ಸಮೂಹಕ್ಕೆ ಸಂಬಂಧಿಸಿದ ಒಳಿತು ಕೆಡುಕುಗಳ ಮೇಲೆ ಈ ಧಾರಾವಾಹಿ ಬೆಳಕು ಚೆಲ್ಲಲಿದೆ. ಜತೆಗೆ ಸ್ವಾತಿಯ ಪಾತ್ರದ ಮೂಲಕ ಕ್ಯಾನ್ಸರ್ ಗೆ ಸಂಬಂಧಿಸಿ ಜಾಗೃತಿ ಮೂಡಿಸುವ ಕೆಲಸವನ್ನೂ ನಾವು ಮಾಡುತ್ತಿದ್ದೇವೆ' ಎನ್ನುತ್ತಾರೆ ಜೀ ಟಿವಿ ಸಮೂಹದ ಎಕ್ಸಿಕ್ಯುಟಿವ್ ವೈಸ್ ಪ್ರೆಸಿಡೆಂಟ್ ಡಾ.ಎಂ.ಗೌತಮ್ ಮಾಚಯ್ಯ.
ಮೇಘ ಮಯೂರಿಯ ಕಥೆ: ಪರಸ್ಪರ ತುಂಬಾ ಪ್ರೀತಿಸುವ ಸ್ವಾತಿ (40) ಮತ್ತು ಸುಮತಿ (45) ಎಂಬ ಇಬ್ಬರು ಅಕ್ಕ ತಂಗಿಯರ ಮಕ್ಕಳು ಮೇಘ ಮತ್ತು ಮಯೂರಿ. ಬೆಂಗಳೂರಿನ ಜಯನಗರದ ಫೋರ್ತ್ ಬ್ಲಾಕ್ ನ ಹುಡುಗಿ ಮಯೂರಿ (19) ಶ್ರೀಮಂತಿಕೆಯಲ್ಲಿ ಸ್ವತಂತ್ರವಾಗಿ ಬೆಳೆದವಳು. ಅವಳ ಅಪ್ಪ ಅವಿನಾಶ್ (43) ದುಬೈಯಲ್ಲಿ ವ್ಯಾಪಾರ ವಹಿವಾಟು ಹೊಂದಿದ್ದಾರೆ. ಹಾಗಾಗಿ ಬೆಂಗಳೂರಿನಲ್ಲಿ ತನ್ನ ಜತೆಗಿರುವ ಅಮ್ಮ ಸ್ವಾತಿ ಎಂದರೆ ಮಯೂರಿಗೆ ಎಲ್ಲಿಲ್ಲದ ಪ್ರೀತಿ.
ಬೆಂಗಳೂರಿನಲ್ಲಿರುವ ಸ್ವಾತಿ ತನ್ನೊಳಗೆ ಗುಟ್ಟೊಂದನ್ನು ಅಡಗಿಸಿಕೊಂಡಿದ್ದಾಳೆ. ಅದರ ಕಾರಣ ಗಂಡ ಅವಿನಾಶ್ ಗೆ ತಿಳಿದಿದ್ದರೂ ಎಲ್ಲ ಕೈಮೀರಿ ಹೋಗಿದೆ. ದುಬೈಯಿಂದ ಬೆಂಗಳೂರು ಮನೆಗೆ ಬಂದಿದ್ದಾನೆ. ಆದರೆ ಅಪ್ಪ-ಅಮ್ಮ ಇಬ್ಬರೂ ಈ ವಿಷಯವನ್ನು ಮಗಳು ಮಯೂರಿಯಿಂದ ಮುಚ್ಚಿಟ್ಟಿದ್ದಾರೆ.
ಗೋಕರ್ಣದಿಂದ ಅಕ್ಕ ಸುಮತಿಯನ್ನು ಕರೆಸಿಕೊಂಡ ಸ್ವಾತಿ, ತನ್ನ ಸಾವಿನ ಗುಟ್ಟು ಹೇಳಿ, ತನ್ನ ಜೀವಕ್ಕೇನಾದರೂ ಅಪಾಯವಾದರೆ, ಮಗಳು ಮಯೂರಿಯ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕೆಂದು ಅಕ್ಕನಿಂದ ಮಾತು ತೆಗೆದುಕೊಂಡಿದ್ದಾಳೆ. ಕ್ಯಾನ್ಸರ್ ನಿಂದ ಬಳಲುತ್ತಿರುವ ಸ್ವಾತಿ ಕೊನೆಯ ದಿನಗಳನ್ನು ಎಣಿಸುತ್ತಿದ್ದಾಳೆ.
ರೋಗ ಉಲ್ಬಣಿಸಿದೆ. ಅವಳು ಬದುಕುಳಿಯುತ್ತಾಳಾ? ಒಂದು ವೇಳೆ ಆಯುಷ್ಯ ಮುಗಿದುಹೋದರೆ ಮಗಳು ಮಯೂರಿ, ಅಪ್ಪನ ಜತೆ ದುಬೈಗೆ ಹಾರ್ತಾಳಾ ಅಥವಾ ಚಿಕ್ಕಮ್ಮನ ಜತೆ ಗೋಕರ್ಣಕ್ಕೆ ಹೋಗ್ತಾಳಾ? ಅಲ್ಲಿ ಮೇಘಾಳ ಅವಿಭಕ್ತ ಕುಟುಂಬದಲ್ಲಿ ಮಯೂರಿಯ ಬದುಕು ಹೇಗೆ ಸಾಗೀತು?
ಈ ಪ್ರಶ್ನೆಗಳೊಂದಿಗೆ, ಇದು ಹದಿಹರೆಯದ ಮೇಘ ಮಯೂರಿಯರ ಹುಡುಗಾಟದ ಹೊಂಗನಸಿನ ಅಮರ ಚಿತ್ರಕತೆ. ಜನವರಿ 13ರಿಂದ ಸೋಮವಾರದಿಂದ ಶನಿವಾರ ರಾತ್ರಿ 7.30ಕ್ಕೆ 'ಜೀ ಕನ್ನಡ'ದಲ್ಲಿ. (ಒನ್ಇಂಡಿಯಾ ಕನ್ನಡ)