Don't Miss!
- Technology SmartGlass: ಮೆಟಾ ರೇ-ಬ್ಯಾನ್ ಸ್ಮಾರ್ಟ್ ಗ್ಲಾಸ್ ಬಳಕೆದಾರರು ಇನ್ಮುಂದೆ ವಿಡಿಯೋ ಕಾಲ್ ಮಾಡಬಹುದು!
- Automobiles ಕ್ರ್ಯಾಶ್ ಟೆಸ್ಟ್ನಲ್ಲಿ ಕಳಪೆ ಪ್ರದರ್ಶನ ನೀಡಿ ನಿರಾಸೆ ಮೂಡಿಸಿದ ಮಧ್ಯಮ ವರ್ಗದ ಮೆಚ್ಚಿನ ಸ್ವದೇಶಿ ಕಾರು
- Sports 2025ರ ಚಾಂಪಿಯನ್ಸ್ ಟ್ರೋಫಿಗಾಗಿ ಭಾರತ ತಂಡ ಪಾಕಿಸ್ತಾನಕ್ಕೆ ಪ್ರಯಾಣಿಸಲಿದೆಯೇ?; ಬಿಸಿಸಿಐ ಹೇಳಿದ್ದೇನು?
- News ಮೋದಿ ಯಾರ ಪರ; ಪ್ರಧಾನಿಯಾಗಿ 16 ಲಕ್ಷ ಕೋಟಿ ಸಾಲ ಮನ್ನಾ ಮಾಡಿದ್ದು ಯಾರದ್ದು? ಸಿದ್ದರಾಮಯ್ಯ
- Finance ಬೆಂಗಳೂರಿನಲ್ಲಿ ಈ ಮೂರು ದಿನಗಳ ಕಾಲ ಮದ್ಯ ಮಾರಾಟ ನಿಷೇಧ, ದಿನಾಂಕ, ಸಮಯ ತಿಳಿಯಿರಿ
- Lifestyle Zero Shadow Day: ಬೆಂಗಳೂರಲ್ಲಿ ಇಂದು ಶೂನ್ಯ ನೆರಳು ದಿನ.! ಯಾವ ಸಮಯದಲ್ಲಿ ಗೊತ್ತಾ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಆರತಿ ಮಗುವಿಗಾಗಿ ಮಂಡಿಸೇವೆಗೆ ಮುಂದಾದ ಅಮ್ಮು: ಸುಹಾಸಿನಿ ಕುತಂತ್ರಕ್ಕೆ ಮಗು ಬಲಿಯಾಗುತ್ತಾ?
'ಗಟ್ಟಿಮೇಳ' ಧಾರವಾಹಿ ಚೆನ್ನಾಗಿ ಮೂಡಿಬರುತ್ತಿದೆ. ವೇದಾಂತ್ ವಸಿಷ್ಠ ಕೋಪ, ಪ್ರೀತಿ ಹಾಗೆಯೇ ಅಮೂಲ್ಯ ತುಂಟಾಟ ಹೀಗೆ ಇದೆಲ್ಲವೂ ವೀಕ್ಷಕರಿಗೆ ಇಷ್ಟವಾಗಿದೆ. ಈಗ ಆರತಿ ಪ್ರೆಗ್ನೆಂಟ್ ಈ ವಿಚಾರ ಗೊತ್ತಾಗುತ್ತಿದ್ದಂತೆ ಅಮೂಲ್ಯಾಗೆ ಖುಷಿಯಲ್ಲಿ ಕೈ ಕಾಲೇ ಆಡುತ್ತಿಲ್ಲ. ಆದರೆ ಆರತಿಗೆ ಅತ್ತೆ ಸುಹಾಸಿನಿ ಇಲ್ಲದ್ದನ್ನೆಲ್ಲ ಹೇಳಿ ತಲೆಕೆಡಿಸಿದ್ದಾಳೆ. ಈ ವಿಚಾರ ಅಮೂಲ್ಯಾಗೆ ಗೊತ್ತಾಗಿದೆ. ಅದೆಷ್ಟೋ ಬಾರಿ ಸುಹಾಸಿನಿಗೆ ವಾರ್ನಿಂಗ್ ಕೂಡ ಮಾಡಿದ್ದಾಳೆ.
ಇದೀಗ ಸುಹಾಸಿನಿಗೆ ಆರತಿ ಮೇಲೆಯೇ ಕಣ್ಣು, ''ಯಾರು ಈ ಮನೆಯಲ್ಲಿ ಬಸುರು ಆಗಾಂಗಿಲ್ಲ, ಯಾರನ್ನು ಆಗಕ್ಕೂ ಬಿಡಲ್ಲ, ಆರತಿಗೆ ಮಗುವಾದರೆ ಆಸ್ತಿಯೆಲ್ಲ ವೇದಾಂತ್ ವಿಕ್ಕಿ ಮಗುವಿಗೆ ಬರೆಯುವ ಸಾಧ್ಯತೆ ಕೂಡ ಇದೆ, ಸ್ವಲ್ಪ ದಿನ ಆರತಿಗೆ ಆದ್ಯಾಗೆ ಹೇಗೆ ಆಯ್ತು ಹಾಗೆ ಮಾಡುತ್ತೀನಿ'' ಎಂದು ಮನದಲ್ಲಿಯೇ ಹೇಳಿಕೊಳ್ಳುತ್ತಿರುತ್ತಾರೆ. ಆದ್ಯಾನ ಮಗುವನ್ನು ಕೂಡ ಸುಹಾಸಿನಿಯೇ ಕೊಂದಿರುವುದು ಎಂದು ಇದರಿಂದ ಸ್ಪಷ್ಟವಾಗುತ್ತಿದೆ.
Recommended Video
ಆಫೀಸಿಗೆ ಹೋಗುವಂತೆ ಅಮೂಲ್ಯಾಗೆ ಎಲ್ಲರೂ ಹೇಳುತ್ತಿದ್ದಾರೆ. ವೇದಾಂತ್ ಒಬ್ಬನಿಗೆ ಆಫೀಸ್ ನಿಭಾಯಿಸಲು ಸಾಧ್ಯವಾಗುತ್ತಿಲ್ಲ ಈ ಕಾರಣ ಕಾಂತನಿಗೆ ವಿಪರೀತ ಕೆಲಸ ನೀಡುತ್ತಿದ್ದ. ಇದರಿಂದ ಹತಾಶನಾದ ಕಾಂತ ವಿಕ್ಕಿಗೆ ಕಾಲ್ ಮಾಡಿ ಹೇಳುತ್ತಾನೆ. ಬಳಿಕ ಈ ಬಗ್ಗೆ ವೇದಾಂತ್ ಬಳಿ ವಿಕ್ಕಿ ಮಾತನಾಡುತ್ತಾನೆ. ಬಳಿಕ ಅಮೂಲ್ಯಾಳ ಬಳಿ ಹೇಳಿದಾಗ ಅಮೂಲ್ಯ ಇದು ಇಷ್ಟವಾಗುವುದಿಲ್ಲ. ಮನೆಯಲ್ಲಿ ಎಲ್ಲರೂ ಒತ್ತಾಯಕ್ಕೆ ಎಲ್ಲರಿಗೂ ಇಲ್ಲ ನಾನು ಹೋಗಲ್ಲ ಎಂದಿದ್ದಕ್ಕೆ ಆರತಿ ಹೇಳುತ್ತಾಳೆ ನಾನೇ ಹೋಗು ಅಂದ್ರೆ ಹೋಗುತ್ತಿಯ ಎಂದು ಹೇಳಿದಾಗ ಬೇರೆ ವಿಚಾರ ಗೊತ್ತಾಗದೇ ಏನು ಮಾಡಬೇಕೆಂದು ಅರಿಯದೇ ಸುಮ್ಮನಾಗುತ್ತಾಳೆ. ಸರಿ ಹೋಗುತ್ತೇನೆ ಎಂದು ಹೇಳುತ್ತಾಳೆ. ಬಳಿಕ ಎಲ್ಲರಿಗೂ ಸ್ವಲ್ಪ ನಿರಾಳತೆಯ ಭಾವ ಮೂಡುತ್ತದೇ, ಆದರೆ ಸುಹಾಸಿನಿ ಮಾತ್ರ ಗರ್ಭದಲ್ಲಿರುವ ಮಗುವನ್ನು ಹೇಗೆ ಗರ್ಭಪಾತ ಮಾಡಿಸುವುದು ಎಂದು ಯೋಚಿಸುತ್ತಿದ್ದಾಳೆ.
ಇತ್ತ ರಾತ್ರಿ ವೇಳೆ ಅಮೂಲ್ಯಾಳ ಅಮ್ಮನಿಗೆ ಕೆಟ್ಟ ಕನಸು ಬೀಳುತ್ತದೆ. ಆರತಿ ಮಗುವಿಗೆ ಅಪಾಯ ಆದ ಹಾಗೆ ಕೂಡಲೇ ನಿದ್ದೆಯಿಂದ ಎಚ್ಚೆತ್ತ ಅಮೂಲ್ಯ ತಾಯಿ ಆರತಿಗೆ ಫೋನ್ ಮಾಡುವಂತೆ ಮಕ್ಕಳ ಬಳಿ ಹೇಳುತ್ತಾರೆ, ಕೆಟ್ಟ ಕನಸು ಬೀಳುತ್ತಿದೆ, ಎಂದೆಲ್ಲ ಹೇಳುತ್ತಾಳೆ, ಅದಕ್ಕೆ ಅಂಜಲಿ ಹೇಳುತ್ತಾಳೆ ಅಮ್ಮ ನಾಳೆ ಫೋನ್ ಮಾಡೋಣ ಏನು ಟೆನ್ಷನ್ ಮಾಡಬೇಡ ಎಂದು ಸಮಾಧಾನ ಮಾಡಿ ಮಲಗುತ್ತಾರೆ. ಬಳಿಕ ಮರುದಿವಸ ದೇವಸ್ಥಾನಕ್ಕೆ ತೆರಳಿದ ಅಮೂಲ್ಯ ತಾಯಿ ಮಂಡಿಸೇವೆಗೆಂದು ಮುಂದಾಗುತ್ತಾರೆ ಈ ವೇಳೆ ಅಲ್ಲಿಗೆ ಅಮೂಲ್ಯ ಆಗಮಿಸಿ ನಿನ್ನಿಂದ ಇದು ಸಾಧ್ಯವಿಲ್ಲ ಎಂದು ಹೇಳಿ ಅಮೂಲ್ಯನೇ ಮಂಡಿ ಸೇವೆ ಮಾಡುತ್ತಾಳೆ.