twitter
    For Quick Alerts
    ALLOW NOTIFICATIONS  
    For Daily Alerts

    ಕೊರೊನಾ ಹರಡದಂತೆ ತಡೆಯಲು ಝೀ ವಾಹಿನಿಯಿಂದ ಹೊಸ ಮಾರ್ಗ

    |

    ಕೊರೊನಾ ವೈರಸ್ ಎರಡನೇ ಅಲೆ ಹಿನ್ನೆಲೆ ಚಿತ್ರಮಂದಿರಗಳು ಬಂದ್ ಆಗಿವೆ. ಅದರೆ ಸಿನಿಮಾ ಶೂಟಿಂಗ್, ಧಾರಾವಾಹಿ ಅಥವಾ ರಿಯಾಲಿಟಿ ಶೋಗಳ ಚಿತ್ರೀಕರಣಕ್ಕೆ ಯಾವುದೇ ತೊಂದರೆ ಇಲ್ಲ. ಅಗತ್ಯ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಕೆಲಸ ಮುಂದುವರಿಸಿವೆ.

    ಇದೀಗ, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಆಯೋಜಕರು ಕೊರೊನಾ ಎದುರಿಸಲು ಉತ್ತಮ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾರೆ. ಈ ಕುರಿತು ನಟಿ ಹಾಗು ಕಾರ್ಯಕ್ರಮದ ತೀರ್ಪುಗಾರರಾಗಿರುವ ರಕ್ಷಿತಾ ಪ್ರೇಮ್ ತಮ್ಮ ಇನ್ಸ್ಟಾಗ್ರಾಂನಲ್ಲಿ ಬಹಿರಂಗಪಡಿಸಿದ್ದಾರೆ.

    ಜೀ ಕನ್ನಡದ ಅದ್ಧೂರಿ ಧಾರಾವಾಹಿ 'ಜೊತೆ ಜೊತೆಯಲಿ' 400ರ ಸಂಭ್ರಮಜೀ ಕನ್ನಡದ ಅದ್ಧೂರಿ ಧಾರಾವಾಹಿ 'ಜೊತೆ ಜೊತೆಯಲಿ' 400ರ ಸಂಭ್ರಮ

    ಕೊರೊನಾ ಹರಡದಂತೆ ತಡೆಯಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಹಾಗೂ ಮಾಸ್ಕ್ ಧರಿಸುವುದು ಅಗತ್ಯ. ಈ ನಿಟ್ಟಿನಲ್ಲಿ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮದಲ್ಲಿ ತೀರ್ಪುಗಾರರ ನಡುವೆ ಗ್ಲಾಸ್ ಶೀಲ್ಡ್ ಹಾಕಲಾಗಿದೆ. ಇದರಿಂದ ತೀರ್ಪುಗಾರರ ನಡುವಿನ ಅಂತರ ಕಾಪಾಡಬಹುದು.

    Zee Kannada Has takes good precaution against Covid19

    ರಕ್ಷಿತಾ ಪ್ರೇಮ್, ವಿಜಯ ರಾಘವೇಂದ್ರ ಹಾಗೂ ಚಿನ್ನಿ ಪ್ರಕಾಶ್ ಮಾಸ್ಟರ್ ಈ ಶೋನಲ್ಲಿ ತೀರ್ಪುಗಾರರಾಗಿದ್ದಾರೆ. ಈ ಮೂವರ ನಡುವೆ ಗ್ಲಾಸ್ ಶೀಲ್ಡ್ ಹಾಕಿ ಅಂತರ ಕಾಪಾಡಲಾಗಿದೆ. ಸ್ಪರ್ಧಿಗಳ ಆಸನ ವಿಚಾರದಲ್ಲೂ ಅಂತರ ಉಳಿಸಿಕೊಳ್ಳಲಾಗಿದೆ.

    ಕೊರೊನಾದಿಂದ ಸಂಕಷ್ಟಕ್ಕೆ ಸಿಲುಕಿರುವ ಈ ಸಮಯದಲ್ಲಿ ಝೀ ವಾಹಿನಿ ಇಂತಹದೊಂದು ಮಾರ್ಗ ಕಂಡುಕೊಂಡಿರುವುದು ವೀಕ್ಷಕರ ವಲಯದಲ್ಲಿ ಮೆಚ್ಚುಗೆ ಪಡೆದುಕೊಂಡಿದೆ. ರಕ್ಷಿತಾ ಅವರ ಈ ಪೋಸ್ಟ್‌ನ್ನು ನೆಟ್ಟಿಗರು ಸ್ವಾಗತಿಸಿದ್ದಾರೆ.

    ಇನ್ನುಳಿದಂತೆ ಝೀ ವಾಹಿನಿಯೂ ಬೇರೆ ಯಾವ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿದೆ ಎಂದು ಈ ವಾರಾಂತ್ಯಕ್ಕೆ ಕಾರ್ಯಕ್ರಮದಲ್ಲಿ ನೋಡಬೇಕಿದೆ.

    English summary
    Dance Karnataka Dance Show organizer has takes good precaution against Covid19.
    Thursday, April 22, 2021, 15:58
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X