Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಆರ್ಯವರ್ಧನ್ ಎಲ್ಲಿದ್ದಾನೆ ಎಂದು ಅನುಗೆ ಸುಳಿವು ಸಿಕ್ಕಿದೆ
ಜೊತೆ ಜೊತೆಯಲಿ ಧಾರಾವಾಹಿಯಲ್ಲಿಅನು ಸಿರಿಮನೆ ಆರ್ಯವರ್ಧನ್ ಅವರನ್ನು ಹುಡುಕಾಡುತ್ತಿದ್ದಾಳೆ. ರಾತ್ರಿ ಪೂರ ಮನೆಯಿಂದ ಹೊರಗೆ ಇದ್ದು, ಹುಡುಕುತ್ತಿದ್ದಾಳೆ. ಆದರೆ, ಆರ್ಯವರ್ಧನ್ ಮಾತ್ರ ಪತ್ತೆ ಇಲ್ಲ.
ಮಾನ್ಸಿ ಮತ್ತು ಹರ್ಷ ಇಬ್ಬರೂ ದಾದ ನಾಪತ್ತೆಯಾಗಿದ್ದರೂ ಏನೂ ಆಗಿಯೇ ಇಲ್ಲ ಎಂಬಂತೆ ನೆಮ್ಮದಿಯಾಗಿ ಇದ್ದಾರೆ. ಅನು ಹುಡುಕಲು ಸಹಾಯ ಮಾಡಿ ಎಂದು ಕೇಳಿದರೂ ಮಾನ್ಸಿ ಅನುಗೆ ಬೈದು ಕಳಿಸಿದ್ದಾಳೆ.
ಆದಿಗೆ ಎರಡನೇ ಮದುವೆ ಭಾಗ್ಯ! ಹಾಗಿದ್ರೆ ಪಾರು ಕತೆ ಏನು?
ಇತ್ತ ಪ್ರಿಯಾದರ್ಶನಿ ಮಗ ವಿಶ್ವಾಸ್ ತನ್ನ ಸೋಲಿನ ಚಿಂತೆಯಲ್ಲೇ ಇದ್ದಾನೆ. ಪುತ್ರನ ನೋವನ್ನು ನಿವಾರಿಸುವ ಸಲುವಾಗಿ ಪ್ರಿಯದರ್ಶನಿ ಈಗ ಹಿರಿ ಮಗನ ಮೊರೆ ಹೋಗಿದ್ದಾಳೆ. ಆದರೆ ಆರ್ಯವರ್ಧನ್ ನಾಪತ್ತೆಯಾಗಿದ್ದು, ಈಗ ಧಾರಾವಾಹಿಯಲ್ಲಿ ಕುತೂಹಲ ಹೆಚ್ಚಾಗಿದೆ.
ಆರ್ಯನನ್ನು ಹುಡುಕುತ್ತಿರುವ ಅನು
ಅನು ರಾತ್ರಿ ಎಲ್ಲಾ ಆರ್ಯನಿಗಾಗಿ ಹುಡುಕಾಡಿ ಸುಸ್ತಾಗಿದ್ದಾಳೆ. ಆರ್ಯನ ಮೇಲೆ ಕೋಪವನ್ನು ಕೂಡ ಮಾಡಿಕೊಂಡಿದ್ದಾಳೆ. ಪ್ರತಿ ಬಾರಿಯೂ ಹೀಗೆ ಯಾರಿಗೂ ಹೇಳದಂತೆ ಮನೆಯಿಂದ ಹೊರಗೆ ಹೋಗುತ್ತಿದ್ದರೆ, ಹೇಗೆ. ನಾನು ಎಷ್ಟು ಅಂತ ಹುಡುಕಲಿ. ಈ ಸಲ ಸಿಗಲಿ, ನನಗೆ ನಿಮ್ಮ ಸಹವಾಸ ಸಾಕು ಎಂದು ಹೇಳಿಬಿಡುತ್ತೇನೆ ಎಂದು ಒಬ್ಬಳೇ ಮಾತನಾಡಿಕೊಳ್ಳುತ್ತಿರುತ್ತಾಳೆ. ಅಷ್ಟೊತ್ತಿಗೆ ಅನು ಅವರ ತಂದೆ ಸುಬ್ಬು ಕಾಲ್ ಮಾಡುತ್ತಾರೆ. ಸುಬ್ಬು ಮಗಳ ಯೋಗಕ್ಷೇಮ ವಿಚಾರಿಸಿಕೊಳ್ಳುತ್ತಿರುತ್ತಾರೆ. ಆದರೆ ಅನು ಬೇಸರದಲ್ಲೇ ಕಾಟಾಚಾರಕ್ಕೆ ಮಾತನಾಡಿ ಫೋನ್ ಅನ್ನು ಕಟ್ ಮಾಡುತ್ತಾಳೆ.
ವಿಶ್ವಾಸ್ ಮನೆಯಿಂದ ಹೊರಟಿದ್ದೆಲ್ಲಿಗೆ..?
ಇತ್ತ ಪ್ರಿಯದರ್ಶಿನಿ ಮಗ ವಿಶ್ವಾಸ್ ಅಮ್ಮನ ಕೈ ತುತ್ತನ್ನು ಕೇಳಿ ಊಟ ಮಾಡಿದ್ದಾನೆ. ತಾಯಿಯೂ ಮಗನಿಗೆ ಬಹಳ ವರ್ಷಗಳ ನಂತರ ಊಟ ಮಾಡಿಸಿದ್ದಾಳೆ. ಈ ವೇಳೆ ವಿಶ್ವಾಸ್ ಮನೆಯಿಂದ ಹೊರಗೆ ಹೋಗಿ ಬರುವುದಾಗಿ ಹೇಳಿದ್ದಾನೆ. ಅದೂ ಕೂಡ ಹೋಗುತ್ತೇನೆ ಎಂದಿದ್ದಾನೆ. ಈ ಮಾತನ್ನು ಕೇಳಿದರೆ, ವಿಶ್ವಾಸ್ ಸಾಲ ಮಾಡಿಕೊಂಡಿರುವುದಕ್ಕೆ ಹೆದರಿ ತನ್ನ ಜೀವಕ್ಕೆ ಅಪಾಯ ತಂದುಕೊಳ್ಳಬಹುದು ಎಂದು ಊಹಿಸಲಾಗಿದೆ.
ಅನುಗೆ ಕರೆ ಮಾಡಿದ ಪ್ರಿಯದರ್ಶನಿ
ಇತ್ತ ಪ್ರಿಯದರ್ಶನಿ ಆರ್ಯವರ್ಧನ್ ದಾರಿಯನ್ನೇ ಎದುರು ನೋಡುತ್ತಿದ್ದಾಳೆ. ಆದರೆ ಆರ್ಯ ಇನ್ನೂ ಬಂದಿಲ್ಲ. ತನ್ನ ಮಗನ ಕಷ್ಟವನ್ನು ನಿವಾರಿಸಲು ಆರ್ಯನಿಂದಲೇ ಸಾಧ್ಯ ಎಂದು ತಿಳಿದ ಪ್ರಿಯ, ಆರ್ಯನಿಗೆ ಕರೆ ಮಾಡಿ ಸಹಾಯ ಬೇಡಿದ್ದಳು. ಆರ್ಯ ಫೋನ್ ನಲ್ಲಿ ಏನು ಹೇಳಿದ್ದಾನೆ ಎಂಬುದು ಯಾರಿಗೂ ಗೊತ್ತಿಲ್ಲ. ಆದರೆ ಪ್ರಿಯ ಮಾತ್ರ ಆರ್ಯನಿಗಾಗಿ ಕಾಯುತ್ತಿದ್ದಾಳೆ. ಇಷ್ಟೊತ್ತಾದರೂ ಬರಲೇ ಇಲ್ಲ ಎಂದು ಪ್ರಿಯ ಆರ್ಯನಿಗೆ ಕರೆ ಮಾಡುತ್ತಾಳೆ. ಆದರೆ ಅವನ ಫೋನ್ ಸ್ವಿಚ್ ಆಫ್ ಆಗಿರುತ್ತದೆ. ಹಾಗಾಗಿ ಅನುಗೆ ಕರೆ ಮಾಡುತ್ತಾಳೆ. ಆಗ ತನ್ನ ಪರಿಸ್ಥಿತಿ ಬಗ್ಗೆ ಹೇಳಿಕೊಂಡು, ಆರ್ಯ ಹೊರಟು ಎಷ್ಟೊತ್ತಾಯ್ತು ಎಂದು ಕೇಳುತ್ತಾರೆ. ಆಗ ಇನ್ನೇನು ಬರಬಹುದು ಎಂದು ಹೇಳಿ ಅನು ಫೋನ್ ಕಟ್ ಮಾಡುತ್ತಾಳೆ.
ಅನು ಮನೆಗೆ ಬಂದು ಹೇಳಿದ್ದೇನು..?
ಅನು ಫೋನ್ ಕಟ್ ಮಾಡುತ್ತಿದ್ದಂತೆಯೇ ಆರ್ಯ, ಪ್ರಿಯದರ್ಶನಿ ಅವರನ್ನು ನೋಡಲು ಹೋಗುತ್ತಿದ್ದಾರೆ ಎಂದು ಊಹಿಸುತ್ತಾಳೆ. ಇದೇ ಖುಷಿಯಲ್ಲಿ ಅನು ಮನೆಗೆ ವಾಪಸ್ ಬರುತ್ತಾಳೆ. ಅಷ್ಟೊತ್ತಿಗೆ ಶಾರದಾ ದೇವಿ ಮತ್ತೆ ಮಾನ್ಸಿ ನಡುವೆ ಇದೇ ವಿಚಾರಕ್ಕೆ ವಾಗ್ವಾದ ನಡೆಯುತ್ತಿರುತ್ತದೆ. ಮನೆಗೆ ಬಂದ ಅನು ಆರ್ಯ ಸರ್ ಪ್ರಿಯದರ್ಶನಿ ಅವರ ಮನೆಗೆ ಹೋಗಿದ್ದಾರೆ ಎಂದು ಹೇಳುತ್ತಾಳೆ. ಅಲ್ಲಿಗೆ ನಿನ್ನೆಯ ಎಪಿಸೋಡ್ ಮುಕ್ತಾಯಗೊಂಡಿದೆ. ಆದರೆ ಇಂದಿನ ಪ್ರೋಮೋದಲ್ಲಿ ಆಕ್ಸಿಡೆಂಟ್ ಆಗಿದ್ದು, ಇದು ಪ್ರೇಕ್ಷಕರಲ್ಲಿ ಕುತೂಹವನ್ನು ಹೆಚ್ಚಿಸಿದೆ.