Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಜೊತೆ ಜೊತೆಯಲಿ: ರಾಜನಂದಿನಿಯನ್ನು ಅಟ್ಟಿಸಿಕೊಂಡು ಬರುವವರು ಯಾರು?
'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ರಾಜನಂದಿನಿ ಆರ್ಯನ ಬಗ್ಗೆ ತಿಳಿದು ಅಪ್ಸೆಟ್ ಆಗಿರುತ್ತಾಳೆ. ಆರ್ಯನ ಬಳಿ, ನಿನ್ನ ಅರ್ಥ ಮಾಡಿಕೊಳ್ಳೋದಕ್ಕೆ ಆಗುತ್ತಿಲ್ಲ ಎಂದು ಹೇಳುತ್ತಾಳೆ. ಆಗ ಆರ್ಯ ಶಾಕ್ ಆಗುತ್ತಾನೆ. ಏನ್ ಹೇಳುತ್ತಿದ್ದೀಯಾ ನಂದು, ಅಂದಾಗ ತಲೆ ನೋಯುತ್ತಿದೆ. ನಾನು ಮಲಗುತ್ತೇನೆ ಎಂದು ರಾಜನಂದಿನಿ ಹೇಳುತ್ತಾಳೆ.
ಆರ್ಯವರ್ಧನ್ ಹಾಗೂ ಝೇಂಡೇ ವಠಾರದ ಮನೆಯಲ್ಲಿ ಕೂತು ಕೇರಂ ಆಡುತ್ತಿರುತ್ತಾರೆ. ಆಗ ಡ್ರೈವರ್ ಬಂದು ರಾಜನಂದಿನಿ ಮೇಡಂ ಕೊಟ್ರು ಅಂತ ಹೇಳಿ ಒಂದು ಟೆಪ್ರೆಕಾರ್ಡರ್ ಅನ್ನು ಕೊಡುತ್ತಾರೆ. ನನ್ನ ಹೆಂಡತಿ ಪ್ರೇಮದ ಸಂದೇಶವನ್ನು ಕಳಿಸಿದ್ದಾಳೆ ಅಂತ ಖುಷಿ ಪಡುತ್ತಾನೆ.
ಟೇಪ್ ರೆಕಾರ್ಡರ್ ಆನ್ ಮಾಡಿದಾಗ ರಾಜನಂದಿನಿ, ಆರ್ಯ ನಾನು ನಿನ್ನ ಮೇಲಿಟ್ಟಿದ್ದ ನಂಬಿಕೆಯನ್ನು ಸುಳ್ಳು ಮಾಡಿದ್ದೀಯಾ. ನನ್ನಿಂದ ನನ್ನ ಮನೆ, ಅಪ್ಪ, ಬ್ಯುಸಿನೆಸ್ ಎಲ್ಲವನ್ನೂ ಕಿತ್ತುಜೊಂಡೆ. ನೀನು ಮಾಡಿದ್ದೆಲ್ಲವೂ ನನಗೆ ಗೊತ್ತಾಗಿದೆ. ಇನ್ನು ಏನೇನು ಕಥೆ ಹೆಣೆಯಬೇಕು ಅಂದುಕೊಂಡಿದ್ದೀಯೋ ರೆಡಿ ಮಾಡಿಕೊ ಎಂದು ಹೇಳುತ್ತಾಳೆ.
ರಾಜನಂದಿನಿಗೆ ಕಾದು ಅಪಾಯ
ಇದನ್ನು ಕೇಳಿದ ಆರ್ಯ ಮತ್ತು ಝೇಂಡೇ ಶಾಕ್ ಆಗುತ್ತಾರೆ. ಎಲ್ಲವೂ ಮುಗಿದೇ ಹೋಯ್ತು ಎಂದುಕೊಳ್ಳೂತ್ತಾನೆ ಝೇಂಡೇ. ಆದರೆ, ಆರ್ಯ ಸ್ವಲ್ಪವೂ ಜಗ್ಗದೇ ನಾನೇನು ಮಾಡೇ ಇಲ್ಲ ಎನ್ನುವ ಹಾಗೆ ಮಾತನಾಡುತ್ತಾನೆ. ಅಪಾಯ ಬಂದರೆ ಏನು ಮಾಡಬೇಕು ಅಂತ ನನಗೆ ಗೊತ್ತಿದೆ ಎಂದು ಹೇಳುತ್ತಾನೆ.
ಇತ್ತ ರಾಜನಂದಿನಿ ಆರ್ಯ ಹಾಗೂ ಝೇಂಡೇ ಆಫೀಸ್ನಲ್ಲಿ ಮಾತನಾಡಿಕೊಂಡಿದ್ದನ್ನೆಲ್ಲಾ ಕೇಳಿಸಿಕೊಂಡಿರುತ್ತಾಳೆ. ಆಗ ಆರ್ಯ ಫೋನ್ ಮಾಡಿ, ನಂದಿನಿ ಅವರೇ ನಾನು ನಿಮ್ಮ ಹತ್ರ ಮಾತನಾಡಬೇಖು. ನಾನು ನಿಮ್ಮ ಹತ್ತಿರ ಕೆಲ ವಿಚಾರಗಳನ್ನು ಮುಚ್ಚಿಟ್ಟಿದ್ದೀನಿ ಅದೆಲ್ಲವನ್ನೂ ನಾನು ಹೇಳಬೇಕು. ಆಮೇಲೆ ನೀವು ತೆಗೆದುಕೊಳ್ಳುವ ಎಲ್ಲಾ ನಿರ್ಧಾರಕ್ಕೆ ನಾನು ಬದ್ಧವಾಗಿರುತ್ತೇನೆ. ದಯವಿಟ್ಟು ನಾನು ಹೇಳುವ ಜಾಗಕ್ಕೆ ಬನ್ನಿ.. ಪ್ಲೀಸ್ ಎಂದು ಕೇಳುತ್ತಾನೆ. ಆಗ ರಾಜನಂದಿನಿ ಇಷ್ಟು ದಿನ ಎಲ್ಲದಕ್ಕೂ ಎಸ್ ಅಂದಿದ್ದೆ ಅಲ್ವಾ. ಇದು ಕೊನೆಯ ಬಾರಿ ಎಸ್ ಅನ್ನೋದು ಅಂತ ಹೇಳುತ್ತಾಳೆ.
ರಾಜನಂದಿನಿಗೆ ಎಚ್ಚರಿಕೆ ಕೊಟ್ಟ ಜೋಗ್ತವ್ವ
ಅಷ್ಟರಲ್ಲಿ ಜೋಗ್ತವ್ವ ಬಂದು ಎಚ್ಚರವಾಗಿರು, ಅಪಾಯ ಕಾದಿದೆ ಎಂದು ಎಚ್ಚರಿಸಿ ಹೋಗುತ್ತಾಳೆ. ರಾತ್ರಿ ಸಮಯದಲ್ಲಿ ಮನೆಯಿಂದ ಹೊರಗೆ ಹೊರಟ ರಾಜನಂದಿನಿಯನ್ನು ಅವರ ತಾಯಿ ಶಾರದಾ ಪ್ರಶ್ನೆ ಮಾಡುತ್ತಾಳೆ. ಕೆಲಸದ ಮೇಲೆ ಆರ್ಯನ ಜೊತೆಗೆ ಹೋಗುತ್ತಿದ್ದೇನೆ. ರಾಜನಂದಿನಿ ಮನಸಿನಲ್ಲಿ ಆರ್ಯನಿಗೆ ಜಾಗವಿಲ್ಲ. ಇನ್ನು ಆರ್ಯ ಈ ಮನೆಗೆ ಬಂದರೆ ಏನು? ಬಿಟ್ಟರೆ ಏನು ಎಂದು ಹೇಳಿ ಹೊರಡುತ್ತಾಳೆ. ಹೋಗುವಾಗ ಅಮ್ಮ ಹೋಗುತ್ತೇನೆ ಅಮ್ಮ ಎಂದು ಹೇಳುತ್ತಾಳೆ. ರಾಜನಂದಿನಿಯೇ ರಾತ್ರಿಯಲ್ಲಿ ಕಾರನ್ನು ತೆಗೆದುಕೊಂಡು ಹೋಗುತ್ತಾಳೆ.
ಇತ್ತ ರಾಜನಂದಿನಿಗೆ ಎಲ್ಲಾ ಗೊತ್ತಾಗಿದೆ ಎಂದು ತಿಳಿದ ಝೇಂಡೇ ಆರ್ಯನನ್ನು ತಡೆಯಲು ಪ್ರಯತ್ನಿಸುತ್ತಾನೆ. ಆದರೆ ಆರ್ಯ, ನನಗೆ ಇದೇ ವರ್ಧನ್ ಕಂಪನಿ ಹಾಗೂ ಇದೇ ಮನೆ ಬೇಕು. ಇದು ನನ್ನದು ಎಂದು ಕಿರುಚುತ್ತಾನೆ. ನಾನು ರಾಜನಂದಿನಿಯನ್ನು ಅರ್ಥ ಮಾಡಿಸುತ್ತೀನಿ ಎಂದು ಹೇಳುತ್ತಾನೆ. ಆರ್ಯನಿಗೆ ಅರ್ಥವಾಗೋದಿಲ್ಲ. ರಾಜನಂದಿನಿ ನಮ್ಮನ್ನು ಪೊಲೀಸರಿಗೆ ಹಿಡಿದು ಕೊಡುತ್ತಾಳೆ. ನನ್ನ ಗೆಳೆಯನನ್ನು ನಾನೇ ಹೇಗಾದರೂ ಮಾಡಿ, ಕಾಪಾಡಿಕೊಳ್ಳಬೇಕು ಎಂದು ಝೇಂಡೇ ನಾಲ್ಕು ಜನರನ್ನು ಕರೆಸಿ, ರಾಜನಂದಿಯನ್ನು ದಾರಿ ಮಧ್ಯೆ ಅಟ್ಯಾಕ್ ಮಾಡುವಂತೆ ಹೇಳುತ್ತಾನೆ. ರಾಜನಂದಿನಿಯನ್ನು ಆ ನಾಲ್ವರು ಅಟ್ಯಾಕ್ ಮಾಡುತ್ತಾರೆ. ರಾಜನಂದಿನಿ ತಪ್ಪಿಸಿಕೊಂಡು ಓಡುತ್ತಾಳೆ. ಆಗ ಅಲ್ಲಿಗೆ ಜೋಗ್ತವ್ವ ಬರುತ್ತಾಳೆ. ಮುಂದೆ ಏನಾಗುತ್ತದೆ ಎಂಬುದನ್ನು ಮುಂದಿನವಾರದವರೆಗೂ ಕಾದು ನೋಡಬೇಕಿದೆ.