ಪ್ರಮುಖ ಘಟ್ಟದಲ್ಲಿ ಧಾರಾವಾಹಿ 'ದೇವಿ' ಕಥಾ ಹಂದರ

ಈ ಧಾರಾವಾಹಿಯಲ್ಲಿ ಇತ್ತೀಚೆಗೆ ಬಹು ಜನಪ್ರಿಯನಾಗಿರುವ ಮಯ್ಯಾಡಿ ಜನ್ನ, ದೇವಿಯ ಮಹಾಶಂಖ ಊದಿ ವಿಶೇಷ ವರ ಪಡೆದು ಅಸಾಮಾನ್ಯನಾಗಿದ್ದಾನೆ. ಸ್ತ್ರೀ ನಿಂದನೆ-ಅನ್ನ ನಿಂದನೆ-ದೈವ ನಿಂದನೆ ಹೀಗೆ ಮೂರು ಮಹಾ ಅಪರಾಧಗಳನ್ನು ಮಾಡಿದಾಗ ಮಯ್ಯಾಡಿ ಜನ್ನನನಿಗೆ ತಕ್ಕ ಶಿಕ್ಷೆಯೆಂದು ಮೂಕಾಂಬಿಕೆಯ ಇಚ್ಛೆ. ಆತನ ಕೈಯಲ್ಲಿರುವ ನವಶಕ್ತಿ ವರಗಳ ಮಹಾಶಂಖ ಮತ್ತೆ ಹುಡುಗಿ ದೇವಿಗೆ ಸಿಗುತ್ತಾ ಅಥವಾ ಖಳನಾಯಕ ಕೇಶವನಾಥನ ಕೈಸೇರುತ್ತಾ?
ದೇವಿ ಅಣ್ಣ ಸದಾನಂದ ಹಾಗೂ ಧಾನ್ಯಗಿರಿ ಹುಡುಗಿ ಅಕ್ಷತಾ ಮದುವೆ ನಡೆಯತ್ತಾ? ಜನ್ನನಿಂದಾಗಿ ಗಂಡನಿದ್ದೂ ಕುಂಕುಮಸೌಭಾಗ್ಯ ಕಳೆದುಕೊಂಡಿರುವ ದೇವಿ ಅಮ್ಮ ಪಾರ್ವತಿಗೆ ಅಮ್ನೋರು ಹೇಗೆ ಸೌಭಾಗ್ಯ ಕರುಣಿಸುತ್ತಾರೆ? ಇವು ಧಾರಾವಾಹಿಯ ಸದ್ಯದ ಪ್ರಶ್ನೆಗಳು.
'ಕೊಲ್ಲೂರಿನ ಪ್ರಕೃತಿ ಸೌಂದರ್ಯದ ಮಡಿಲಲ್ಲೇ ಈ ಸಂಚಿಕೆಗಳನ್ನು ಚಿತ್ರೀಕರಿಸಲಾಗಿದೆ. ಟಿವಿ ಧಾರಾವಾಹಿಯ ಇತಿಮಿತಿಗಳನ್ನು ಮೀರಿ ಸಿನಿಮಾ ಮಾದರಿಯಲ್ಲಿ ಈ ಸಂಚಿಕೆಗಳನ್ನು ರೂಪಿಸಲು ಶ್ರಮಪಟ್ಟಿದ್ದೇವೆ' ಅಂತಾರೆ ಧಾರಾವಾಹಿ ನಿರ್ದೇಶಕ ರಮೇಶ್ ಇಂದಿರಾ. ರಮೇಶ್ಇಂದಿರಾ ಇಲ್ಲಿ ಮುಖ್ಯ ಖಳನಾಯಕ ಕೇಶವನಾಥನ ಪಾತ್ರವನ್ನೂ ನಿರ್ವಹಿಸುತ್ತಿದ್ದಾರೆ.
'ದೇವಿ' ಕನ್ನಡದಲ್ಲಿ ಒಂದು ವಿಭಿನ್ನ ಧಾರಾವಾಹಿ. ಅದು ಜೀ ತಮಿಳು, ಜೀ ತೆಲುಗು ವಾಹಿನಿಗಳಲ್ಲೂ ಡಬ್ ಆಗಿ ಪ್ರಸಾರವಾಗುತ್ತಿರುವುದು ನಮಗೆ ಹೆಮ್ಮೆ- ಅಂತಾರೆ ಜೀ ಕನ್ನಡ ವಾಹಿನಿ ಮುಖ್ಯಸ್ಥ ಗೌತಮ್ ಮಾಚಯ್ಯ. ಕಲಾವಿದೆ ವಿನಯಾ ಪ್ರಸಾದ್ ಮಗಳು ಪ್ರಥಮಾ ಇಲ್ಲಿ ಮೂಕಾಂಬಿಕೆಯಾಗಿ ಅಭಿನಯಿಸುತ್ತಿದ್ದಾರೆ. ಅಲ್ಲದೆ ನಾಗೇಂದ್ರ ಶಾ, ಧರ್ಮೇಂದ್ರ ಕುಮಾರ್ ಅರಸ್, ಅರುಣಾ ಬಾಲರಾಜ್, ಭವಾನಿ ಪ್ರಕಾಶ್, ವೈಷ್ಣವಿ, ವಿಠಲ ಕಾಮತ್ ಹೀಗೆ ನುರಿತ ಪ್ರಸಿದ್ಧ ನಟನಟಿಯರು ಈ ಧಾರಾವಾಹಿಯಲ್ಲಿದ್ದಾರೆ.
ಸೋಮವಾರದಿಂದ ಶುಕ್ರವಾರ ರಾತ್ರಿ 9.30ಕ್ಕೆ ಜೀ ಕನ್ನಡ ವಾಹಿನಿಯಲ್ಲಿ 'ದೇವಿ' ವಿಶೇಷ ಸಂಚಿಕೆಗಳು ಪ್ರಸಾರವಾಗುತ್ತಿವೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications











