Don't Miss!
- News ಹುಬ್ಬಳ್ಳಿ ನೇಹಾ ಕೊಲೆ ಪ್ರಕರಣ: ಸಿದ್ದರಾಮಯ್ಯ ಸರ್ಕಾರವೇ ನೇರ ಹೊಣೆ ಎಂದ ಬಿಜೆಪಿ ಶಾಸಕ
- Lifestyle ಲಿವರ್ ಸಮಸ್ಯೆಯಿದೆ ಎಂದು ಸೂಚಿಸುವ ಲಕ್ಷಣಗಳಿವು, ಕುಟುಂಬಸ್ಥರು ಲಿವರ್ ದಾನ ಮಾಡಿದರೆ ವ್ಯಕ್ತಿಯ ಪ್ರಾಣ ಉಳಿಸಬಹುದು
- Sports LSG vs CSK IPL 2024: ಮತ್ತೊಮ್ಮೆ ಧೋನಿ, ಜಡೇಜಾ ಅಬ್ಬರ; ಲಕ್ನೋ ತಂಡಕ್ಕೆ ಸವಾಲಿನ ಗುರಿ ನೀಡಿದ ಸಿಎಸ್ಕೆ
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹಿಟ್ಲರ್ ಕಲ್ಯಾಣ: ಅಮ್ಮನ ಕುತಂತ್ರದಿಂದ ಏಜೆ-ಲೀಲಾ ಮಧ್ಯೆ ಬಿರುಕು
'ಹಿಟ್ಲರ್ ಕಲ್ಯಾಣ' ಧಾರವಾಹಿ ಒಂದಲ್ಲ ಒಂದು ತಿರುವು ಪಡೆದುಕೊಳ್ಳುತ್ತಾ ವೀಕ್ಷಕರ ಕುತೂಹಲವನ್ನು ಹೆಚ್ಚು ಮಾಡುತ್ತಿದೆ. ಲೀಲಾ ಮತ್ತು ಏಜೆ ಮಾಡುವ ಪೂಜೆಯಲ್ಲಿ ಯಾವುದೇ ಅಡೆತಡೆಗಳಿಲ್ಲದೆ ನಡೆಯಬೇಕು ಎಂಬುವುದು ಏಜೆ ಅಮ್ಮನ ಆಸೆ.
ತನ್ನ ಸೊಸೆ ಹಾಗೂ ಮಗ ನೂರು ಕಾಲ ಅನ್ಯೋನ್ಯವಾಗಿ ಜೀವನ ಸಾಗಿಸಬೇಕು ಎಂಬುವುದು ಬಯಕೆ ಆದರೆ ಲೀಲಾಗೆ ಏಜೆ ಮನೆಯಲ್ಲಿ ಬದುಕಲು ಶತ್ರುಗಳ ಕಾಟ ಮತ್ತು ಸ್ವಂತ ತಾಯಿಯ ದುರಾಸೆಯಿಂದ ಲೀಲಾ ಬಾಳು ಹಾಳಾಗಬಹುದಾದ ಸಾಧ್ಯತೆಯೊಂದು ತೆರೆದುಕೊಂಡಿದೆ.
ಹಿಟ್ಲರ್ ಕಲ್ಯಾಣ: ತೆರೆ ಮೇಲೆ ನೀನಾ, ನಾನಾ? ತೆರೆ ಹಿಂದೆ ದುರ್ಗಾ-ಲೀಲಾ ಫುಲ್ ಕ್ಲೋಸ್..!
ಏಜೆ ಮತ್ತು ಲೀಲಾ ಪೂಜೆಗೆ ಕುಳಿತುಕೊಳ್ಳುತ್ತಾರೆ. ಹಾಗೆಯೇ ಪೂಜೆ ನಿರ್ವಿಘ್ನವಾಗಿ ಮಾಡುತ್ತಾರೆ. ಆದ್ರೆ ಅರ್ಚಕರ ಬಳಿ ಕೇಳಿದಾಗ ಏನು ತೊಂದರೆ ಇಲ್ಲ ಪೂಜೆ ಮುಗಿದ ಮೇಲೆ ಅವರು ಹೋದ ಕಾರಣ ಪೂಜೆಗೆ ಯಾವುದೇ ಅಡೆತಡೆಯಿಲ್ಲದೆ ನೆರವೇರಿದೆ ಎಂದು ಅರ್ಚಕರು ಅಜ್ಜಿಯ ಬಳಿ ಹೇಳುತ್ತಾರೆ. ಇದರಿಂದ ಅಜ್ಜಿಗೆ ಸ್ವಲ್ಪ ತಲೆಬಿಸಿ ಕಡಿಮೆಯಾಗುತ್ತದೆ. ಬಳಿಕ ಅಜ್ಜಿ ಎಲ್ಲರ ಬಳಿ ಆಶೀರ್ವಾದ ತೆಗೆದುಕೊಳ್ಳುವಂತೆ ಸೂಚನೆ ನೀಡುತ್ತಾರೆ. ಆ ವೇಳೆ ಒಬ್ಬಾಕೆ ಲೀಲಾ ಏನು ಅಂತ ನಿಂಗೆ ಆಶಿರ್ವಾದ ಮಾಡಲಿ ಹೇಳು ಎಂದಾಗ ತುಸು ಶಾಕ್ ಆಗುತ್ತದೆ .
ಲೀಲಾಳನ್ನು ಆಶೀರ್ವದಿಸಲು ಹಿಂದೇಟು ಹಾಕಿದ ಸಭಿಕರು
ಆದರೂ ಲೀಲಾ ನಿಮಗೆ ಏನು ಅನ್ನಿಸುತ್ತದೆ ಅದನ್ನು ಆಶಿರ್ವಾದ ಮಾಡಿ ಎಂದು ಹೇಳಿದಾಗ ಆಕೆ ನೀವು ಮತ್ತೆ ಏಜೆ ಬೇರೆಯಾಗುತ್ತಿದ್ದೀರ ಹೀಗಿರಬೇಕಾದರೆ ಏನು ಅಂತ ಆಶಿರ್ವಾದ ಮಾಡಲಿ ಎಂದು ಹೇಳುತ್ತಾರೆ. ಆ ವೇಳೆ ಲೀಲಾ ಕುಪಿತಗೊಂಡು ಪೂಜೆಗೆ ಮನೆಗೆ ಬಂದಿದ್ದೀರಿ ಅಂತ ಆದರದಿಂದ ಮಾತನಾಡಿಸಿದರೆ ನೀವು ಈ ಥರ ಮಾತನಾಡುತ್ತಿದ್ದಿರಾ ಎಂದು ಹೇಳಿದಾಗ ಇದ್ದಿದ್ದನ್ನು ಇದ್ದ ಹಾಗೆ ಹೇಳಿದರೆ ಇವರಿಗೆ ಆಗಲ್ಲ ಕಣ್ರೀ ನೀವು ಏಜೆಯಿಂದ ದೂರ ಆಗುತ್ತಿರುವ ವಿಚಾರ ಎಲ್ಲರಿಗೂ ಗೊತ್ತಿದೆ ಎಂದು ಹೇಳಿದಾಗ ಲೀಲಾ ಗೆ ಶಾಕ್ ಆಗುತ್ತದೆ. ಈ ವೇಳೆ ಲೀಲಾಳನ್ನು ಅಜ್ಜಿ ಕೂಡ ನಂಬದೆ ಇರುವುದನ್ನು ನೋಡಿದ ಲೀಲಾ ಗೆ ಬೇಸರವಾಗುತ್ತದೆ.
ಅಜ್ಜಿ ಕಣ್ಣೀರು ಆತಂಕಗೊಂಡ ಲೀಲಾ
ಲೀಲಾ ಹೇಳುತ್ತಾಳೆ ಇಲ್ಲಿಗೆ ಏಜೆಯನ್ನು ಕರೆದುಕೊಂಡು ಬರುತ್ತೇನೆ ಆಗ್ಲಾದ್ರು ನಾನು ಮತ್ತು ಏಜೆ ಬೇರೆ ಆಗುವುದಿಲ್ಲ ಎಂದು ನಿಮಗೆ ಗೊತ್ತಾಗುತ್ತದೆ. ಎಂದು ಹೇಳಿ ಏಜೆ ಬಳಿಗೆ ಹೋಗುತ್ತಾಳೆ ಲೀಲಾ. ಏಜೆ ಅಂತರಾಳ ಬಳಿ ಹೇಳುತ್ತಾರೆ ನೀನೇ ನೋಡಿದ ಹುಡುಗಿ ಅಮ್ಮನಿಗೆ ಬಹಳ ಖುಷಿ ನೀಡುತ್ತಾಳೆ. ಉತ್ತಮವಾಗಿ ನೋಡಿಕೊಳ್ಳುತ್ತಾರೆ . ಎಂದು ಎನಿಸಿಕೊಂಡರೆ ಇದು ಬೇರೆಯೇ ಆಗುತ್ತಿದೆ. ಅಮ್ಮನ ಆರೋಗ್ಯ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ಇದನ್ನು ಅವರ ಬಳಿ ಹೇಗೆ ಹೇಳಲಿ ಇದಕ್ಕೆಲ್ಲ ನೀನೇ ಕಾರಣ ಅಂತರ ಎಂದು ದೂಷಿಸುತ್ತಾ ಇರುವಾಗ ಲೀಲಾ ಬಂದು ಏಜೆ ನಿಮಗೆ ನನ್ನ ಮೇಲೆ ನಂಬಿಕೆ ಇದೆ ಅಲ್ವಾ ಎಂದಾಗ ಏಜೆ ಹು ಎಂದು ಹೇಳುತ್ತಾನೆ ಬಳಿಕ ಅಲ್ಲಿಂದ ಲೀಲಾ ಏಜೆಯನ್ನು ಕರೆದುಕೊಂಡು ಹೋಗುತ್ತಾಳೆ.
ಕೋಪಗೊಂಡ ಏಜೆಗೆ ಲೀಲಾ ತತ್ತರ
ಎಲ್ಲರ ಮುಂದೆ ಬಂದ ಲೀಲಾ ನೋಡಿ ಏಜೆ ನಾನು ಮತ್ತು ನೀವು ಬೇರೆಯಾಗುತ್ತಿದ್ದೇವೆಯಂತೆ.ಇವರೆಲ್ಲ ಏನೇನೋ ಹೇಳುತ್ತಿದ್ದಾರೆ ನೀವಾದರೂ ನಿಜ ಹೇಳಿ ಏಜೆ. ಇದೆಲ್ಲ ಸುಳ್ಳು ಎಂದು ಹೇಳಿ. ಎಂದಾಗ ಏಜೆ ಕುಪಿತಗೊಂಡು ವಿಚ್ಛೇದನ ಪೇಪರನ್ನು ತೋರಿಸಿ ಹಾಗಾದರೆ ಇದೇನು ಎಂದು ಕೇಳಿದಾಗ ಲೀಲಾ ಶಾಕ್ ಆಗುತ್ತಾಳೆ. ಮುಂದೇನಾಗುತ್ತದೆ ಎಂಬುದು ಕುತೂಹಲ ಕೆರಳಿಸಿದೆ.
ತಾಯಿಯೇ ಕಳಿಸಿರುವ ವಿಚ್ಛೇಧನ ಪತ್ರ
ಲೀಲಾ ಬಯಸಿ-ಬಯಸಿ ಏಜೆಗೆ ವಿಚ್ಛೇಧನ ಪತ್ರ ಕಳಿಸಿಲ್ಲ ಬದಲಿಗೆ ಲೀಲಾಳ ತಾಯಿ ಲೀಲಾ ಹೆಸರಿನಲ್ಲಿ ವಿಚ್ಛೇಧನ ಪತ್ರ ಕಳಿಸಿದ್ದಾಳೆ. ಮಗಳಿಗೆ ಏಜೆಯಿಂದ ವಿಚ್ಛೇಧನ ದೊರೆತರೆ ಪರಿಹಾರವಾಗಿ ಮಗಳಿಗೆ ಕೋಟಿ-ಕೋಟಿ ಹಣ ಬರುತ್ತದೆ ಎಂಬುದು ಆಕೆಯ ಕುತಂತ್ರ. ಆದರೆ ತನ್ನ ತಾಯಿ ವಿಚ್ಛೇಧನ ಪತ್ರ ಕಳಿಸಿರುವ ವಿಚಾರ ಲೀಲಾಗೆ ಗೊತ್ತಿರಲಿಲ್ಲ ಆದರೆ ಈಗ ಗೊತ್ತಾಗಿದೆ.