Don't Miss!
- News Karnataka Weather: ಮೈಸೂರು, ಬಾಗಲಕೋಟೆ ಸೇರಿ ಎಂಟು ಜಿಲ್ಲೆಗಳಿಗೆ ತಂಪಿನ ಸುದ್ದಿ ಕೊಟ್ಟ ಹವಾಮಾನ ಇಲಾಖೆ
- Finance Zero Shadow Day: ಬೆಂಗಳೂರಿನಲ್ಲಿ ಇಂದು ಪ್ರಕೃತಿಯ ಅಚ್ಚರಿ
- Technology ಇಂದು ವಿವೋ T3x 5G ಸ್ಮಾರ್ಟ್ಫೋನ್ ಫಸ್ಟ್ ಸೇಲ್; ಬೆಲೆ 13,499ರೂ.!
- Automobiles Triber: 7 ಜನ ಹೋಗಬಹುದಾದ ರೆನಾಲ್ಟ್ ಟ್ರೈಬರ್ ಖರೀದಿಸಬೇಕೇ.. ಆನ್-ರೋಡ್ ಬೆಲೆ ಎಷ್ಟು, EMI ಏನು?
- Lifestyle ಹೋಟೆಲ್ ರುಚಿಯ ಪನೀರ್ ಪೆಪ್ಪರ್ ಫ್ರೈ ಮನೆಯಲ್ಲೇ ಮಾಡಿ..! 10 ನಿಮಿಷದಲ್ಲಿ ರೆಡಿ..!
- Sports CSK vs LSG IPL 2024: ಐಪಿಎಲ್ನಲ್ಲಿ ಈ ದಾಖಲೆ ಮಾಡಿದ ಮೊದಲ ಸಿಎಸ್ಕೆ ನಾಯಕ ರುತುರಾಜ್ ಗಾಯಕ್ವಾಡ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಏಜೆ-ಲೀಲಾ ನಡುವೆ 'ಏನೂ' ನಡೆಯದಂತೆ ಸೊಸೆಯರ ಕಾವಲು!
'ಹಿಟ್ಲರ್ ಕಲ್ಯಾಣ' ಧಾರವಾಹಿ ಚೆನ್ನಾಗಿ ಮೂಡಿ ಬರುತ್ತಿದೆ. ಇದೀಗ ಸರು ಮತ್ತು ಲಕ್ಷ್ಮಿ ರಾತ್ರಿ ಎಲ್ಲ ಎದ್ದಿದ್ದು ಲೀಲಾ ಗೆ ಬಾಡಿಗಾರ್ಡ್ ಥರ ನೋಡಿಕೊಂಡಿದ್ದಾರೆ.
ಈ ಬಗ್ಗೆ ಸರು ಮತ್ತು ಲಕ್ಷ್ಮಿ ಪರಸ್ಪರ ಮಾತನಾಡಿಕೊಳ್ಳುತ್ತಿದ್ದಾರೆ. 'ಅಕ್ಕ ನನಗಂತೂ ನಿದ್ದೇನೆ ಬರಲಿಲ್ಲ. ಕಣ್ಣು ಮುಚ್ಚಿಕೊಂಡರೆ ಸಾಕು ಏಜೆ-ಲೀಲಾ ಕೈ ಹಿಡಿದು ಡುಯೆಟ್ ಹಾಡೋ ನೆನಪು ಬಂದು ಬಿಡುತ್ತೆ ಕರ್ಮ ಎನ್ನುತ್ತಾಳೆ ಸರು. ಆಗ ದುರ್ಗಾ ಹೇಳುತ್ತಾಳೆ ನಿನ್ನೆ ರಾತ್ರಿ ನಾನು ಅಷ್ಟೊಂದು ಹೇಳಿದರು ನೀವ್ಯಾಕೆ ಇಷ್ಟೊಂದು ಟೆನ್ಶನ್ ಮಾಡಿಕೊಂಡಿದ್ದೀರ. ನೆಮ್ಮದಿ ಆಗಿರೋದು ಒಂದು ಕಲೆ. ಬೇರೆಯವರ ನೆಮ್ಮದಿಯನ್ನು ಕಿತ್ತುಕೊಂಡು ಬದುಕೊದಕ್ಕೆ ಆಗದಿದ್ದರೂ. ನೆಮ್ಮದಿ ಆಗಿರೋದನ್ನು ಕಲಿತುಕೊಂಡು ಬದುಕಬೇಕು ಎನ್ನುತ್ತಾಳೆ
ಅದಕ್ಕೆ ದುರ್ಗಾ ಹೇಳುತ್ತಾಳೆ 'ಹೇ ಸುಮ್ಮನಿರಿ ಅಕ್ಕ ನಮಗೆ ಅಷ್ಟೊಂದು ಆಲೋಚನೆ ಮಾಡಿಕೊಂಡು ಇರಲು ಆಗಲ್ಲ. ಈ ಟೆನ್ಷನ್ ನಲ್ಲಿ ಒದ್ದಾಡಿ ಒದ್ದಾಡಿ ಬೆಳಗ್ಗಿನ ಹೊತ್ತಲ್ಲಿ ಅದು ಹೇಗೆ ನಿದ್ದೆ ಬಂತೋ ಏನೋ ಆದರೆ ನನಗೆ ಒಂದು ಕೆಟ್ಟ ಕನಸು ಬಿತ್ತು ಎನ್ನುತ್ತಾಳೆ ಅದಕ್ಕೆ ಸರು ಹೇಳುತ್ತಾಳೆ ಏನು ಅಕ್ಕ ಕನಸು ಬಿತ್ತಾ ಅಯ್ಯೋ-ಅಯ್ಯೋ ಏಜೆ ಲೀಲಾ ಚೆನ್ನಾಗಿ ಇರೋ ಹಾಗೆ ಅವರಿಬ್ಬರ ಮಧ್ಯೆ ಡೀಪ್ ಲವ್ ಆಗಿರೋ ಹಾಗೆ ಅವರಿಗೆ ಮಕ್ಕಳು ಆಗಿರೋ ಹಾಗೆ ಕನಸು ಬಿತ್ತಾ' ಎನ್ನುತ್ತಾಳೆ.
ಅದಕ್ಕೆ ಲಕ್ಷ್ಮೀ ಇಲ್ಲ ಎನ್ನುತ್ತಾಳೆ. ಆ ರೀತಿ ಯಾವ ಕನಸು ಬಿಳಿಲ್ಲ. ಆದರೆ ನಾನು ನೀನು ಲೀಲಾಗೆ ಬಾಡಿಗಾರ್ಡ್ ಆಗಿರೋ ಹಾಗೆ ಕನಸು ಬಿತ್ತು ಎನ್ನುತ್ತಾಳೆ. ಅದಕ್ಕೆ ಸರು ಹೇಳುತ್ತಾಳೆ ಏನು ನಾವು ನೀವು ಆ ಯಡವಟ್ಟು ರಾಣಿಗೆ ಬಾಡಿಗಾರ್ಡ್ ಈ ಕನಸೆಲ್ಲ ನಿಜ ಆಗೋದಕ್ಕೆ ಚಾನ್ಸ್ ಇಲ್ಲ. ಅವಳನ್ನು ಕಂಡ್ರೇನೆ ನನಗೆ ಆಗಲ್ಲ. ಇನ್ನೂ ನಾವು ಅವಳ ಹಿಂದೆ ಹಿಂದೆ ಸುತ್ತುತ್ತೇವ ನೋ ವೆ ಎನ್ನುತ್ತಾಳೆ. ಅದಕ್ಕೆ ಲಕ್ಷ್ಮಿ ಹೇಳುತ್ತಾಳೆ ಏನೋ ಪಾ ಆದರೆ ಲೀಲಾ ಎಲ್ಲೆ ಹೋದರು ನಾನು ನೀನು ನಾಯಿ ಹಾಗೆ ಸುತ್ತುತಾ ಇದ್ದೆವು ಎನ್ನುತ್ತಾಳೆ.
ಅದಕ್ಕೆ ಸರು, ಇದೆಲ್ಲ ನಿಜ ಆಗೋಕೆ ಸಾಧ್ಯ ಇಲ್ಲ ಬಿಡಿ ನಾನೇ ಬಾಂಡ್ ಪೇಪರ್ ಮೇಲೆ ಬರೆದು ಕೊಡುತ್ತೇನೆ ಎನ್ನುತ್ತಾಳೆ ಅದಕ್ಕೆ ಲಕ್ಷ್ಮಿ ಹೇಳುತ್ತಾಳೆ ಹಗಂತಿಯಾ ಹಾಗಾದರೆ ಓಕೆ ಎನ್ನುತ್ತಾಳೆ. ಆಗ ದುರ್ಗಾ, ನೀವಿಬ್ಬರೂ ಇಲ್ಲಿ ಮಕ್ಕಳ ರೀತಿ ಆಡುತ್ತಿರಿ ಅಲ್ಲಿ ನಿಜವಾಗಿ ಮಕ್ಕಳಾಗಿ ಜೋಗುಳ ಹಾಡುತ್ತಾ ಇರುತ್ತಾರೆ ನಿಮ್ಮಿಬ್ಬರ ಜೊತೆ ಸೇರೋ ಗತಿ ನನಗೆ ಬಂದಿದೆ ಅಲ್ವಾ ನನ್ನ ಹಣೆ ಬರಹ ಎನ್ನುತ್ತಾಳೆ ಮುಂದೇನಾಗುತ್ತದೆ ಕಾದು ನೋಡಬೇಕಿದೆ.