Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹುಟ್ಟು ಹಬ್ಬದ ದಿನದಂದೇ ಸತ್ಯ ಹೊರಹಾಕಿದ ಪವಿತ್ರ! ದೇವ್ ಗತಿ ಮುಂದೇನು?
ಹಿಟ್ಲರ್ ಕಲ್ಯಾಣ ಧಾರವಾಹಿಯಲ್ಲಿ ದೇವ್ ಪಾತ್ರಧಾರಿ ಏಜೆಯನ್ನೂ ಮಟ್ಟ ಹಾಕಲು ಹೇಗೆಲ್ಲಾ ತಯಾರಿ ಮಾಡಿಕೊಂಡಿದ್ದ ಹಾಗೆಯೇ ಯಾವ ರೀತಿ ಆತನನ್ನು ಏಜೆ ಮಟ್ಟ ಹಾಕುತ್ತಾರೆ ಎಂಬೆಲ್ಲ ಕೂತೂಹಲಕಾರಿ ವಿಚಾರವನ್ನು ಎಳೆ ಎಳೆಯಾಗಿ ಬಿಚ್ಚಿ ಇಡುತ್ತಿದ್ದಾರೆ ಧಾರಾವಾಹಿ ನಿರ್ದೇಶಕರು. ಎಡವಟ್ಟು ಲೀಲಾ ಒಂದಲ್ಲ ಒಂದು ಎಡವಟ್ಟುಗಳನ್ನು ಮಾಡಿದರು ಅದರಿಂದ ಏಜೆಗೆ ಒಳಿತು ಆಗಿದೆ ವಿನಃ ಕೆಡುಕಂತು ಖಂಡಿತ ಆಗಿಲ್ಲ.
ಅತ್ತೆಯನ್ನು ಕಂಡರೆ ಸಿಡಿ-ಸಿಡಿ ಎಂದು ಉರಿದು ಬೀಳುತ್ತಿರುವ ಸೊಸೆಯಂದಿರು. ಸೊಸೆಯಂದಿರನ್ನು ಕಂಡರೆ ಮಾವನಿಗೆ ಎಲ್ಲಿಲ್ಲದ ಪ್ರೀತಿ. ಯಾವತ್ತೂ ಏನೇ ತಪ್ಪು ಮಾಡಿದರೂ ಲೀಲಾಗೆ ಏಜೆ ಬಯ್ಯುತ್ತಾರೆ ವಿನಃ ತನ್ನ ಸೊಸೆಯಂದಿರ ಬಗ್ಗೆ ಕಿಂಚಿತ್ತೂ ಬೇಸರ ಮಾಡದ ಏಜೆ ಎಂದು ಸರು ಮಾಡಿದ ತಪ್ಪನ್ನು ಗುರುತಿಸಿ ಲೀಲಾ ಜೊತೆ ಕ್ಷಮೆ ಕೇಳುವಂತೆ ಹೇಳುತ್ತಾನೆ. ಇದರಿಂದಲೇ ಲೀಲಾಗೆ ಸತ್ಯಾ-ಸತ್ಯತೆಯ ಅರಿವಾಗುತ್ತಿದೆ.
ಖೊ-ಖೊ ಅಂಗಳಕ್ಕೆ ಪುಟ್ಟಕ್ಕ: ಅಮ್ಮನ ನೋಡಿ ಸುಮಾಗೆ ಶಾಕ್!
ಇನ್ನಾದರೂ ತನ್ನ ತಪ್ಪನ್ನು ತಿದ್ದಿಕೊಳ್ಳುತ್ತಾಳ?
ಏಜೆ ಬಗ್ಗೆ ತಪ್ಪಾಗಿ ತಿಳಿದಿದ್ದ ಲೀಲಾ, ಇದೀಗ ತನ್ನ ತಪ್ಪು ಅರಿವಾಗುತ್ತಿದೆ. ಪವಿತ್ರ ಹುಟ್ಟುಹಬ್ಬವನ್ನು ಎಲ್ಲರೂ ಜೊತೆಗೂಡಿ ಆಚರಿಸಬೇಕು ಎಂಬುವುದು ಏಜೆ ಆಶಯ. ಪವಿತ್ರಾಗೆ ಒಳ್ಳೆಯ ಗಿಫ್ಟ್ ನೀಡಬೇಕು. ಆಕೆಯ ಆಸೆಯನ್ನು ಈಡೇರಿಸುವ ಪ್ರಯತ್ನ ಮಾಡಬೇಕು ಎಂದು ಏಜೆಯ ಆಸೆ. ಅಂತೆಯೇ ಹುಟ್ಟುಹಬ್ಬವನ್ನು ಆಚರಣೆ ಮಾಡುವ ಸಂದರ್ಭ ಕೂಡ ಬಂತು. ಪವಿತ್ರ ಹುಟ್ಟು ಹಬ್ಬದ ಸಂದರ್ಭ ಏಜೆಯ ಹುಟ್ಟು ಅಡಗಿಸಬೇಕು ಎಂದೆಲ್ಲ ಆಲೋಚನೆಗಳನ್ನು ಮಾಡುತ್ತಾಳೆ ಲೀಲಾ. ಎಲ್ಲಾ ಸೊಸೆಯಂದಿರ ಬಳಿಯೂ ಹೋಗಿ ಪವಿತ್ರ ಹುಟ್ಟು ಹಬ್ಬದ ದಿನ ನಾನೊಂದು ವಿಚಾರ ನಿಮ್ಮ ಬಳಿ ಹೇಳುತ್ತೇನೆ ಎಂದೆಲ್ಲಾ ಹೇಳುತ್ತಾಳೆ. ಇನ್ನೂ ಎಲ್ಲರೂ ಕಾತರದಿಂದ್ದಿದ್ದ ಪವಿತ್ರ ಹುಟ್ಟು ಹಬ್ಬದ ದಿನ ಬಂದೇ ಬಿಟ್ಟಿದೆ. ರೇವತಿ ಕೂಡ ಪವಿತ್ರ ಹುಟ್ಟು ಹಬ್ಬಕ್ಕೆ ಕೇಕ್ ತೆಗೆದುಕೊಂಡು ಬರುತ್ತಾಳೆ.
ಅಕ್ಕನ ಮುನಿಸು ಕಂಡು ತಲ್ಲಣಿಸಿದ ರೇವತಿ
ರೇವತಿಯನ್ನೂ ನೋಡಿದ ಲೀಲಾಗೆ ಕೊಂಚ ದುಃಖವಾದರೂ ಅದನ್ನು ತಡೆದುಕೊಂಡು ಆಕೆಯನ್ನು ಮಾತನಾಡಿಸುವ ಗೋಜಿಗೆ ಹೋಗಲಿಲ್ಲ. ಲೀಲಾ ಇತ್ತ ಪವಿತ್ರ ಅವರಿಗೆ ಮೇಕಪ್ ಮಾಡುವುದರಲ್ಲಿ ನಿರತಳಾಗಿದ್ದಳು. ಬಳಿಕ ಕೇಕ್ ಕಟ್ ಮಾಡಲು ಪವಿತ್ರ ಅವರನ್ನು ಕರೆಸಿಕೊಂಡು ಬರುತ್ತಾಳೆ. ಹುಟ್ಟು ಹಬ್ಬ ಆಚರಣೆ ಮಾಡಲು ಅದ್ದೂರಿಯಾಗಿ ವೇದಿಕೆಯನ್ನು ಸಜ್ಜುಗೊಳಿಸಲಾಗಿತ್ತು. ಇದನ್ನೆಲ್ಲ ನೋಡಿದ ಪವಿತ್ರ ಮೂಕ ವಿಸ್ಮಿತಳಾಗಿದ್ದಾಳೆ. ಇನ್ನೂ ಕೇಕ್ ಅನ್ನು ಲೀಲಾ ಹಾಗೂ ಏಜೆ ಪವಿತ್ರಳ ಕೈ ಹಿಡಿದು ಕಟ್ ಮಾಡಿಸಿದ್ದು ಆಯಿತು.
ಎಲ್ಲಾ ವಿಚಾರ ಅಣ್ಣನಿಗೆ ಹೇಳಿದ ಪವಿತ್ರ
ಬಳಿಕ ಲೀಲಾ ಪೆಂಡ್ರೈವ್ ನಲ್ಲಿದ್ದಾ ವಿಡಿಯೋವನ್ನು ಮನೆ ಮಂದಿಗೆಲ್ಲಾ ತೋರಿಸುತ್ತಾಳೆ. ಆ ವಿಡಿಯೋವನ್ನು ನೋಡಿದ ಪವಿತ್ರಾಗೆ ಕೈ ಕಾಲು ನಡುಗುತ್ತದೆ. ಭಯ ಭೀತಗೊಳ್ಳುತ್ತಾಳೆ. ಬಳಿಕ ದೇವ್ನ ಗೋ ಮುಖ ವ್ಯಾಘ್ರ ಮೊಗವನ್ನು ಎಲ್ಲರೆದುರು ಅನಾವರಣ ಮಾಡುತ್ತಾಳೆ. ಪವಿತ್ರ ಆಕೆಯ ಸ್ಥಿತಿ ನೆನೆದು ಅಣ್ಣನ ಎದುರು ಬಿಕ್ಕಿ-ಬಿಕ್ಕಿ ಅಳುತ್ತಾಳೆ. ಆದರೆ ಇದೆಲ್ಲವನ್ನೂ ನೋಡಿದ ದೇವ್ ತನ್ನ ಪ್ಲಾನ್ ಉಲ್ಟಾ ಆಯಿತಲ್ವಾ ಎಂದು ಯೋಚಿಸುತ್ತಾ ಇರುತ್ತಾನೆ. ಮನದಲ್ಲಿ ಕೋಪ ನಡುಕ ಎರಡು ಶುರುವಾಗಿದ್ದರು ಅದನ್ನು ತೋರ್ಪಡಿಸಿಕೊಳ್ಳದೆ ಇರುತ್ತಾನೆ. ರೇವತಿಗೆ ತಾನು ಮಾಡ ಹೊರಟಿದ್ದ ತಪ್ಪಿನ ಅರಿವಾಗಿ ಬೇಸರಿಸಿಕೊಂಡು ಏಜೆ ಕೆನ್ನೆಯ ಮೇಲೆ ಬಾಸುಂಡೆ ಬರುವಂತೆ ಬಾರಿಸುತ್ತಾಳೆ. ಪವಿತ್ರ ಹೇಳಿದ ಮಾತಿನ ಪ್ರಕಾರ ದೇವ್ ಮೇಲೆ ಏಜೆ ಎನು ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಕಾದು ನೋಡಬೇಕಿದೆ.