Don't Miss!
- Finance ಕರ್ನಾಟಕದ ಹಲವೆಡೆ ಮಳೆ: ಬೆಂಗಳೂರಿಗೆ ಮಳೆ ಬರುವ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ
- Sports IPL 2024: RCB ಫ್ಯಾನ್ಸ್ ಕಂಡರೆ ಹೆಚ್ಚು ಹೆದರುತ್ತೇನೆ; ಅವೇಶ್ ಖಾನ್
- News BMTC: ಐಪಿಎಲ್ ಪ್ರೇಮಿಗಳಿಗೆ ಬಿಎಂಟಿಸಿ ಗುಡ್ನ್ಯೂಸ್-ಈ ಮಾರ್ಗಗಳಲ್ಲಿ ವಿಶೇಷ ಬಸ್ ಸೇವೆ
- Automobiles Mahindra Bolero: ಅಪಘಾತವಾದ ಕಾರಿಗೆ ಅದ್ದೂರಿ ಮಾಡಿಫಿಕೇಷನ್: ವಿಡಿಯೋಗೆ ವಾವ್ ಎನ್ನಲೇಬೇಕು!
- Lifestyle ನಿಮಗೆ ಬೀಳುವ ಕನಸುಗಳ ಹಿಂದಿರುವ ಅರ್ಥ, ಉದ್ದೇಶವೇನು ಗೊತ್ತಾ?
- Technology ಇಂದು ಒನ್ಪ್ಲಸ್ನ ಈ ಸ್ಪೆಷಲ್ ಮೊಬೈಲ್ನ ಫಸ್ಟ್ ಸೇಲ್!..ಬೆಲೆ ಎಷ್ಟು ಅಂತೀರಾ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವಿಕ್ರಂ ಜಾಲದಿಂದ ತಂಗಿಯನ್ನು ಹೇಗೆ ರಕ್ಷಿಸುತ್ತಾಳೆ ಲೀಲಾ?
ಲೀಲಾ, ವಿಕ್ರಂ ಬಂಡವಾಳ ಬಯಲು ಮಾಡಲು ತಯಾರಾಗಿ ನಿಂತಿದ್ದಾಳೆ. ಏಜೆ ಬಳಿ ವಿಕ್ರಂ ಬಗ್ಗೆ ಏನೇ ಹೇಳಿದರೂ ಅದು ಯಾವುದನ್ನು ಕೇಳದೆ ವಿಕ್ರಂ ಪರವಾಗಿಯೇ ಮಾತನಾಡುತ್ತಾ ಇರುತ್ತಾನೆ. ಇದನ್ನೆಲ್ಲ ನೋಡಿದ ಲೀಲಾಗೆ ಬಹಳ ಬೇಸರ ಆಗುತ್ತದೆ ಹೇಗಾದರೂ ಆಗಲಿ ಏನಾದರು ಆಗಲಿ ನಾನು ನಿಜ ವಿಚಾರ ಏಜೆಗೆ ಹೇಳಲೇ ಬೇಕು ಇಲ್ಲವಾದರೆ ನನ್ನ ತಂಗಿಯ ಜೀವನ ಹಾಳಾಗಿ ಹೋಗುತ್ತದೆ ಎಂದುಕೊಳ್ಳುತ್ತಾಳೆ.
ಈ ಮದುವೆಯನ್ನು ಹೇಗಾದರೂ ಮಾಡಿ ತಡೆಯಬೇಕು ಇಲ್ಲವಾದರೆ ನಾನು ತುಂಬಾ ದೊಡ್ಡ ಬೆಲೆ ತೆರಬೇಕಾಗುತ್ತದೆ ಎಂದು ಮನದಲ್ಲಿ ಅಂದುಕೊಳ್ಳುತ್ತಾಳೆ. ರೇವತಿಗೆ ನೋಡಿರುವ ಹುಡುಗ ವಿಕ್ರಂ ಕಡೆಯವನು. ಆತನೇ ಎಲ್ಲವನ್ನೂ ನೋಡಿ ಮತ್ತೆ ಏಜೆಗೆ ತಿಳಿಸಿ ಏಜೆ ಆ ಹುಡುಗನ ಬಳಿ ಮಾತನಾಡಿದ ಬಳಿಕವೇ ಲೀಲಾ ಗೆ ತೋರಿಸಿದ್ದು. ಆದರೆ ಲೀಲಾ, ಏಜೆ ಮಾತನ್ನು ಸ್ವಲ್ಪ ಕೂಡ ಕೇಳದೆ ವಿಕ್ರಂ ಬಗ್ಗೆ ಹೇಳಲು ಹೋಗುತ್ತಾಳೆ.
ಇದನ್ನು ನೋಡಿದ ಛಾಯಾ ಆತಂಕಗೊಳ್ಳುತ್ತಾಳೆ. ಆದರೆ ಲೀಲಾಳ ಮಾತನ್ನು ಅರ್ಧಕ್ಕೆ ತಡೆದ ಏಜೆ, ನನ್ನ ಬಳಿ ಇದನ್ನು ಹೇಳಬೇಡ. ವಿಕ್ರಂ ನೋಡಿದ್ದಾನೆ ಎಂದು ಹೇಳಿದರೆ ನಾನು ಅದನ್ನು ನೋಡುವ ಅಗತ್ಯ ಇಲ್ಲ. ಆದರೆ ಆ ಹುಡುಗ ನನಗೆ ಬಹಳ ಇಷ್ಟ ಆಗಿದ್ದಾನೆ. ಅದಾದ ಬಳಿಕ ನಾನು ನಿನಗೆ ತೋರಿಸಿದ್ದು ಎಂದು ಹೇಳುತ್ತಾನೆ. ಇದನ್ನು ಕೇಳಿದ ಛಾಯಾ ಸಿಕ್ಕಾಪಟ್ಟೆ ಖುಷಿಪಡುತ್ತಾಳೆ.
ಛಾಯಾ ಮುಖವಾಡ ಲೀಲಾ ಎದುರು ಕಳಚುತ್ತಾ
ನಿನಗೆ ವಿಕ್ರಂ ಅನ್ನು ಸಿಕ್ಕಿ ಹಾಕಿಸಲು ಸಾಧ್ಯ ಇಲ್ಲ ಲೀಲಾ ಏನೇ ಮಾಡಿದರೂ ಅದರಲ್ಲಿ ನೀನೇ ಸಿಕ್ಕಿ ಹಾಕಿಕೊಳ್ಳುತ್ತಿಯಾ. ನೀನು ಏನೇ ಮಾಡಿದರೂ ವಿಕ್ರಂ ಬಗ್ಗೆ ಹೇಳಲು ಅಸಾಧ್ಯ. ಆ ರೀತಿ ಬಲೆಯಲ್ಲಿ ಬಿದ್ದಿದ್ದಿಯಾ ಎಂದು ಮನದಲ್ಲಿ ಅಂದುಕೊಳ್ಳುತ್ತಾಳೆ. ಆಕೆ ಹೇಳುತ್ತಾಳೆ, ನಿಮಗೆ ಹೇಳಲು ಬರುತ್ತಿಲ್ಲ ಆದರೆ ನನಗೆ ಹೇಳದೆ ವಿಧಿ ಇಲ್ಲ ಏಜೆ ಹೇಗಾದರೂ ಈ ಮದುವೆಯನ್ನು ಕ್ಯಾನ್ಸಲ್ ಮಾಡಿ ಬಿಡಿ ಎಂದು ಹೇಳುತ್ತಾಳೆ. ಆಗ ಏಜೆ ''ನೀನು ಸ್ವಲ್ಪ ಗಮನವಿಟ್ಟು ಕೇಳು ನನಗೆ ಇದೀಗ ನಿನ್ನ ಮನದಲ್ಲಿ ನಡೆಯುತ್ತಿರುವ ವಿಚಾರ ತಿಳಿಯುತ್ತಾ ಇದೆ. ನೀನು ರೆವತಿಯನ್ನು ಬಹಳ ಹಚ್ಚಿಕೊಂಡು ಇದ್ದೀಯಾ. ಅವಳು ಮದುವೆ ಮಾಡಿಕೊಂಡು ಹೋದ ಬಳಿಕ ನಿನ್ನ ಬಳಿ ಇರುವುದಿಲ್ಲ ಎನ್ನುವ ಪೊಸೆಸಿವ್ ಮೆಸ್ ನಿನ್ನ ಕಾಡುತ್ತಿದೆ ಎನ್ನುತ್ತಾನೆ.
ಲೀಲಾಳನ್ನು ಸಮಾಧಾನ ಪಡಿಸಿದ ಏಜೆ
ಮದುವೆ ಮಾಡಿ ಕಳುಹಿಸಿ ಕೊಡುವ ವೇಳೆ ಎಷ್ಟೋ ಜನ ತಂದೆ ತಾಯಿಗೆ ಈ ರೀತಿ ಅನ್ನಿಸುವುದು ಸಹಜ ಕೂಡ. ನಿನಗೆ ಅದೇ ಕಾಡುತ್ತಿರುವುದು ಕೂಡ ಮದುವೆ ಆದ ಬಳಿಕ ಆಕೆ ನಿನ್ನ ಜೊತೆ ಇರಲ್ಲ ಅದಕ್ಕಾಗಿ ನೀನು ಈ ರೀತಿ ಮಾತನಾಡುತ್ತಾ ಇದ್ದೀಯಾ. ಎಂದು ಹೇಳುತ್ತಾನೆ ಇದನ್ನು ಕೇಳಿದ ಛಾಯಾಗೆ ನಗು ಆದರೆ ಲೀಲಾ ಗೆ ಮಾತ್ರ ಬಹಳ ಬೇಸರ ಆಗುತ್ತದೆ. ಸರಸು ಹಾಗೂ ಲಕ್ಷ್ಮೀ ಮದುವೆ ಬಗ್ಗೆ ಏನೇನೋ ಮಾತುಗಳನ್ನು ಆಡುತ್ತಾ ಇರುವಾಗ ಲೀಲಾ ಮಾತ್ರ ನೀವು ಆ ಥರ ಏನು ಮಾತನಾಡಬೇಡಿ. ನನಗೆ ಬಾವನ ಮೇಲೆ ನಂಬಿಕೆ ಇದೆ ಆದ ಕಾರಣ ನನಗೆ ಏನು ಟೆನ್ಶನ್ ಇಲ್ಲ. ನನ್ನ ಹಣೆ ಬರಹ ಕೆಟ್ಟು ಹಾಗೇನಾದರೂ ಆದರೆ ಬಾವನಿಗಾಗಿ ಎಲ್ಲ ಸಹಿಸಿಕೊಳ್ಳುತ್ತಾ ಇರುತ್ತೇನೆ ಎಂದು ಹೇಳುತ್ತಾಳೆ.
ಛಾಯಾಗೆ ಏಜೆಯನ್ನು ಜೈಲಿಗೆ ಕಳಿಸುವ ಗುರಿ
ಇದನ್ನು ಕೇಳಿ ಸರಸ್ವತಿ ಲಕ್ಷ್ಮಿ ಇಬ್ಬರು ಸುಮ್ಮನಾಗುತ್ತಾರೆ. ಛಾಯಾ ಬಳಿ ಏಜೆ ಹೇಳುತ್ತಾನೆ ಇದೀಗ ಮನೆಯಲ್ಲಿ ಏನೆಲ್ಲಾ ನಡೆಯುತ್ತಿದೆ. ಅಂತರ ಇದ್ದಿದ್ದರೆ ಬಹಳ ಖುಷಿ ಆಗುತ್ತಿತ್ತು ಛಾಯಾ ಎಂದಾಗ ಛಾಯಾ ಮನದಲ್ಲಿ ಮಾತ್ರ ಬೇರೆಯೇ ಓಡುತ್ತ ಇರುತ್ತದೆ. ಈ ವೇಳೆ ಛಾಯಾ ಹೇಳುತ್ತಾಳೆ 'ಹೌದು ಏಜೆ ನೀವು ಹೇಳಿದ್ದು ನಿಜ ಈಗ ಅದೆಷ್ಟು ಖುಷಿ ಪಡುತ್ತಾರೋ ಏನೋ ಎಂದು ಹೇಳುತ್ತಾರೆ ಇದನ್ನು ಕೇಳಿದ ಏಜೆ ಖುಷಿ ಆಗುತ್ತಾರೆ. ಛಾಯಾ ಮಾತ್ರ ಮನದಲ್ಲಿ ಏಜೆ ಯನ್ನು ಹೇಗಾದರೂ ಸಿಕ್ಕಿ ಹಾಕಿಸಿ ಜೈಲಿಗೆ ಕಳುಹಿಸಿದರೆ ಅಂತರ ಮನಸ್ಸಿಗೆ ಶಾಂತಿ ಸಿಗುತ್ತದೆ ಎಂದು ಮನದಲ್ಲಿ ಅಂದುಕೊಳ್ಳುತ್ತಾಳೆ. ಛಾಯಾ ಹಾಗೂ ವಿಕ್ರಂ ಬಂಡವಾಳವನ್ನು ಬಯಲು ಮಾಡಬೇಕು ಎಂಬುವುದು ಲೀಲಾ ಗುರಿ. ಆದರೆ ಲೀಲಾ ಮಾತನ್ನು ಏಜೆ ನಂಬುತ್ತಾನ ಎಂಬುವುದೇ ದೊಡ್ಡ ಪ್ರಶ್ನೆ ಆಗಿದೆ.