Don't Miss!
- News ಮೋದಿ ಕಾರ್ಯಕ್ರಮಕ್ಕೆ ಚಕ್ಕರ್, ಮಠಗಳಿಗೆ ಭೇಟಿ ಕೊಟ್ಟು ಪ್ರಚಾರ ಆರಂಭಿಸಿದ ಕೆಎಸ್ ಈಶ್ವರಪ್ಪ!
- Sports IPL 2024: ಮುಂಬೈ ಇಂಡಿಯನ್ಸ್ ತಂಡ ಸೇರಿದ ಮಾಜಿ ನಾಯಕ: ಹಾಲಿ ನಾಯಕನ ಆತಂಕ ದೂರ
- Lifestyle ಫ್ಲ್ಯಾಟ್ನಲ್ಲಿ ವಾಸಿಸಲು ಹೋಗುವಾಗ ಸಮೃದ್ಧಿ, ಆರೋಗ್ಯಕ್ಕಾಗಿ ವಾಸ್ತು ಹೀಗಿದೆಯೇ ಎಂದು ನೋಡಬೇಕು
- Technology ಮಾರುಕಟ್ಟೆಗೆ ಎಂಟ್ರಿ ಕೊಟ್ಟ ಇನ್ಫಿನಿಕ್ಸ್ ನೋಟ್ 40 ಪ್ರೊ ಪ್ಲಸ್ 5G ಫೋನ್: ಫೀಚರ್ಸ್ ಹೇಗಿದೆ?
- Automobiles ಡಿ ಬಾಸ್ ಪತ್ನಿ ಖರೀದಿಸಿದ್ದು ಸಾಮಾನ್ಯ ಕಾರಲ್ಲ: ಬಂಗಲೆಯಂತಹ ಇಂಟೀರಿಯರ್!
- Finance ಭಾರತದಲ್ಲಿ ಚಿನ್ನದ ಬೆಲೆ ಇಳಿಕೆ, ನಿಮ್ಮ ನಗರದಲ್ಲಿ 24 ಕ್ಯಾರೆಟ್ ಚಿನ್ನದ ದರ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಲೀಲಾ ಮೇಲೆ ಮುನಿಸಿಕೊಂಡ ಕೌಸಲ್ಯ ರೇವತಿ ಮದುವೆ ನಿಲ್ಲಿಸುತ್ತಾಳ ಲೀಲಾ?
ಏಜೆ ತನ್ನ ಮಾತು ಕೇಳುತ್ತಿಲ್ಲ. ನನ್ನ ತಂದೆ ತಾಯಿ ಮತ್ತು ತಂಗಿ ನನ್ನ ಮಾತು ಕೇಳಬಹುದು ಎಂದುಕೊಂಡು ರೇವತಿ ಮದುವೆ ನಿಲ್ಲಿಸಲು ಲೀಲಾ ತನ್ನ ತವರು ಮನೆಗೆ ಹೋಗಿದ್ದಾಳೆ. ತಂದೆಯ ಮನೆಗೆ ಬಂದು ಬಾಗಿಲು ಬಡಿದ ವೇಳೆ ಬಾಗಿಲು ತೆರೆದಿದ್ದು ಮಾತ್ರ ವಿಕ್ರಂ. ಆತನನ್ನು ಕಂಡ ಕೂಡಲೇ ಲೀಲಾ ಶಾಕ್ ಆಗುತ್ತಾಳೆ ಈತ ಯಾಕೆ ನಮ್ಮ ಮನೆಗೆ ಬಂದಿದ್ದಾನೆ ಎಂದು ಯೋಚನೆ ಮಾಡುತ್ತಾಳೆ. ತಾಯಿ ಕೌಸಲ್ಯ, ಲೀಲಾ ಬಂದಿರುವುದನ್ನು ಗಮನಿಸಿ ಅರೆರೆ ಲೀಲಾ ಹೇಗಿದ್ದೀಯಾ ಚೆನ್ನಾಗಿ ಇದ್ದೀಯಾ ಎಂದು ಕೇಳುತ್ತಾಳೆ. ಇದನ್ನು ಕೇಳಿದ ಲೀಲಾ ಚೆನ್ನಾಗಿ ಇದ್ದೇನೆ ಇವರೇನು ಇಲ್ಲಿ ಬಂದಿದ್ದು ಎಂದು ಕೇಳುತ್ತಾಳೆ.
ಇದನ್ನು ಕೇಳಿದ ಕೌಸಲ್ಯ ಇವರು ನಮಗೆ ಒಂದು ತರ ಆಪತ್ ಬಾಂಧವ ಇದ್ದ ಹಾಗೆ ಇವರು ನಮ್ಮ ವಿಕ್ರಂ ಎಂದು ಪರಿಚಯ ಮಾಡಿಸುತ್ತಾಳೆ. ಇದನ್ನು ಕೇಳಿದ ಲೀಲಾ ಏನು ನಮ್ಮ ವಿಕ್ರಮನ ಇದು ಯಾವಾಗಲಿಂದ ನಿನ್ನೆ ಮೊನ್ನೆ ಬಂದವರು ಅಮ್ಮನಿಗೆ ಹೆಚ್ಚಾದರ ಎಂದು ಮನದಲ್ಲಿ ಅಂದುಕೊಳ್ಳುತ್ತಾ ಇರುವಾಗ ಕೌಸಲ್ಯ ಟೀ ಮಾಡಿಕೊಂಡು ಬರಲು ಹೋಗುತ್ತಾಳೆ. ಇದನ್ನು ನೋಡಿದ ಕೌಸಲ್ಯ ಈ ವೇಳೆ ವಿಕ್ರಂಗೆ ತನ್ನ ಮನೆಗೆ ಏತಕ್ಕಾಗಿ ಬಂದದ್ದು. ತನ್ನ ತಂಗಿ ಭವಿಷ್ಯ ಹಾಳು ಮಾಡಲು ಯಾರಿಂದ ಕೂಡ ಸಾಧ್ಯ ಇಲ್ಲ ಎಂದು ಹೇಳುತ್ತಾಳೆ ಇದನ್ನು ಕೇಳಿದ ವಿಕ್ರಂ ನಗುತ್ತಾನೆ.
ಲೀಲಾ ತವರು ಮನೆಯಲ್ಲಿ ವಿಕ್ರಂ
ನೀನು ಆ ಫೂಟೇಜ್ ನನಗೆ ಕೊಡಲಿಲ್ಲ ಎಂದರೆ ನಿನ್ನ ತಂಗಿ ಜೀವನ ಹಾಳು ಮಾಡುತ್ತೇನೆ ಆದ ಕಾರಣ ನನಗೆ ಅದನ್ನು ನೀಡದೆ ನಾನು ಇಲ್ಲಿಂದ ಹೋಗುವುದಿಲ್ಲ ಎಂದು ಹೇಳುತ್ತಾನೆ. ಅದಕ್ಕೆ ಲೀಲಾ ಹೇಳುತ್ತಾಳೆ ನಾನು ಈ ಮದುವೆ ನಾ ನಿಲ್ಲಿಸುತ್ತೇನೆ. ನನಗೆ ನನ್ನ ತಂಗಿ ಜೀವನ ಮುಖ್ಯ ಎಂದು ಹೇಳುತ್ತಾಳೆ ಲೀಲಾ. ಇದನ್ನು ಕೇಳಿದ ವಿಕ್ರಂಗೆ ಸಿಟ್ಟು ಬರುತ್ತದೆ. ಅದೇ ವೇಳೆ ಕೌಸಲ್ಯ ಟೀ ಕಪ್ ಹಿಡಿದುಕೊಂಡು ಬರುತ್ತಾಳೆ.
ಅಮ್ಮನ ಬಳಿ ಮದುವೆ ನಿಲ್ಲಿಸಲು ಹೇಳಿದ ಲೀಲಾ
ಟೀ ತೆಗೆದುಕೊಂಡ ಲೀಲಾ ಅಮ್ಮನ ಬಳಿ, 'ಅಮ್ಮ ಚುಕ್ಕಿ ಮದುವೆ ತಯಾರಿ ನಿಲ್ಲಿಸಿ. ಈ ಮದುವೆ ನಡೆಯುವುದಿಲ್ಲ. ನಡೆಯಲು ನಾನು ಬಿಡುವುದು ಇಲ್ಲ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಕೌಸಲ್ಯಾಗೆ ಬಹಳ ಕೋಪ ಬರುತ್ತದೆ. ಮದುವೆಗಾಗಿ ಎಲ್ಲಾ ಅರೇಂಜ್ ಮೇಂಟ್ ಮಾಡಿ ಆಗಿದೆ ಆದರೆ ಇದೀಗ ಮದುವೆ ಆಗುವುದು ಇಲ್ಲ ಎಂದರೆ ಏನು ಅರ್ಥ. ಮದುವೆ ನಡೆದೇ ನಡೆಯುತ್ತದೆ. ನಿನಗೆ ಯಾಕೆ ಇಂಥ ಯೋಚನೆ ಬಂತು ಎಂದು ಹೇಳಿದಾಗ ಅಲ್ಲಿಗೆ ಬಂದ ಲೀಲಾ ತಂದೆ ಕೂಡ ಶಾಕ್ ಆಗುತ್ತಾರೆ.
ಲೀಲಾ ಮಾತಿಗೆ ಚಂದ್ರ ಶೇಖರ್ ಶಾಕ್
ಮದುವೆಗೆ ಸಾಕಷ್ಟು ಖರ್ಚು ಆಗಿದೆ. ಮದುವೆ ಬೇಡ ಎಂದು ಈಗ ಹೇಳಿ ಬಿಟ್ಟರೆ ಏನು ಅರ್ಥ ಇದು ಸರಿಯಾದ ನಿರ್ಧಾರ ಅಲ್ಲ. ಮಗಳ ಈ ಯೋಚನೆಗೆ ಏನು ಹೇಳಬೇಕೋ ಎಂದು ತಿಳಿಯದೇ ಸುಮ್ಮನಾಗುತ್ತಾರೆ. ಈ ವೇಳೆ ಕೌಸಲ್ಯ ಬಾಯಿಗೆ ಬಂದ ಹಾಗೆ ಬಯ್ಯುತ್ತಾ ಇರುತ್ತಾಳೆ ಈ ವೇಳೆ ಅಲ್ಲಿಗೆ ಬಂದ ಚುಕ್ಕಿ ಅಕ್ಕ ದಯಮಾಡಿ ಇಲ್ಲಿಂದ ಹೋಗು ಅಮ್ಮ ಬೈಯಲು ಶುರು ಮಾಡಿದರೆ ಮತ್ತೆ ನಿಲ್ಲಿಸುವುದಿಲ್ಲ. ಆ ಕಾರಣ ದಯಮಾಡಿ ಹೋಗಿ ಬಿಡು ಎಂದು ಬೇಸರದಿಂದ ಹೇಳುತ್ತಾಳೆ.
ಲೀಲಾಳನ್ನು ಮನೆಯಿಂದ ಹೊರ ಕಳಿಸಿದ ರೇವತಿ
ಇದನ್ನು ಕೇಳಿದ ಲೀಲಾ, ಚುಕ್ಕಿ ನೀನು ನನ್ನ ಅರ್ಥ ಮಾಡಿಕೊಳ್ಳುತ್ತಾ ಇಲ್ಲ ಅಲ್ವಾ ಎಂದು ಹೇಳುತ್ತಾಳೆ ಇದನ್ನು ಕೇಳಿದ ರೇವತಿ, ದುಃಖದಿಂದ ಕಣ್ಣೀರು ಹಾಕುತ್ತಾಳೆ. ಕೌಸಲ್ಯಾಗೆ ಮಾತ್ರ ಕೆಂಡದಂಥ ಕೋಪ ಬಂದಿರುತ್ತದೆ. ಇನ್ನು ಮನೆಯಿಂದ ಹೊರ ನಡೆದ ಲೀಲಾ ನೇರವಾಗಿ ತನ್ನ ಮನೆಗೆ ಬರುತ್ತಾಳೆ. ಪೆಂಡ್ರೈವ್ ಕೊಟ್ಟರೆ ಏಜೆ ಮರ್ಯಾದೆ ಹೋಗುತ್ತೆ. ಇಲ್ಲ ಎಂದರೆ ಚುಕ್ಕಿ ಜೀವನ ಹಾಳಾಗಿ ಹೋಗುತ್ತದೆ. ಏನು ಮಾಡಲಿ ಮದುವೆ ನಿಲ್ಲಿಸೋಣ ಎಂದು ಹೇಳಿದರೆ ಅಮ್ಮ ನನ್ನ ಮೇಲೆ ತಪ್ಪು ತಿಳಿದಳು. ಆದರೆ ಪರಿಸ್ಥಿತಿ ಬೇರೆ ಥರ ಇರುವುದರಿಂದ ವಿಷಯವನ್ನು ಯಾರ ಬಳಿ ಹೇಳಿಕೊಳ್ಳಲು ಆಗದೆ ಸಂಕಟ ಆನಿಭವಿಸುವ ಹಾಗೆ ಆಯಿತಲ್ವ ಎಂದು ಪರದಾಡುತ್ತಾಳೆ.