Don't Miss!
- Finance ಆದಾಯ ತೆರಿಗೆ ಇಲಾಖೆಯಿಂದ ಕಾಂಗ್ರೆಸ್ಗೆ 1,823 ಕೋಟಿ ರೂ. ನೋಟಿಸ್: ತೆರಿಗೆ ಭಯೋತ್ಪಾದನೆ ನಿಲ್ಲಲೇಬೇಕು ಎಂದ ಪಕ್ಷ
- News Namma Metro Purple Line: ದೈನಂದಿನ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರೀ ಇಳಿಕೆ, ಕಾರಣಗಳೇನು?
- Sports Kohli vs Gambhir: ಹೈ-ವೋಲ್ಟೇಜ್ ಪಂದ್ಯದ ಬಗ್ಗೆ ಕೌಂಟರ್ ನೀಡಿದ ದಿನೇಶ್ ಕಾರ್ತಿಕ್
- Technology Tecno: ಬಹುನಿರೀಕ್ಷಿತ ಟೆಕ್ನೋ ಪೋವಾ 6 ಪ್ರೊ ಲಾಂಚ್! 12GB RAM.. 6000mAh ಬ್ಯಾಟರಿ.. ಬೆಲೆ ಎಷ್ಟು?
- Automobiles ಇನ್ಮುಂದೆ ಟೋಲ್ ಪ್ಲಾಜಾಗಳು ಕಣ್ಮರೆ: ಖುಷಿ ಪಡುವ ಮುನ್ನ ಈ ಸುದ್ದಿ ನೋಡಿ...
- Lifestyle ಬಾಯಲ್ಲಿ ನೀರು ತರಿಸುವ ಮಾವಿನ ಕಾಯಿ ಚಟ್ನಿ..! 5 ನಿಮಿಷದಲ್ಲಿ ರೆಡಿ..!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಜೊತೆ ಜೊತೆಯಲಿ: ಆರ್ಯವರ್ಧನ್ ರಾಜನಂದಿನಿಯನ್ನು ಪ್ರೀತಿ ಮಾಡಿದ್ದು ನಿಜನಾ?
'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಈಗಾಗಲೇ ಸಾಕಷ್ಟು ಟ್ವಿಸ್ಟ್ಗಳು ಎದುರಾಗಿವೆ. ಆದರೂ ಕೂಡ ಈ ಧಾರಾವಾಹಿಯ ಕುರಿತು ಪ್ರೇಕ್ಷಕರಿಗೆ ತಿಳಿದಿರದ ಅನೇಕ ರಹಸ್ಯಗಳಿವೆ. ಆರ್ಯವರ್ಧನ್ ನಿಜಕ್ಕೂ ರಾಜನಂದಿನಿಯನ್ನು ಪ್ರೀತಿಸಿರುವುದಿಲ್ಲ. ದುಡ್ಡಿಗಾಗಿ ಆತ ಪ್ರೀತಿ ನಾಟಕವಾಡುತ್ತಾನೆ. ಅನುಗೆ ರಾಜನಂದಿನಿ ವಿಷಯ ಹೇಳಿ ಅವಳ ಅನುಕಂಪ ಪಡೆಯುತ್ತಾನೆ. ಈ ಮೋಸದಲ್ಲಿ ಝೇಂಡೆಯ ಶಾಮೀಲು ಇದೆ. ಆದರೆ ಆತ ಅನುಳನ್ನು ಮಾತ್ರ ನಿಜಕ್ಕೂ ಇಷ್ಟಪಟ್ಟಿರುತ್ತಾನೆ. ರಾಜನಂದಿನಿಯೇ ಅನು ಆಗಿ ಪುನರ್ಜನ್ಮ ಪಡೆದಿರುವುದು ಅವನಿಗೆ ಆರಂಭದಲ್ಲಿ ಗೊತ್ತಿರುವುದಿಲ್ಲ. ಆದರೆ ಆರ್ಯವರ್ಧನ್ ಮದುವೆಯಾದ ಬಳಿಕ ಅನುಗೆ ಈ ಸತ್ಯ ಗೊತ್ತಾಗುತ್ತದೆ. ಆಮೇಲೆ ಆರ್ಯವರ್ಧನ್ ನಿಜಕ್ಕೂ ರಾಜನಂದಿನಿ ಪ್ರೀತಿಸಿದ್ನಾ? ಅಥವಾ ತನ್ನನ್ನು ಪ್ರೀತಿಸಿದ್ನಾ ಎಂಬ ಗೊಂದಲದಲ್ಲಿ ಅನು ಇರುತ್ತಾಳೆ.
ಇದೀಗ ಅನುಗೆ ಆರ್ಯವರ್ಧನ್ ಅಸಲಿ ಮುಖವಾಡ ಗೊತ್ತಾಗಿದೆ. ಅಸಲಿಗೆ ಒಳ್ಳೆಯವನ ರೀತಿಯಲ್ಲಿ ನಟಿಸುತ್ತಿರುವ ಆರ್ಯವರ್ಧನ್ ರಾಜನಂದಿನಿ ನಂಬಿಕೆಗೆ ದ್ರೋಹ ಮಾಡಿರುವುದಂತು ಅಕ್ಷರಶಃ ಸತ್ಯ. ಆಸ್ತಿ ವ್ಯಾಮೋಹಕ್ಕೆ ಮಾವನನ್ನೇ ಕೊಲೆ ಮಾಡಿಸಿದ ಆರ್ಯವರ್ಧನ್ ಕರಾಳ ಮುಖ ಇದೀಗ ಅನು ಮುಂದೆ ಅನಾವರಣ ಆಗಿದೆ.
ಹಣದ ಮೋಹಕ್ಕೆ ಬಿದ್ದ ಆರ್ಯವರ್ಧನ್
ಪ್ರೀತಿಸಿ ಮದುವೆಯಾದ ಆರ್ಯವರ್ಧನ್ ಈ ರೀತಿ ತನ್ನ ಮೊದಲ ಹೆಂಡತಿ ಹಾಗೂ ಮಾವನಿಗೆ ಮಾಡಿದ ಘೋರ ಅನ್ಯಾಯ ಮಾಡಿದ್ದು, ಆಕೆಯ ಮನಸ್ಸನ್ನೇ ವಿಚಲಿತರನ್ನಾಗಿ ಮಾಡಿಸಿದೆ. ಆರ್ಯವರ್ಧನ್ ಬಣ್ಣದ ಮಾತುಗಳಿಗೆ ಮರುಳಾಗಿ ರಾಜನಂದಿನಿ ಮೋಸ ಹೋದಳು. ಇದೀಗ ಅನು ಸರದಿಯೂ ಹಾಗೆನಾ ಅಥವಾ ಅನು ಮೇಲೆ ಆರ್ಯವರ್ಧನಿಗೆ ನಿಜವಾಗ್ಲೂ ಪ್ರೀತಿಯಾಗಿದೆಯಾ ಎಂಬುವುದನ್ನು ಧಾರಾವಾಹಿ ನೋಡುವವರ ಕುತೂಹಲಕ್ಕೆ ಕಾರಣವಾಗಿದೆ.
Recommended Video
ಆರ್ಯವರ್ಧನ್ ಕುತಂತ್ರ ಗೊತ್ತಾಗಿದೆ
ರಾಜನಂದಿನಿಗೆ ಆರ್ಯವರ್ಧನ್ ಕುತಂತ್ರದ ಅರಿವಾಗಿದೆ. ಇದೀಗ ಆಫೀಸಿನಲ್ಲೂ ಆರ್ಯವರ್ಧನ್ ದರ್ಬಾರ್ ಜೋರಾಗಿಯೇ ನಡಿತಿದೆ. ಆರ್ಯವರ್ಧನ್ ಎಲ್ಲಾ ಆಸ್ತಿಯೂ ಇದೀಗ ನನ್ನ ಪಾಲಿಗೆ ಬರುತ್ತೆ ಎಂದು ಹಗಲುಗನಸು ಕಾಣುತ್ತಿರುವುದಂತು ಸತ್ಯ. ಆಫೀಸಿನಲ್ಲಿ ಎಲ್ಲಾ ಕೆಲಸಗಾರರನ್ನು ಕರೆದು ಮೀಟಿಂಗ್ ಕೂಡ ನಡೆಸಿದ್ದಾರೆ. ಇದೀಗ ಸತ್ಯ ತಿಳಿದ ರಾಜನಂದಿನಿ, ಆರ್ಯವರ್ಧನ್ ವಿರುದ್ಧ ಸೇಡು ತೀರಿಸಿಕೊಳ್ಳಲು ತಯಾರಾಗಿದ್ದಾಳೆ. ತಂದೆಗೂ ಸಾವಿನ ಹಲವು ದಿನಗಳ ಹಿಂದಷ್ಟೇ ಆರ್ಯವರ್ಧನ್ ಮುಖವಾಡ ಗೊತ್ತಾಗಿತ್ತು ಎಂದು ರಾಜ ನಂದಿನಿಗೆ ಜಲಾಂಧರ್ ತಿಳಿಸಿರುತ್ತಾನೆ.
ಜೈಲಿನಲ್ಲಿ ಅಸಲಿ ವಿಷಯ ರಿವೀಲ್
ಇದೀಗ ಜಲಾಂಧರ್ ಕೂಡ ಜೈಲು ಪಾಲಾಗಿರುವುದು ರಾಜ ನಂದಿನಿಗೆ ತಿಳಿದು ಜಲಾಂಧರನ್ನು ಭೇಟಿಯಾಗಲು ರಾಜನಂದಿನಿ ಆಗಮಿಸಿತ್ತಾಳೆ. ಆ ವೇಳೆ ಜಲಾಂಧರ್ ಎಲ್ಲಾ ವಿಚಾರಗಳನ್ನು ಹೇಳುತ್ತಾನೆ. ಆದ್ರೆ ಇದಿಕ್ಕಿಂತ ಮುಂಚೆನೂ ರಾಜನಂದಿನಿಗೆ ಆರ್ಯವರ್ಧನ್ ಮುಖವಾಡ ಕಳಚುವ ಪ್ರಯತ್ನ ಜಲಾಂಧರ್ ಮಾಡಿರುತ್ತಾನೆ. ಆರ್ಯ ತನ್ನ ಆಫೀಸಿನಲ್ಲಿ ಮಾಡಿದ ಕುತಂತ್ರ ಕೆಲಸದಿಂದ ಆತನನ್ನು ಕೆಲಸದಿಂದಲೇ ತೆಗೆದು ಹಾಕಿದ ವಿಚಾರ ಹೀಗೆ ಹಲವು ವಿಚಾರಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾನೆ ಜಲಾಂಧರ್.
ಸೇಡು ತೀರಿಸಿಕೊಳ್ಳಲು ಮುಂದಾದ ರಾಜನಂದಿನಿ
ಇದೀಗ ಜಲಾಂಧರ್ ಜೈಲು ಪಾಲು ಆಗಿದನ್ನು ನೋಡಿದ ಹೆಂಡತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇನ್ನಾದರೂ ನಾನು ಸುಳ್ಳು ಹೇಳಿ ಏನು ಪ್ರಯೋಜನ ಎಂದು ರಾಜನಂದಿನಿ ಬಳಿ ಹೇಳುತ್ತಾನೆ. ರಾಜ ನಂದಿನಿಗೆ ದುಃಖ ತಡೆದುಕೊಳ್ಳಲಾಗದೇ ಅತ್ತೆಬಿಡುತ್ತಾಳೆ. ಹಾಗೆಯೇ ಆರ್ಯವರ್ಧನ್ ವಿರುದ್ಧ ರಾಜನಂದಿನಿಗೆ ಪ್ರೀತಿ ಮಾತ್ರ ಇರುತ್ತದೆ ಅದು ಸೇಡಾಗಿ ಪರಿವರ್ತನೆ ಆಗುತ್ತದೆ. ಆರ್ಯವರ್ಧನ್ಗೆ ಬುದ್ಧಿ ಕಲಿಸದೇ ನಾನು ಬಿಡುವುದಿಲ್ಲ ಎಂದು ರಾಜನಂದಿನಿ ಶಪಥ ಮಾಡಿದ್ದಾಳೆ. ಪ್ರೇಕ್ಷಕರಿಗೆ ಇನ್ನೂ ಕುತೂಹಲ ಜಾಸ್ತಿಯಾಗಿದೆ. 'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಇನ್ನೇನೆಲ್ಲಾ ನಡೆಯುತ್ತೆ ಎಂಬುವುದನ್ನು ಕಾದು ನೊಡಬೇಕಾಗಿದೆ.