Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಖಿಲಮ್ಮನ ಪರೀಕ್ಷೆಯಲ್ಲಿ ಪಾಸಾಗುತ್ತಾಳಾ ಪಾರು?
ಪಾರು ಧಾರವಾಹಿ ಇದೀಗ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಪಾರು ಪಾತ್ರಧಾರಿ ಮೋಕ್ಷಿತಾರವರ ಅಭಿನಯ ಮೆಚ್ಚುಗೆಗೆ ಪಾತ್ರವಾಗಿದೆ. ಇದೀಗ ಪಾರುವನ್ನು ಹೊಸ ಅವತಾರದಲ್ಲಿ ನೋಡಿದ ಜನ ಖುಷಿಯಾಗಿದ್ದಾರೆ. ಅಖಿಲಾಂಡೇಶ್ವರಿಗೆ ಪಾರುವನ್ನು ಸೊಸೆ ಎಂದು ಒಪ್ಪಿಕೊಳ್ಳಲು ಹಾಗೆಯೆ ಅರಸನ ಕೋಟೆಯ ಪಟ್ಟದರಸಿ ಆಗಲು ಇನ್ನೇನು ಪಾರುಗೆ ಕೆಲವು ದಿನಗಳು ಸಾಕು ಎನಿಸಿದೆ. ಅಖಿಲಮ್ಮ ಕೊಟ್ಟ ಎಲ್ಲಾ ಟಾಸ್ಕ್ಗಳನ್ನು ಉತ್ತಮವಾಗಿ ನಿಭಾಯಿಸುತ್ತಿದ್ದಾಳೆ ಪಾರು. ಇನ್ನು ಪಾರುಗೆ ಸಾಥ್ ಕೊಡುತ್ತಿರುವ ಪಾರು ಗಂಡ ಆದಿಯಂತು ಎಲ್ಲರಿಗೂ ಅಚ್ಚುಮೆಚ್ಚು. ಸಿಕ್ಕಿದ್ರೆ ಇಂಥಹ ಗಂಡ ಸಿಗಬೇಕು ಎಂದು ಹುಡುಗಿಯರು ಮಾತನಾಡಿಕೊಳ್ಳುತ್ತಿದ್ದಾರಂತೆ.
ಅದೆಷ್ಟೇ ಕಷ್ಟವಾದರೂ ಈ ಟಾಸ್ಕ್ನಲ್ಲಿ ಉತ್ತಮ ಪ್ರದರ್ಶನ ನೀಡಬೇಕು, ಅಖಿಲಮ್ಮನ ಮನಸ್ಸು ಗೆಲ್ಲಬೇಕು ಎನ್ನುವುದು ಪಾರುವಿನ ಹೆಬ್ಬಯಕೆ, ಇದಕ್ಕೆ ಧಾಮಿನಿಯನ್ನು ಬಿಟ್ಟು ಉಳಿದ ಎಲ್ಲರೂ ಪಾರುವಿನ ಬೆಂಗಾವಲಾಗಿದ್ದಾರೆ. ಪಾರುವಿನ ಸ್ಥಾನದಲ್ಲಿ ಅಖಿಲಮ್ಮನನ್ನು ಕಾಣಲು ಧಾಮಿನಿಗೆ ಬಹಳ ಸಂಕಟವಾಗುತ್ತಿದೆ. ಆದರೆ ಸ್ವಲ್ಪ ಯಾಮಾರಿದರು ಪಾರುಗೆ ಈ ಟಾಸ್ಕ್ನಲ್ಲಿ ಗೆಲ್ಲಲು ಅಸಾಧ್ಯ ಎನ್ನುವ ನೆನಪು ಪಾರುಗೆ ಆದಿ ಮಾಡುತ್ತಲೇ ಇರುತ್ತಾನೆ. ಅಖಿಲಮ್ಮ ಅದೆಷ್ಟೇ ಚೆನ್ನಾಗಿ ಊಟ ಮಾಡಿ ಬಡಿಸಿದ್ದಾರೆ. ಅಖಿಲಾಂಡೇಶ್ವರಿ ಊಟ ಚೆನ್ನಾಗಿದ್ಯಾ ಕೇಳಿದಾಗ ಎಲ್ಲರು ಚೆನ್ನಾಗಿದೆ ಎಂದಾಗ ಪಾರು ಮಾತ್ರ ನಿವ್ಯಾಕೆ ಸುಳ್ಳು ಹೇಳುತ್ತಿದ್ದೀರ ಪಾಯಸಕ್ಕೆ ಸಕ್ಕರೆ ಜಾಸ್ತಿಯಾಗಿದೆ, ಅನ್ನ ಬೆಂದಿಲ್ಲ, ಪಲ್ಯಕ್ಕೆ ಖಾರ ಕಮ್ಮಿಯಾಗಿದೆ ಎಲ್ಲದಕ್ಕೂ ಹದವಾಗಿದ್ದರೆ ಮಾತ್ರ ಊಟ ಚೆನ್ನಾಗಿರುವುದು ಎಂದು ಹೇಳುತ್ತಾಳೆ. ಇದನ್ನು ಕೇಳಿಸಿಕೊಂಡ ಅಖಿಲಾಂಡೇಶ್ವರಿ ಯಾವುದೇ ಕೆಲಸ ಮಾಡಲು ಆತ್ಮವಿಶ್ವಾಸ ಮುಖ್ಯ ಮನೆ ಕೆಲಸದಲ್ಲಿ ಮಾತ್ರ ಅಲ್ಲ ಎಲ್ಲ ಕೆಲಸದಲ್ಲೂ ಆತ್ಮವಿಶ್ವಾಸ ಬೇಕು ಎಂದು ಹೇಳಿ ಆತ್ಮವಿಶ್ವಾಸ ಎಂಬ ಟಾಸ್ಕ್ನಲ್ಲಿ ಈಗಲೇ ಏನು ಹೇಳಲಾರೆ ಇನ್ನು ಮುಂದಿನ ದಿನಗಳಲ್ಲಿ ಕಾದು ನೋಡೋಣ ಎಂದು ಹೇಳಿ ಅಖಿಲಾಂಡೇಶ್ವರಿ ಒಳ ಹೋಗುತ್ತಾರೆ. ಇದನ್ನು ಕಂಡ ಪಾರು ನಾನು ಇಷ್ಟೆಲ್ಲ ಮಾಡಿದರು ಅಖಿಲಮ್ಮ ಮಾತ್ರ ನನ್ನ ಅಧಿಕಾರ ವಾಪಸ್ ತೆಗೆದುಕೊಳ್ಳುತ್ತಿಲ್ಲವಲ್ಲ ಎಂದು ಮನದಲ್ಲಿ ಅಂದುಕೊಳ್ಳುತ್ತಿರುತ್ತಾಳೆ.
ಅಖಿಲಾಂಡೇಶ್ವರಿ ಇತ್ತೀಚಿಗೆ ಅರಸನ ಕೋಟೆಯ ಸೊಸೆಯಾಗಿ ಪಾರ್ವತಿ ಯಾವ ರೀತಿ ಇರಬೇಕು, ಯಾವ ರಿತಿ ಗತ್ತು ಗಾಂಭೀರ್ಯದಲ್ಲಿ ಇರಬೇಕೆಂದು ಹೇಳಿಕೊಡುತ್ತಿದ್ದಾರೆ. ಇತ್ತ ಹೆಂಡತಿಗೆ ಯಾವುದೇ ರೀತಿಯ ಕಷ್ಟ ಬಂದರು ಆದಿ ಅದನ್ನು ಸರಿದೂಗಿಸಿಕೊಂಡು ಹೋಗುತ್ತಿದ್ದಾನೆ. ಇನ್ನು ಪ್ರೀತು ಮತ್ತು ಜನನಿ ಮಾತ್ರ ಪಾರು ಎಲ್ಲ ರೀತಿಯಲ್ಲೂ ಟಾಸ್ಕ್ ಪೂರೈಸಿ ಅತ್ತೆಯ ಪ್ರೀತಿಗೆ ಭಾಜನಳಾಗಬೇಕೆಂದು ಕಾಯುತ್ತಿದ್ದಾರೆ.
ಅಖಿಲಾಂಡೆಶ್ವರಿ ಆಫೀಸಿನ ವಿಚಾರದಲ್ಲಿ ಪಾರುವನ್ನು ಎಳೆದು ತಂದಿದ್ದಾಳೆ. ಅರಸನ ಕೋಟೆಯ ಅರಸಿಯಂತಿರೋ ಪಾರು ಇದೀಗ ಅಖಿಲಾಂಡೇಶ್ವರಿ ಸವಾಲಿನ ಕೆಲಸ ನೀಡಿದ್ದಾರೆ. ಹೂಡಿಕೆ ದಾರರನ್ನು ಹುಡುಕುವ ಕೆಲಸ ನಿಡಿದ್ದಾರೆ. ಹರ್ಬಲ್ ಸೋಪ್ನ್ನು ಮಾರ್ಕೆಟಿಗೆ ಬಿಡುವ ಯೋಚನೆ ಮಾಡುತ್ತಿದ್ದಾರೆ ಅಖಿಲಮ್ಮ, ಇದಕ್ಕೆ 500 ಕೋಟಿ ವೆಚ್ಚ ತಗುಲುತ್ತೆ ಇದರಲ್ಲಿ 300 ಕೋಟಿಯನ್ನು ಹೂಡಿಕೆ ಮಾಡುವ ಹೂಡಿಕೆ ದಾರರನ್ನು ಹುಡುಕು ಸವಾಲಿನ ಕೆಲಸ ಪಾರ್ವತಿಗೆ ನೀಡಿದ್ದಾರೆ. ಇದನ್ನು ಕೇಳಿದ ಕೂಡಲೇ ಪಾರ್ವತಿ ಶಾಕ್ ಆಗಿದ್ದಾಳೆ. ರೂಮಿನ ಮಂಚದ ಮೇಲೆ ಮಲಗಿದ್ದ ಪಾರ್ವತಿಯನ್ನು ಆದಿ ಪ್ರೀತು ಜನನಿ ಎದ್ದೇಳಿಸಲು ಬರುತ್ತಾರೆ, ಪಾರು ಹೇಳುತ್ತಾಳೆ 300 ರೂ. ಯಾರಲ್ಲಾದ್ರು ಕೇಳಿದ್ರೆ ಸಿಗಬಹುದೇನು ಆದ್ರೆ 300 ಕೋಟಿ ನಾನು ಯಾರ ಬಳಿ ಕೇಳಲಿ ಎಂದು ಹೇಳಿದಾಗ ಎಲ್ಲರ ಮನದಲ್ಲೂ ನಗು ಮೂಡುವುದು ಸಹಜ. 300 ಕೋಟಿ ಹೂಡಿಕೆ ದಾರರನ್ನು ಯಾವ ರೀತಿ ಹುಡುಕುತ್ತಾಳೆ ಪಾರು ಎಂಬುವುದನ್ನು ಕಾದು ನೋಡಬೇಕಾಗಿದೆ.