Don't Miss!
- News Bengaluru-Tumkur Metro: 52.41 ಕಿ.ಮೀ. ಮಾರ್ಗ, 19 ನಿಲ್ದಾಣಗಳು; ತುಮಕೂರು-ಬೆಂಗಳೂರು ಮೆಟ್ರೋ ಅಪ್ಡೇಟ್
- Lifestyle ಏಪ್ರಿಲ್ನಲ್ಲಿ 14 ದಿನ ರಜೆ, ಏಪ್ರಿಲ್ 1ಕ್ಕೆ ಬ್ಯಾಂಕ್ಗಳಿಗೆ ರಜೆ ಇರಲು ಕಾರಣವೇನು?
- Sports ರೋಹಿತ್ vs ಹಾರ್ದಿಕ್: ಸತತ ಸೋಲಿನ ನಡುವೆಯೇ ಮುಂಬೈ ಇಂಡಿಯನ್ಸ್ ಇಬ್ಭಾಗ!?
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಲಾಯರ್ ಜೊತೆಗೆ ನಾಗವಲ್ಲಿ ಭರ್ಜರಿ ಮದುವೆ ಫಿಕ್ಸ್!
ನಾಗವಲ್ಲಿ ಮದುವೆಗಾಗಿ ಭಾರೀ ಕಲ್ಯಾಣ ಮಂಟಪವನ್ನೇ ಬುಕ್ ಮಾಡಲಾಗಿದೆ. ನಾಲ್ಕು ದಿನಗಳ ಭರ್ಜರಿ ಮದುವೆಯನ್ನು ಏರ್ಪಡಿಸಲಾಗಿದೆ. ಮೊದಲಿನಿಂದಲೂ ಲಾಯರ್ ಗುಂಡಣ್ಣನ ಮೇಲೆ ಕಣ್ಣಿಟ್ಟಿದ್ದ ನಾಗವಲ್ಲಿಗೆ ಈಗ ಷರತ್ತಿನಲ್ಲಿ ಸೋತ ಗುಂಡಣ್ಣನನ್ನೇ ಮದುವೆಯಾಗುವ ಸುಯೋಗ. 'ರೋಗಿ ಬಯಸಿದ್ದೂ ಹಾಲು-ಅನ್ನ, ಡಾಕ್ಟರ್ ಹೇಳಿದ್ದೂ ಅದೇ' ಎಂಬಂತಾಗಿದೆ.
ಆದರೆ ಲಾಯರ್ ಗುಂಡಣ್ಣನ ಪರಿಸ್ಥಿತ ಮಾತ್ರ ತದ್ವಿರುದ್ಧ. ಹೇಳಾಂಗಿಲ್ಲ. ಬಿಡಾಂಗೂ ಇಲ್ಲ, ಬಾಯಿಗಿಟ್ಟ ಬಿಸಿತುಪ್ಪವಾಗಿದ್ದಾಳೆ ನಾಗವಲ್ಲಿ. ಗುಂಣಣ್ಣನಿಗೀಗ ಗರ ಬಡಿದಂತಾಗಿದೆ. ಯಾಕಾದರೂ ಅವಳ ಸಮಸ್ಯೆಗೆ ಪರಿಹಾರ ಹುಡುಕಲು ಹೊರಟೆನೋ ಎಂದು ಗುಂಡಣ್ಣ ಈಗ ಗ್ರಹಚಾರವನ್ನು ಹಳಿಯುತ್ತಿದ್ದಾನೆ. ಆದರೆ ನಾಗವಲ್ಲಿಗೆ ಮಾತ್ರ ಬಯಸಿದ್ದೇ ಸಿಕ್ಕಿದೆ.
ನಾಗವಲ್ಲಿ ಮದುವೆಗೆ ಗುಂಡಣ್ಣನೂ ಸಿದ್ಧವಾಗಲೇಬೇಕಾಗಿದೆ. ಪಾರ್ವತಿ ಪರಮೇಶ್ವರದ ಇಡೀ ಪರಿವಾರ ಈ ಮದುವೆಗೆ ಸಕಲರೀತಿಯಲ್ಲೂ ಸಜ್ಜಾಗಿದೆ. ಧಾರಾವಾಹಿ ತಂಡವೀಗ ಕಲ್ಯಾಣ ಮಂಟಪದಲ್ಲಿ ಬೀಡುಬಿಟ್ಟಿದೆ. ಲಾಯರ್ ಗುಂಡಣ್ಣನ ಹೆಂಡತಿ ಸ್ಥಿತಿಗೆ ಎಲ್ಲರೂ ಅಯ್ಯೋ ಪಾಪ! ಎನ್ನುತ್ತಿದ್ದಾರೆ. ಆದರೇನು ಪ್ರಯೋಜನ, ನಾಗವಲ್ಲಿ ಮದುವೆ ನಡೆಯಲೇಬೇಕಾಗಿದೆ.
ಅಂದಹಾಗೆ, ಪಾರ್ವತಿ ಪರಮೇಶ್ವರ ನಿರ್ದೇಶಕರಾಗಿರುವ ಸಿಹಿಕಹಿ ಚಂದ್ರು, ಈ ಧಾರಾವಾಹಿಗೆ ಬುಕ್ ಮಾಡಿದ್ದ ಕಲ್ಯಾಣ ಮಂಟಪ ಹಾಗೂ ಗ್ರಾಂಡ್ ಸಿದ್ದತೆಯ ಸೆಟ್ ನೋಡಿ, "ನಿಜವಾದ ಪ್ರೇಮಿಗಳ ಜೋಡಿಯೊಂದು ಸಿಕ್ಕರೆ ಮದುವೆ ಮಾಡಿಬಿಡುತ್ತಿದ್ದೆ" ಎಂದರಂತೆ. ಈ ಮಾತು ಸಿಹಿಕಹಿ ಬಾಯಲ್ಲಿ ಬಂದಿರುವುದರಿಂದ ಅದನ್ನೂ ಒಂದು ಹಾಸ್ಯ ಚಟಾಕಿಯೆಂದೇ ಪ್ರೇಕ್ಷಕರು ಭಾವಿಸಬಹುದು.
ಕಲ್ಯಾಣ ಮಂಟಪ 'ದೇವಲೋಕ' ಎಂದು ಭಾಸವಾಗುವಂತೆ ಸಜ್ಜಾಗಿದೆ. ನಾಲ್ಕು ದಿನ ಭರ್ಜರಿಯಾಗಿ ನಡೆಯಲಿರುವ ಈ ಮದುವೆ, ಸೋಮವಾರದಿಂದ ಗುರುವಾರ ರಾತ್ರಿ 10.30ಕ್ಕೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಲಾರ್ ಗುಂಡಣ್ಣನಿಗೂ ನಾಗವಲ್ಲಿಗೂ ಮದುವೆ ನಡೆಯಿತೇ? ಅಥವಾ ಇನ್ನೇನಾದರೂ ತಿರುವು ಪಡೆಯಿತೇ ಎಂಬುದನ್ನು ಜೀ ವಾಹಿನಿಯಲ್ಲಿ ತಪ್ಪದೇ ನೋಡಿ.... (ಒನ್ ಇಂಡಿಯಾ ಕನ್ನಡ)