Don't Miss!
- News ಕುಡುಕರಿಗೆ ಎಣ್ಣೆ ಸಿಗುತ್ತಿಲ್ಲ, ಪರದಾಟ ನೋಡಲು ಆಗುತ್ತಿಲ್ಲ!
- Sports DC vs GT IPL 2024: ಅಕ್ಷರ್, ಪಂತ್ ಭರ್ಜರಿ ಬ್ಯಾಟಿಂಗ್; ಗುಜರಾತ್ಗೆ ಸವಾಲಿನ ಗುರಿ ನೀಡಿದ ಡೆಲ್ಲಿ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಾಧಾ ಕಲ್ಯಾಣದ 'ವಿಶು' ಚಂದನ್ ಮನದಾಳದ ಮಾತು
*ಮರೆಯಲಾಗದ ಘಟನೆ...?
ನನ್ನ ಜೀವನದಲ್ಲಿ ನಡೆದ ಪ್ರತಿಯೊಂದು ಘಟನೆಯೂ ನನಗೆ ಮರೆಯಲಾಗದ್ದು. ಅದರಲ್ಲೂ ನನ್ನಿಷ್ಟದ ಈ ನಟನೆಯ ಬದುಕಿನ ಪ್ರತಿಯೊಂದು ಘಟನೆಯನ್ನೂ ನಾನು ಎಂದೂ ಮರೆಯುವ ಹಾಗಿಲ್ಲ. ನನ್ನೊಳಗಿನ ಕಲಾವಿದನ ಪ್ರತಿಭೆಯ ಬಲವೋ, ಇಲ್ಲಾ ಅದೃಷ್ಟವೋ..., ನನಗೆ ಹೇಳಿಕೊಳ್ಳುವಂತಹ ಕೆಟ್ಟ ಅನುಭವವಂತೂ ಆಗಿಲ್ಲ.
ಆದರೆ ಹೋದಲ್ಲೆಲ್ಲಾ ಅಭಿಮಾನಿಗಳು ಸುತ್ತುವರಿಯುವುದು ಹಾಗೂ ಮಾತನಾಡಿಸುವುದು ಇವನ್ನೆಲ್ಲಾ ಮರೆಯಲಾಗುವುದಿಲ್ಲ. ಅದರಲ್ಲೂ ಒಬ್ಬರು ಕಾಲೇಜ್ ಹುಡುಗರಿಗೆ ಮೊಬೈಲ್ ನಂಬರ್ ಸಿಕ್ಕಿಬಿಟ್ಟರೆ ಇಡೀ ಕಾಲೇಜ್ ಹುಡುಗ-ಹುಡುಗಿಯು ಕಾಲ್ ಮಾಡಿ ಮಾತನಾಡಲು ತೊಡಗುವುದರಿಂದ ಈಗಾಗಲೇ ನಾಲ್ಕೈದು ನಂಬರ್ ಬದಲಾಯಿಸಬೇಕಾಗಿ ಬಂದಿದೆ. ಅದಕ್ಕಾಗಿ ಬೇಸರವೇನೂ ಇಲ್ಲ. ಆದರೆ ಜನಪ್ರಿಯತೆ ನಿಭಾಯಿಸುವುದು ಕಷ್ಟ ಎಂಬ ಅರಿವಾಗಿದೆ.
*ಸಿನಿಮಾ ಆಫರ್ ಬಂದಿದ್ದು ಹೇಗೆ?
ನಾನು ಕಾಲೇಜ್ ಓದುತ್ತಿದ್ದಾಗಿನಿಂದಲೂ ಆಫರ್ ಗಳು ಬರುತ್ತಿದ್ದವು. ಆದರೆ ಆಗ ವಿದ್ಯಾಭ್ಯಾಸದ ಕಡೆ ಗಮನ ನೀಡುವುದು ನನ್ನ ಹಾಗೂ ಮನೆಯವರ ಆದ್ಯತೆಯಾಗಿತ್ತು. ಕಾಲೇಜ್ ಮುಗಿಸಿ ಕೆಲಸಕ್ಕೆ ಸೇರಿಕೊಂಡ ಮೇಲೆ ಕೂಡ ಸಾಕಷ್ಟು ಆಫರ್ ಗಳು ಬಂದಿದ್ದವು. ಆದರೆ ಮನೆಯವರ ಸಲಹೆಯಂತೆ ಅವನ್ನೆಲ್ಲ ಬಿಟ್ಟಿದ್ದೆ. ನಂತರ 'ಪ್ಯಾಟೆ ಮಂದಿ ಕಾಡಿಗೆ ಹೋದ್ರು' ರಿಯಾಲಿಟಿ ಶೋ ಮುಗಿದಾಗಿನಿಂದಲೂ ನನಗೆ ಸಿನಿಮಾ ಆಫರ್ ಗಳು ಬರುತ್ತಲೇ ಇವೆ.
ಆದರೆ
ನನಗೆ
ಆಫರ್
ಮಾಡಲಾದ
ಪಾತ್ರಗಳು
ನನಗೆ
ಇಷ್ಟವಾಗಲಿಲ್ಲ.
ಹೀಗಾಗಿ
ನಯವಾಗಿ
ತಿರಸ್ಕರಿಸಿ
ಕೆಲವೇ
ಅವಕಾಶಗಳನ್ನು
ನನ್ನದಾಗಿಸಿಕೊಂಡೆ.
'ರಾಧಾ
ಕಲ್ಯಾಣ'
ಧಾರಾವಾಹಿಯಲ್ಲಿ
ನಟಿಸಲುಪ್ರಾರಂಭಿಸಿದ
ಮೇಲಂತೂ
ಬಹಳಷ್ಟು
ಅಚಕಾಶಗಳು
ಬಂದವು.
ಆದರೆ
ನಾನು
ಈ
ಮೊದಲು
ಹೇಳಿದಂತೆ
ಬಹಳಷ್ಟು
ಆಫರ್
ಗಳು
ಇಷ್ಟವಾಗಲಿಲ್ಲ,
ನಟಿಸಲಿಲ್ಲ.
ಮುಂದಿನ
ಪುಟ
ನೋಡಿ....