Seetha Raama: ರಾಮನ ಅರಮನೆಗೆ ಬಂದ ಸೀತಾ, ಸೀತಾಳನ್ನು ನೋಡಿ ಕಕ್ಕಾಬಿಕ್ಕಿಯಾದ ರಾಮ
ಸೀತಾರಾಮ ಧಾರಾವಾಹಿ ನೋಡುಗರಿಗೆ ಬಹಳ ಖುಷಿ ನೀಡುತ್ತಿದೆ.ಚಾಂದಿನಿ ಕಾಟದಿಂದ ಆಗಿ ಪಾಪ ರಾಮ ಮನೆಯಲ್ಲಿಯೇ ಉಳಿಯುವ ಹಾಗೆ ಆಗುತ್ತಿದೆ. ಚಾಂದಿನಿ ಭಾರ್ಗವಿಯ ಕೈ ಗೆ ಸಿಕ್ಕಿ ಬಿದ್ದಿದ್ದಾಳೆ. ಭಾರ್ಗವಿ ಹೇಳಿದ ಹಾಗೆ ಚಾಂದಿನಿ ಕುಣಿಯುತ್ತಾ ಇರುವುದಂತೂ ಸತ್ಯ. ಆಕೆ ರಾಮನ ಮೇಲೆ ಸೇಡಿನ ಕಿಚ್ಚನ್ನು ಹೊಂದಿರುತ್ತಾಳೆ.
ರಾಮ ತನ್ನಿಂದ ಎಲ್ಲವನ್ನೂ ಕಿತ್ತುಕೊಂಡಿದ್ದಾನೆ ಎನ್ನುವುದು ಭಾರ್ಗವಿ ಕೋಪಕ್ಕೆ ಕಾರಣ. ಆದರೆ ಭಾರ್ಗವಿ ಅಂದರೆ ರಾಮನಿಗೆ ಬಹಳ ಪ್ರೀತಿ. ರಾಮ ಎಲ್ಲಿದ್ದಾನೋ ಅಲ್ಲಿ ಭಾರ್ಗವಿ ಇದ್ದೆ ಇರುತ್ತಾಳೆ. ರಾಮನ ಜೊತೆಗಿರುವ ಅಶೋಕನನ್ನು ಕಂಡರೆ ಭಾರ್ಗವಿಗೆ ಬಹಳ ಕೋಪ. ಆದರೂ ಕೂಡ ಅದನ್ನು ಯಾರ ಬಳಿಯೂ ಹೇಳಿಕೊಳ್ಳದೆ ಸುಮ್ಮನೆ ಇರುತ್ತಾಳೆ. ಸೀತಾಗೆ ಭಾರ್ಗವಿ ಕಂಡರೆ ಬಹಳ ಭಯ. ಯಾಕೆಂದರೆ ಆಫೀಸ್ ನಲ್ಲಿ ನಡೆದ ಕೆಲವು ವಿಚಾರಗಳಿಂದ ಸೀತಾ ಸಿಕ್ಕಾಪಟ್ಟೆ ಭಯ ಪಟ್ಟುಕೊಂಡಿದ್ದಾಳೆ.

ಸೀತಾ ಗೆಳತಿ ಅಶೋಕನನ್ನು ಬಾಸ್ ಎಂದು ತಿಳಿದು ಪ್ರೀತಿಯಲ್ಲಿ ಬಿದ್ದಿರುತ್ತಾಳೆ. ಅಶೋಕ ಆಫೀಸ್ಗೆ ಬಂದಿಲ್ಲ ಅಂತ ರಾಮನ ಮನೆಗೆ ಸೀತಾಳನ್ನು ಕರೆದುಕೊಂಡು ಕಂಡು ಇರುತ್ತಾಳೆ. ಈ ವಿಚಾರ ರಾಮನಿಗೆ ಆಗಲಿ ಅಶೋಕನಿಗೆ ಆಗಲಿ ತಿಳಿದು ಇರುವುದಿಲ್ಲ.
ಅವಲಕ್ಕಿ ಪಾಯಸ ಸವಿದ ರಾಮ
ಸಿಹಿ ಹೇಳಿದ ಅವಲಕ್ಕಿ ಪಾಯಸ ತಿನ್ನಲು ಚಿಕ್ಕಯ್ಯ ಬಳಿ ಪಾಯಸ ಮಾಡಲು ಹೇಳುತ್ತಾನೆ ರಾಮ. ಅವಲಕ್ಕಿ ಪಾಯಸವನ್ನು ಮಾಡಿರುತ್ತಾರೆ ಚಿಕ್ಕಯ್ಯ. ರಾಮ ಚಿಕ್ಕಯ್ಯ ಬಳಿ ಪಾಯಸ ಮಾಡಿಸಿದ ಕಾರಣ ಕೇಳಿದಾಗ ಏನೇನೋ ಸಬೂಬು ಹೇಳುತ್ತಾನೆ. ರಾಮ ಪಾಯಸ ಸವಿಯುತ್ತಾ ಇರುತ್ತಾನೆ. ಅಷ್ಟರಲ್ಲಿ ಅಲ್ಲಿಗೆ ಬಂದ ಮನೆಯ ಕೆಲಸದಾಕೆಯೊಬ್ಬರು.. ಸರ್ ನಿಮ್ಮನ್ನು ಆಫೀಸ್ ನಿಂದಾ ಯಾರೋ ಭೇಟಿ ಆಗಲು ಬಂದಿದ್ದಾರೆ ಎಂದು ಹೇಳುತ್ತಾರೆ.
ಮನೆ ಕೆಲಸದವರ ಮಾತನ್ನು ಕೇಳಿದ ರಾಮ ತಕ್ಷಣ ಮನೆಯ ಹೊರಗೆ ಬಂದು ನೋಡಿದಾಗ ಸೀತಾ ಮತ್ತು ಆಕೆಯ ಗೆಳತಿ ಬಂದು ನಿಂತಿರುತ್ತಾರೆ. ಅವರನ್ನು ನೋಡಿ ರಾಮನಿಗೆ ಶಾಕ್ ಆಗುತ್ತದೆ.. ಇನ್ನೂ ತಾತ ಅಶೋಕನ ಜೊತೆಗೆ ಮಾತನಾಡುತ್ತಾ ಮೆತ್ತಗೆ ಹೇಳುತ್ತಾರೆ, ಏನಯ್ಯ ಇವತ್ತು ಇಬ್ಬರು ಆಫೀಸ್ಗೆ ಹೋಗಿಲ್ಲ ಏನು ಕಾರಣ ಕೇಳುತ್ತಾರೆ.

ತಾತನ ಮಾತು ಕೇಳಿ ಅಲರ್ಟ್ ಆದ ಅಶೋಕ
ಇದನ್ನು ಕೇಳಿದ ಅಶೋಕ ಮೆತ್ತಗೆ ಅದು ಹಾಗೆಯೇ ಅಕ್ಟೋಬರ್ ತಿಂಗಳು ಬಂದರೆ ಸಾಕು ರಾಮನಿಗೆ ಏನೇನೋ ಆಗುತ್ತದೆ ಎಂದೆಲ್ಲ ಹೇಳಿದಾಗ ಚಿಕ್ಕಯ್ಯ ಬರುತ್ತಾನೆ. ಆವಲಕ್ಕಿ ಪಾಯಸ ಕೊಡುತ್ತಾನೆ.. ಇದನ್ನು ಸವಿಯುತ್ತಾ ಇರುವಾಗ ಆಫೀಸ್ ನ ಇಬ್ಬರು ಹುಡುಗಿಯರು ಮನೆಗೆ ಬಂದಿರುವುದು ತಿಳಿಯುತ್ತದೆ. ಆ ಕೂಡಲೇ ಅಶೋಕ ತಡಬರಿಸಿ ಎದ್ದು ಓಡುತ್ತಾನೆ. ಇತ್ತ, ರಾಮ ಯಾರು ಬಂದಿದ್ದಾರೆ ಎಂದು ನೋಡಲು ಹೊರಗೆ ಬರುತ್ತಾನೆ. ಮನೆಯ ಹೊರಗಡೆ ಬಂದಾಗ ಸೀತಾ ಮತ್ತು ಆಕೆಯ ಸ್ನೇಹಿತೆಯನ್ನು ನೋಡಿ ಕೊಂಚ ಶಾಕ್ ಆಗುತ್ತದೆ. ರಾಮ ಸೀತಾ ಮನೆಗೆ ಬರುತ್ತಾಳೆ ಎಂದು ಅಂದುಕೊಂಡಿರಲಿಲ್ಲ.


Click it and Unblock the Notifications











