Seetha Rama Serial: ಅಶೋಕನ ಮುನಿಸು ಮಾಯಾ.. ಫೈಲ್ ಹಿಡಿದು ಹೊರಟ ರಾಮನಿಗೆ ಸಿಕ್ಕಿಬೀಳ್ತಾಳಾ ಚಿಕ್ಕಿ ?

By ಎಸ್ ಸುಮಂತ್

'ಸೀತಾರಾಮ' ಧಾರಾವಾಹಿಯಲ್ಲಿ ಸದ್ಯಕ್ಕೆ ರಾಮ ಸೀತಾ ಸಿಕ್ಕಾಪಟ್ಟೆ ಹತ್ತಿರವಾಗಿದ್ದಾರೆ. ರಾಮ ಯಾರದ್ದೋ ಪ್ರೀತಿಯಲ್ಲಿ ಬಿದ್ದಿದ್ದಾನೆ ಎನ್ನುವ ಊಹೆಯಲ್ಲಿ ಭಾರ್ಗವಿ ಹುಡುಕಾಟ ಶುರು ಮಾಡಿದ್ದಾಳೆ. ರಾಮನ ನೆಮ್ಮದಿಯನ್ನು ಕೆಡಿಸಬೇಕು ಎಂದು ಗಮನ ಕೊಟ್ಟ ಭಾರ್ಗವಿ ಈಗ ರಾಮನ ಕೈಲಿರುವ ಫೈಲ್‌ನಿಂದಾಗಿ ತನ್ನ ಹಳ್ಳಕ್ಕೆ ತಾನೇ ಬೀಳುವ ಸಾಧ್ಯತೆ ಇದೆ.

ರಾಮನಿಗೆ ತಾಯಿಯಿಲ್ಲ ಎಂಬ ನೋವನ್ನು ಸಿಹಿ ತೀರಿಸುತ್ತಿದ್ದಾಳೆ. ಖುಷಿ ಅಂದರೆ ಏನು? ಬದುಕು ಎಂದರೆ ಏನು ಎಂಬುದನ್ನು ರಾಮ ಕಲಿತಿದ್ದೇ ಸೀತಾಳ ಮನೆಯಲ್ಲಿ. ಆದರೆ, ಈ ಖುಷಿಗೆ ಭಾರ್ಗವಿಯ ಕಣ್ಣು ಬಿದ್ದಿದೆ. ಪ್ರೊಟೆಕ್ಟ್ ಮಾಡುವುದಕ್ಕೆ ಅಶೋಕ ಏನೋ ಇದ್ದಾನೆ. ಹೀಗಾಗಿ ಗೆಲುವು ಯಾವ ಕಡೆಗೆ ಎಂಬುದೇ ಕುತೂಹಲವಾಗಿದೆ.

seetharama-kannada-serial

ಸೀತಾ ಮನೆಯಲ್ಲಿ ಸಿಕ್ಕಿದ ರಾಮ್

ರಾಮ್ ಎಷ್ಟು ಹೊತ್ತಾದರೂ ಮನೆಗೆ ಬಾರದೆ ಇರುವುದು, ಆಫೀಸ್‌ಗೆ ಕೂಡ ಹೋಗದೆ ಇರುವುದು ದೇಸಾಯಿ ಮನೆಯವರಲ್ಲಿ ಆತಂಕ ಸೃಷ್ಟಿಸಿದೆ. ರಾಮ್ ಮಾತ್ರ ಒಂದಷ್ಟು ಗಂಟೆಗಳು ನೆಮ್ಮದಿಯ ಬದುಕನ್ನು ಕಂಡುಕೊಂಡಿದ್ದ. ಅದೇ ಸಮಯಕ್ಕೆ ಸೀತಾಳ ಮನೆಯ ಬಾಗಿಲನ್ನು ಪೊಲೀಸರು ಬಡಿದಿದ್ದು, ಆತಂಕಕ್ಕೆ ಕಾರಣವಾಗಿತ್ತು. ರಾಮ್ ಅದನ್ನು ಹೇಗೋ ಬ್ಯಾಲೆನ್ಸ್ ಮಾಡಿ, ಮನೆಗೆ ಬಂದಿದ್ದಾನೆ.

ಮುನಿಸು ಮರೆತು ಒಂದಾದ ಅಶೋಕ - ರಾಮ

ಇತ್ತ ರಾಮ್ ಆಫೀಸಿಗೆ ಹೋಗದೆ ಇರುವುದಿಲ್ಲ. ಅಶೋಕನು ಆಫೀಸಿಗೆ ಹೋಗಿಲ್ಲ. ಯಾಕಂದ್ರೆ, ಭಾರ್ಗವಿ ಅವನ ಮನಸ್ಸಿಗೆ ಅಷ್ಟು ನೋವು ಕೊಟ್ಟಿದ್ದಳು. ಭಾರ್ಗವಿಯ ಸತ್ಯವನ್ನು ಹೇಳುವುದಕ್ಕೆ ಹೋದರೆ ರಾಮ ನಂಬುವುದಕ್ಕೆ ರೆಡಿ ಇಲ್ಲ. ಹೀಗಾಗಿ ಅಶೋಕನ ಮನಸ್ಸಿಗೆ ತಂಬಾ ನೋವಾಗಿತ್ತು. ಅಶೋಕ ಆಫೀಸಿಗೆ ಹೋಗದೆ ಇರುವುದನ್ನು ತಿಳಿದು, ರಾಮ್ ನೇರ ಮನೆಗೆ ಹೋಗಿದ್ದಾನೆ. ಅಲ್ಲಿ ಅಶೋಕ ಆಡಿದ ಆಳು, ಯಜಮಾನ ಎಂಬ ಮಾತುಗಳು ರಾಮನಿಗೆ ನೋವು ಕೊಟ್ಟಿದೆ. ರಾಮ್‌ಗೆ ಅಶೋಕ ಎಷ್ಟು ಮುಖ್ಯ ಎಂಬುದನ್ನು ಬಿಡಿಸಿ ಹೇಳಿದ್ದಾನೆ. ಒಂದು ಗಟ್ಟಿ ಅಪ್ಪುಗೆಯಿಂದ ಇಬ್ಬರ ಮುನಿಸು ಕಳೆದಿದೆ.

seetharama-kannada-serial

ಆಫೀಸ್‌ನಲ್ಲಿ ಫೈಲ್ ಕೊಟ್ಟ ಚರಣ್ ಡಿ

ಯಥಾಸ್ಥಿತಿಯಲ್ಲಿ ರಾಮ್ ಎಂಪ್ಲಾಯ್ ಆಗಿ, ಅಶೋಕ ಬಾಸ್ ಆಗಿ ಆಫೀಸಿಗೆ ಬಂದಿದ್ದಾರೆ. ರಾಮನಿಗೆ ಏನು ಗೊತ್ತಿಲ್ಲ ಎಂದುಕೊಂಡಿರುವ ಮ್ಯಾನೇಜರ್ ಚರಣ್ ಡಿ, ಮೋಸದ ಫೈಲ್ ಅನ್ನು ರಾಮ್ ಬಳಿಯೇ ಕೊಟ್ಟಿದ್ದಾನೆ. ರಾಮ್‌ನನ್ನು ಕರೆದು ಈ ಫೈಲ್ ಅನ್ನು, ನಾನು ಹೇಳಿದ ಅಡ್ರೆಸ್‌ಗೆ ಹೋಗಿ ಕೊಟ್ಟು ಬಾ ಎಂದಿದ್ದಾನೆ. ಅದು ಆಫೀಸಿನ ಅಧಿಕೃತ ವ್ಯವಹಾರಗಳ ಫೈಲ್ ಆಗಿರಲಿಲ್ಲ. ಹೀಗಾಗಿ ನಾವೂ ಹುಡುಕುತ್ತಿದ್ದವರು ಇವತ್ತು ಸಿಗುವ ಭರವಸೆ ಅಶೋಕ ಹಾಗೂ ರಾಮ್ ಇಬ್ಬರಲ್ಲೂ ಮೂಡಿದೆ.

ಭಾರ್ಗವಿಯ ಅಡ್ಡಕ್ಕೆ ಹೋಗುತ್ತಿದ್ದಾನೆ ರಾಮ

ಆಫೀಸಲ್ಲಿ ಚರಣ್ ಡಿ ಯನ್ನ ಭಾರ್ಗವಿ ಹ್ಯಾಂಡಲ್ ಮಾಡುತ್ತಿದ್ದಾಳೆ. ಮನೆಯಲ್ಲಿ ಸಿಕ್ಕಾಪಟ್ಟೆ ನಾಟಕವಾಡುತ್ತಾಳೆ. ಹೀಗಾಗಿ ಭಾರ್ಗವಿಯ ಮೇಲೆ‌ ಮನೆಯವರಿಗೆ ಯಾವುದೇ ಅನುಮಾನವಿಲ್ಲ. ಅಶೋಕ ಹೇಳಿದರೂ ರಾಮ್ ನಂಬುವ ಸ್ಥಿತಿಯಲ್ಲಿ ಇಲ್ಲ. ಇದೆಲ್ಲ ಮುಗಿದರೂ ಆಫೀಸ್‌ನಲ್ಲಿ ಯಾರೋ ಗೋಲ್ಮಾಲ್ ಮಾಡುತ್ತಿದ್ದಾರೆ ಅನ್ನುವುದಂತು ರಾಮ್‌ಗೆ ಗೊತ್ತಾಗಿದೆ. ಅದರಲ್ಲಿ ಮ್ಯಾನೇಜರ್ ಕೂಡ ಸೇರಿಕೊಂಡಿದ್ದಾನೆ ಅಂತ ಎನಿಸಿದೆ. ಆದರೆ, ಅದನ್ನು ಬಾಯಿ ಬಿಡುತ್ತಿಲ್ಲ. ಈಗ ಆ ಫೈಲ್‌ನಿಂದಾಗಿ ಭಾರ್ಗವಿಯ ಅಡ್ಡ ತಿಳಿಯುವುದು ರಾಮ್‌ಗೆ ಸುಲಭವಾಗುತ್ತದೆ. ಆದರೆ, ಭಾರ್ಗವಿ ಇಷ್ಟು ಬೇಗ ಸಿಕ್ಕಿ ಬೀಳುವುದಕ್ಕೆ ಸಾಧ್ಯವೇ ಇಲ್ಲ.

More from Filmibeat

English summary
Zee kannada serial Seetharama Written Update on October 5th episode
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X