Don't Miss!
- Automobiles Maruti Suzuki: 1 ವರ್ಷದಲ್ಲಿಯೇ ಹೊಸ ದಾಖಲೆ.. 134,735 ಫ್ರಾಂಕ್ಸ್ ಕಾರುಗಳು ಮಾರಾಟ, ಬೆಲೆ ರೂ.7.51 ಲಕ್ಷ
- News Water Crisis: ಜಲಕ್ಷಾಮ ತಡೆಗೆ ಜಲಸಂರಕ್ಷಣೆಯೇ ಪರಿಹಾರ: ಎಚ್ಚೆತ್ತುಕೊಳ್ಳುತ್ತಾ ಸರ್ಕಾರ?
- Sports T20 World Cup 2024: ವೀರೇಂದ್ರ ಸೆಹ್ವಾಗ್ ಆಯ್ಕೆಯ ಭಾರತ ತಂಡದಲ್ಲಿ ಪ್ರಮುಖ ಆಟಗಾರರಿಗೆ ಸ್ಥಾನವಿಲ್ಲ!
- Technology Realme: ರಿಯಲ್ಮಿ ನಾರ್ಜೋ 70 5G, ನಾರ್ಜೋ 70x 5G ಸ್ಮಾರ್ಟ್ಫೋನ್ ಲಾಂಚ್! ಸಖತ್ ಫೀಚರ್ಸ್... ಬೆಲೆ ಎಷ್ಟು?
- Lifestyle ವಿಕಲಚೇತನರಿಗೆ ಸ್ಕೂಟಿ ಗಿಫ್ಟ್..! ಮನೆ ಕಟ್ಟಿಕೊಡುವ ಭರವಸೆ ನೀಡಿದ ನಟ ಲಾರೆನ್ಸ್..!
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ವೀಕೆಂಡ್ ವಿತ್ ರಮೇಶ್'ಗೆ ಕುಂಬ್ಳೆ ಅವರನ್ನ ಕರೆತರಲು ಹೊಸ ಪ್ಲಾನ್
ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ ಅಂತಹ ಸಾಧಕರನ್ನ ನೋಡುವ ಆಸೆ ವೀಕ್ಷಕರುದ್ದು. ಆದ್ರೆ, ಇವರನ್ನ ಈ ಶೋಗೆ ಕರೆತರಲು ಸಾಧ್ಯವಾಗುತ್ತಿಲ್ಲ. ಆದರೂ ಪಟ್ಟು ಬಿಡದ ಜೀ ಕನ್ನಡ ವಾಹಿನಿ ಹೇಗಾದರೂ ಇವರನ್ನ ಶೋಗೆ ಕರೆತರಲೇಬೇಕು ಎಂದು ಪ್ರಯತ್ನ ಮಾಡುತ್ತಿದೆ.
ಈ ಹಿಂದೆ ರಾಹುಲ್ ದ್ರಾವಿಡ್ ಅವರಿಗಾಗಿ #WWRDravid ಹ್ಯಾಷ್ ಟ್ಯಾಗ್ ಬಳಸಿ ಫೇಸ್ ಬುಕ್, ಟ್ವಿಟ್ಟರ್ ಅಭಿಯಾನ ಆರಂಭಿಸಲಾಗಿತ್ತು. ಈಗ ಅದೇ ಸೂತ್ರವನ್ನ ಅನಿಲ್ ಕುಂಬ್ಳೆ ಅವರಿಗೂ ಬಳಸಲಾಗುತ್ತಿದೆ.
'ವೀಕೆಂಡ್ ವಿತ್ ರಮೇಶ್'ಗೆ ದ್ರಾವಿಡ್ ಬರಬೇಕೆ?, ಹಾಗಾದ್ರೆ ಹೀಗೆ ಮಾಡಿ!
ಹೌದು, ''ಭಾರತದ Jumbo ನಮ್ಮ ಕರ್ನಾಟಕದ ಹೆಮ್ಮೆ Anil Kumble ಅವರನ್ನು ಸಾಧಕರ ಸೀಟ್'ನಲ್ಲಿ ನೋಡಲು ಇಚ್ಛಿಸುವ ಅಭಿಮಾನಿಗಳು ನಾವು ನಡೆಸುತ್ತಿರುವ Facebook ಅಭಿಯಾನದಲ್ಲಿ ನಮ್ಮೊಂದಿಗೆ ಕೈ ಜೋಡಿಸಲು #WeekendwithKumble ನೊಂದಿಗೆ Share ಮಾಡಿ'' ಎಂದು ಜೀ ಕನ್ನಡ ಮನವಿ ಮಾಡಿದೆ.
ಮೊದಲ ಆವೃತ್ತಿಯಿಂದಲೂ ಇವರಿಬ್ಬರನ್ನ ವೀಕೆಂಡ್ ವಿತ್ ರಮೇಶ್ ಶೋಗೆ ಕರೆದುಕೊಂಡು ಬರಲು ಜೀ ಕನ್ನಡ ಪ್ರಯತ್ನ ಮಾಡುತ್ತಿದೆ. ಆದ್ರೆ, ಕಾರಣಾಂತರಗಳಿಂದ ಸಾಧ್ಯವಾಗಲಿಲ್ಲ. ಈ ಬಾರಿ ಅಭಿಮಾನಿಗಳ ಕಡೆಯಿಂದಲೇ ಆಹ್ವಾನಿಸುವ ಮೂಲಕ ಪ್ರಯತ್ನ ಮಾಡಿದೆ. ಈಗ ಅಭಿಮಾನಿಗಳ ಆಶಯಕ್ಕೆ ಮಣಿದು ಈ ಶೋಗೆ ಬರ್ತಾರಾ ಕಾದುನೋಡಬೇಕಿದೆ.