Don't Miss!
- News Siddaramaiah: ಪ್ರಧಾನಿ ಕೊಟ್ಟ ಸುಳ್ಳು ಭರವಸೆಗಳಿಗೆ 10 ವರ್ಷ ಮೋಸ ಹೋಗಿದ್ದೀರಿ
- Finance ಆಕ್ಸಿಸ್ ಬ್ಯಾಂಕ್ಗೆ ಭರ್ಜರಿ ಲಾಟರಿ, 7,129 ಕೋಟಿ ನಿವ್ವಳ ಲಾಭ!
- Lifestyle ಬಾಯಿ ಚಪ್ಪರಿಸಿ ಸವಿಯುವ ನೆಲ್ಲಿಕಾಯಿ ಉಪ್ಪಿನಕಾಯಿ..!
- Sports IPL 2024 :ಬಲಿಷ್ಠ ಹೈದರಾಬಾದ್ ಬಗ್ಗು ಬಡಿದ ಆರ್ಸಿಬಿ: ಕಮಿನ್ಸ್ ಪಡೆಗೆ ಹೀನಾಯ ಸೋಲು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವಿಜಯಪ್ರಸಾದ್ ನೀಡಲಿದ್ದಾರೆ ಭಾರಿ 'ನೀರ್ ದೋಸೆ'
ಈ ಮೊದಲು ವಿಜಯಪ್ರಕಾಶ್ ನಿರ್ದೇಶನದ 'ಸಿದ್ಲಿಂಗು' ಚಿತ್ರದಲ್ಲಿ ನಟಿಸಿದ್ದ ರಮ್ಯಾ, ಪ್ರೆಸ್ ಮೀಟ್ ನಲ್ಲಿ 'ನಿಮ್ಮ ಮುಂದಿನ ಚಿತ್ರದಲ್ಲೂ ನನಗೆ ಅವಕಾಶ ಕೊಡಿ" ಎಂದು ವಿಜಯಪ್ರಕಾಶ್ ಅವರನ್ನು ಬಹಿರಂಗವಾಗಿಯೇ ಕೋರಿದ್ದರು. ರಮ್ಯಾಗೆ ಅವಕಾಶಗಳಿಗೇನೂ ಆಗಲೂ ಈಗಲೂ ಕೊರತೆಯಿಲ್ಲ. ಆದರೆ, ನಿರ್ದೇಶಕ ವಿಜಯಪ್ರಸಾದ್ ಅವರೊಂದಿಗೆ ಸಿದ್ಲಿಂಗು ಚಿತ್ರದಲ್ಲಿ ಕೆಲಸ ಮಾಡಿದ್ದಕ್ಕೆ ಖುಷಿಯಾದ ರಮ್ಯಾ ಆ ಕೋರಿಕೆ ಇಟ್ಟಿದ್ದರು.
ರಮ್ಯಾ ವಿನಂತಿಯನ್ನು ವಿಜಯಪ್ರಸಾದ್ ನಡೆಸಿಕೊಟ್ಟಿದ್ದಾರೆ. ರಮ್ಯಾ ಕೂಡ ತಾವು ಆಡಿದ ಮಾತಿಗೆ ನಟಿಸಲು ಒಪ್ಪಿ ಬದ್ಧತೆಯನ್ನು ಪ್ರದರ್ಶಿಸಿದ್ದಾರೆ. ಕಾಮಿಡಿ ನಿರೂಪಣೆಯ ಮೂಲಕ ಸಾಗುವ ಈ ಚಿತ್ರಕ್ಕೆ ಕಾಮಿಡಿ ಸ್ಟಾರ್ ಜಗ್ಗೇಶ್ ನಾಯಕರಾಗಿ ಆಯ್ಕೆಯಾಗಿದ್ದಾರೆ. ಜಗ್ಗೇಶ್ ಹಾಗೂ ರಮ್ಯಾ ಇದೇ ಮೊದಲ ಬಾರಿಗೆ ಜೋಡಿಯಾಗಿದ್ದಾರೆ. ಈ ಜೋಡಿ ಒಟ್ಟಿಗೆ ಇದ್ದರೂ, ಮಾಮೂಲಿ ಎನಿಸುವ ರೊಮಾನ್ಸ್ ಹಾಗೂ ಮರಸುತ್ತುವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿಲ್ಲವಂತೆ.
ಈ ಬಗ್ಗೆ ನಮ್ಮ ಒನ್ ಇಂಡಿಯಾ ಕನ್ನಡ'ದ ಜೊತೆ ಮಾತನಾಡಿರುವ ವಿಜಯಪ್ರಸಾದ್, "ಹೌದು, ರಮ್ಯಾ ಈ ಚಿತ್ರದಲ್ಲಿ ನಟಿಸುವುದು ಕನ್ಫರ್ಮ್. ಅಷ್ಟೇ ಅಲ್ಲ, ಜಗ್ಗೇಶ್ ಜೊತೆಜೊತೆಯಲ್ಲೇ ರಮ್ಯಾ ಪಾತ್ರವೂ ಚಿತ್ರದಲ್ಲೂ ಕಾಣಿಸಿಕೊಳ್ಳಲಿದೆ. ಜೊತೆಯಲ್ಲಿ ಮರಸುತ್ತಿದರೆ, ರೊಮಾನ್ಸ್ ಮಾಡಿದರೆ ಮಾತ್ರ ಚಿತ್ರದಲ್ಲಿ ಜೋಡಿ ಎನ್ನಲು ಸಾಧ್ಯವಿಲ್ಲ. ರಮ್ಯಾ ಹಾಗೂ ಜಗ್ಗೇಶ್ ಇಬ್ಬರೂ ಚಿತ್ರದಲ್ಲಿ ಜೊತೆಯಾಗಿಯೇ ನಟಿಸಲಿರುವ 'ಲೀಡ್' ಪಾತ್ರಧಾರಿಗಳು" ಎಂದಿದ್ದಾರೆ. ಮುಂದಿನ ಪುಟ ನೋಡಿ...