Don't Miss!
- News Karnataka LS Election 2024 LIVE: ಇಂದು ದೇಶದಲ್ಲಿ ಎರಡನೇ ಹಂತದ, ರಾಜ್ಯದಲ್ಲಿ ಮೊದಲ ಹಂತದ ಮತದಾನ
- Sports IPL 2024 :ಬಲಿಷ್ಠ ಹೈದರಾಬಾದ್ ಬಗ್ಗು ಬಡಿದ ಆರ್ಸಿಬಿ: ಕಮಿನ್ಸ್ ಪಡೆಗೆ ಹೀನಾಯ ಸೋಲು
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪಾಕಿಸ್ತಾನ ಚಲನಚಿತ್ರೋತ್ಸವಕ್ಕೆ 'ಭಾವನೆಗಳ ಬೆನ್ನೇರಿ'
ಪ್ರೊ.ಬರಗೂರು ರಾಮಚಂದ್ರಪ್ಪ ಅವರ 'ಅಂಗುಲಿಮಾಲ' ಚಿತ್ರ ಪಾಕಿಸ್ತಾನ ಚಲನಚಿತ್ರೋತ್ಸವಕ್ಕೆ ಆಯ್ಕೆಯಾದ ಬೆನ್ನಲ್ಲೇ ಮತ್ತೊಂದು ಕನ್ನಡ ಚಿತ್ರವೂ ಆಯ್ಕೆಯಾಗಿದೆ. ಕನ್ನಡ ಚಿತ್ರಗಳು ಭಾರತದ ಗಡಿದಾಟುತ್ತಿರುವುದು ನಿಜಕ್ಕೂ ಹೆಮ್ಮೆಪಡುವ ಸಂಗತಿ.
ಟಿ.ಜಿ.ರಂಗನಾಥ್ ಮತ್ತು ಬಿ.ಆರ್.ಲತಾ ನಿರ್ಮಿಸಿರುವ 'ಭಾವನೆಗಳ ಬೆನ್ನೀರಿ' ಚಿತ್ರ ಪ್ರತಿಷ್ಠಿತ ರಫೀ ಪೀರ್ ಅಂತರರಾಷ್ಟೀಯ ಚಲನಚಿತ್ರೋತ್ಸವದ ಆಯ್ಕೆಯ ಗೌರವ ಪಡೆದಿದೆ. ಬುದ್ಧಿಮಾಂದ್ಯ ಮಗುವಿನ ಭಾವನೆಗಳ ಸುತ್ತ ಕದಲುವ ಕನ್ನಡದ ವಿಶೇಷ ಚಲನಚಿತ್ರವಿದು.
ಈ ಕುರಿತು ಸಂತಸ ಹಂಚಿಕೊಂಡ ಚಿತ್ರ ನಿರ್ದೇಶಕ ನಿಖಿಲ್ ಮಂಜು, "ವಾಣಿಜ್ಯಾತ್ಮಕ ಚಿತ್ರಗಳ ಇಂದಿನ ಸಂತೆಯಲ್ಲಿ ತಮ್ಮ ಪುಟ್ಟ ಚಿತ್ರ ಆಯ್ಕೆಯಾಗಿರುವುದು ಸಂತಸ ತಂದಿದೆ. ಬುದ್ಧಿಮಾಂದ್ಯ ಮಗುವೊಂದರ ಭಾವನಾಜಗತ್ತಿನ ಅನಾವರಣ ಮಾಡುವ ಇಂತಹ ಪ್ರಯೋಗಾತ್ಮಕ ಪುಟ್ಟ ಚಿತ್ರಗಳಿಗೆ ಸಿಗುವ ಇಂತಹ ದೊಡ್ಡ ಗೌರವ ನನ್ನಂತಹ ಇನ್ನಷ್ಟು ನಿರ್ದೇಶಕರಿಗೆ ಉತ್ತೇಜನಾಕಾರಿ" ಎಂದಿದ್ದಾರೆ.
ಚಿತ್ರದ ನಿರ್ಮಾಪಕರಿಗೆ ಈ ಸಂದರ್ಭದಲ್ಲಿ ವಿಶೇಷ ಧನ್ಯವಾದ ಅರ್ಪಿಸಿರುವ ಅವರು, ಚಿತ್ರದ ಮುಖ್ಯ ಪಾತ್ರದಾರಿ ಮಾಸ್ಟರ್ ಕಾರ್ತೀಕ್ ನಿಜಜೀವನದಲ್ಲೂ ಮಾನಸಿಕವಾಗಿ, ದೈಹಿಕವಾಗಿ ವಿಶೇಷ ಮಗುವಾಗಿದ್ದರೂ ನಟನೆಯ ಸಂದರ್ಭದಲ್ಲಿ ಸ್ಪಂದಿಸಿದ ಕ್ಷಣಗಳನ್ನು ಮೆಲಕು ಹಾಕಿದರು. (ಒನ್ಇಂಡಿಯಾ ಕನ್ನಡ)