For Quick Alerts
For Daily Alerts
Don't Miss!
- News Karnataka LS Election 2024 LIVE: ಇಂದು ದೇಶದಲ್ಲಿ ಎರಡನೇ ಹಂತದ, ರಾಜ್ಯದಲ್ಲಿ ಮೊದಲ ಹಂತದ ಮತದಾನ
- Sports IPL 2024 :ಬಲಿಷ್ಠ ಹೈದರಾಬಾದ್ ಬಗ್ಗು ಬಡಿದ ಆರ್ಸಿಬಿ: ಕಮಿನ್ಸ್ ಪಡೆಗೆ ಹೀನಾಯ ಸೋಲು
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಒಲವೇ ಮಂದಾರ ಶ್ರೀಕಿಗೆ ಕೂಡಿಬಂತು ಕಂಕಣಬಲ
News
oi-Rajendra
By Rajendra
|
'ಒಲವೇ ಮಂದಾರ' ಖ್ಯಾತಿಯ ನಟ ಶ್ರೀಕಿ ಅವರಿಗೆ ಕಂಕಣಬಲ ಕೂಡಿಬಂದಿದೆ. ನವೆಂಬರ್ 29ರಂದು ಅವರ ವಿವಾಹ ನಡೆಯಲಿದೆ. ಎಂಬಿಎ ಓದಿರುವ ವೀಣಾ ಅವರು ಶ್ರೀಕಿ ಬಾಳಸಂಗಾತಿಯಾಗುತ್ತಿದ್ದಾರೆ. ಅಂದಹಾಗೆ ಇದು ಗುರುಹಿರಿಯರು ನಿಶ್ಚಯಿಸಿರುವ ಮದುವೆ ಎಂದಿವೆ ಕುಟುಂಬ ಮೂಲಗಳು.
ಒಲವೇ ಮಂದಾರ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ಶ್ರೀಕಿ ಆರಂಭದಲ್ಲೇ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಬಳಿಕ ಅಭಿನಯಿಸಿದ ಲೂಸುಗಳು, 'B3' ಹಾಗೂ ಮನದ ಮರೆಯಲ್ಲಿ ಚಿತ್ರಗಳ ಮೂಲಕ ಎಲ್ಲರ ಗಮನಸೆಳೆದರು. [ನಟಿ ವಿಂಧ್ಯಾ 'ಮನದ ಮರೆಯಲ್ಲಿ' ಏನು ನಡೀತು?]
ಪಾತರಗಿತ್ತಿ ಹಾಗೂ ಗೋವಾ ಚಿತ್ರಗಳ ಬಳಿಕ ಶ್ರೀಕಿ ಗೃಹಸ್ಥಾಶ್ರಮ ಪ್ರವೇಶಿಸುತ್ತಿದ್ದು ಬಳಿಕ ತಾತ್ಕಾಲಿಕವಾಗಿ ಸ್ಯಾಂಡಲ್ ವುಡ್ ನಿಂದ ಬ್ರೇಕ್ ತೆಗೆದುಕೊಳ್ಳಲಿದ್ದಾರೆ. 'ಒಲವೇ ಮಂದಾರ' ಚಿತ್ರವನ್ನು ಬಿಬಿಎಂಪಿ ಕಾರ್ಪೊರೇಟರ್ ಹಾಗೂ ಶ್ರೀಕಿ ಅವರ ತಂದೆ ಗೋವಿಂದರಾಜು ನಿರ್ಮಿಸಿದ್ದರು. ಪಾತರಗಿತ್ತಿ ಹಾಗೂ ಗೋವಾ ಚಿತ್ರಗಳ ಬಳಿಕ ಅವರ ತಂದೆಯರ ನಿರ್ಮಾಣದ ಚಿತ್ರದಲ್ಲಿ ಶ್ರೀಕಿ ತೊಡಗಿಕೊಳ್ಳಲಿದ್ದಾರೆ.
Comments
ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ
Allow Notifications
You have already subscribed
English summary
'Olave Mandara' fame actor Shriki aka Shrikanth is all set to enter marital life. His wedding has been fixed on 29th November. Veena, an MBA graduate, is the bride and family says it's an arranged marriage.