Don't Miss!
- Sports IPL 2024 :ಬಲಿಷ್ಠ ಹೈದರಾಬಾದ್ ಬಗ್ಗು ಬಡಿದ ಆರ್ಸಿಬಿ: ಕಮಿನ್ಸ್ ಪಡೆಗೆ ಹೀನಾಯ ಸೋಲು
- News ಸಿಯಾಚಿನ್ ಬಳಿ ಚೀನಾ ಆಕ್ರಮಿತ ಕಾಶ್ಮೀರದಲ್ಲಿ ಹೊಸ ರಸ್ತೆ ನಿರ್ಮಾಣ; ಖಚಿತಪಡಿಸಿದ ಉಪಗ್ರಹ ಚಿತ್ರಗಳು
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಾಜಕೀಯಕ್ಕೆ ನಟ ದರ್ಶನ್ ಇಳಿಯೋದು ನಿಜನಾ?
ಈ ಪ್ರಶ್ನೆ ಸದ್ಯಕ್ಕೆ ದರ್ಶನ್ ಅಭಿಮಾನಿಗಳನ್ನೂ ಹಾಗೂ ಅವರನ್ನು ಹತ್ತಿರದಿಂದ ಬಲ್ಲವರನ್ನು ಕಾಡುತ್ತಲೇ ಇದೆ. ಸ್ವತಃ ಈ ಬಗ್ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಏನು ಹೇಳುತ್ತಾರೆಂದರೆ, ಸಿನಿಮಾ ರಾಜಕೀಯಾನೇ ಇನ್ನೂ ಸರಿಯಾಗಿ ಅರ್ಥವಾಗಿಲ್ಲ ಎಂದಿದ್ದಾರೆ.
ಇನ್ನು ರಾಜಕೀಯದ ಮಾತು ತುಂಬಾ ದೂರವಾದದ್ದು ಎಂಬುದು ಅವರ ಮಾತಿನ ಅರ್ಥ ಎಂದು ಬಿಡಿಸಿ ಹೇಳಬೇಕಾಗಿಲ್ಲ ಅಲ್ಲವೇ? ತಮ್ಮ ಖಾಸಗಿ ವಿಚಾರಗಳ ಬಗ್ಗೆ ಅವರು ನೇರವಾಗಿ ರಾಜ್ ಮ್ಯೂಸಿಕ್ ವಾಹಿನಿಯ ಖತರ್ನಾಕ್ ಕಾರ್ಯಕ್ರಮ 'ಸುಗುಣಾಸ್ ಸ್ಟ್ರೈಟ್ ಹಿಟ್' ನಲ್ಲಿ ಮಾತನಾಡಿದ್ದಾರೆ.
ನಟ ದರ್ಶನ್ ಅವರಿಗೆ ಕೇಳಲಾಗಿರುವ ಕೆಲವು ಪ್ರಶ್ನೆಗಳು ಹೀಗಿವೆ. ಇಲ್ಲಿವರೆಗಿನ ನಿಮ್ಮ ಜೀವನದಲ್ಲಿ ನಡೆದ ಘಟನೆಗಳಿಗೆ ರಿಗ್ರೇಟ್ ಮಾಡಿದ್ದೀರಾ? ಎಂಬ ಪ್ರಶ್ನೆಗೆ ಇಲ್ಲ ಎಂದಿದ್ದಾರೆ ದರ್ಶನ್. ಇನ್ನು ದರ್ಶನ್ ಹೇಳಿರುವುದೇನೆಂದರೆ ನಾನು ಯಾವತ್ತೂ ನನ್ನ ಹೆಂಡ್ತಿ ಮಕ್ಕಳನ್ನು ಮೀಡಿಯಾ ಮುಂದೆ ಕರೆದುಕೊಂಡು ಹೋಗಿಲ್ಲ ಎಂಬ ಉತ್ತರವನ್ನೂ ಕೊಟ್ಟಿದ್ದಾರೆ. (ಹ್ಯಾಟ್ರಿಕ್ ಹೀರೋ ಶಿವಣ್ಣ ಅಮ್ಮಾವ್ರ ಗಂಡನಾ?)
ಪ್ರತಿಯೊಬ್ಬ ಸ್ಟಾರ್ ಗೂ ಒಂದೊಂದು ಶೋಕಿ, ಕ್ರೇಜ್ ಅಂಥ ಇದ್ದೇ ಇರುತ್ತದೆ. ಅದನ್ನು ಮೀಡಿಯಾ ಮುಂದೆ ಇಡಬಾರದು ಅಂತೀರಾ? ಇದೇ ರೀತಿಯ ಅದೆಷ್ಟೋ ಪ್ರಶ್ನೆಗಳಿಗೆ ಉತ್ತರ ಸಿಗಬೇಕಾದರೆ ಇಂದು ರಾತ್ರಿ ಪ್ರಸಾರವಾಗುತ್ತಿರುವ ರಾಜ್ ಮ್ಯೂಸಿಕ್ ಚಾನಲ್ ನೋಡಲೇಬೇಕು. ಡೋಂಟ್ ಮಿಸ್. (ಒನ್ಇಂಡಿಯಾ ಕನ್ನಡ)