twitter
    For Quick Alerts
    ALLOW NOTIFICATIONS  
    For Daily Alerts

    ಮತ್ತೆ ಮೂರು ಕೋಟಿ ರೂ ದೇಣಿಗೆ ನೀಡಿದ ಬಾಲಿವುಡ್ ನಟ ಅಕ್ಷಯ್ ಕುಮಾರ್

    |

    ಕೊರೊನಾ ವೈರಸ್ ವಿರುದ್ಧದ ದೇಶದ ಹೋರಾಟಕ್ಕೆ 25 ಕೋಟಿ ರೂ.ಗಳ ದೊಡ್ಡ ಮೊತ್ತದ ದೇಣಿಗೆ ನೀಡುವ ಮೂಲಕ ಉದಾರತೆ ಮೆರೆದಿದ್ದ ಬಾಲಿವುಡ್ ನಟ ಅಕ್ಷಯ್ ಕುಮಾರ್, ಅಷ್ಟಕ್ಕೇ ಸುಮ್ಮನಾಗಿಲ್ಲ. ತಮ್ಮ ದುಡಿಮೆಯಯ ಇನ್ನೊಂದು ಭಾಗವನ್ನು ಅವರು ಜನರ ಸಂಕಷ್ಟಕ್ಕೆ ಮಿಡಿಯಲು ನೀಡುವ ಮೂಲಕ ಮಾನವೀಯತೆಯನ್ನು ಪ್ರದರ್ಶಿಸಿದ್ದಾರೆ.

    ನಾವಲ್ ಕೊರೊನಾ ವೈರಸ್ ವಿರುದ್ಧದ ಹೋರಾಟಕ್ಕೆ ನೆರವಾಗಲು ಅಕ್ಷಯ್ ಕುಮಾರ್ 25 ಕೋಟಿ ರೂ ಹಣವನ್ನು ಪಿಎಂ ಕೇರ್ಸ್ ಫಂಡ್‌ಗೆ ದೇಣಿಗೆಯಾಗಿ ನೀಡಿದ್ದರು. ಕೊರೊನಾ ವೈರಸ್ ಹಾವಳಿ ತೀವ್ರವಾಗಿರುವ ಮುಂಬೈ ನಗರಕ್ಕೆ ಪ್ರತ್ಯೇಕವಾಗಿ ಸಹಾಯ ಮಾಡಲು ಧಾವಿಸಿದ್ದಾರೆ. ಬೃಹನ್ ಮುಂಬೈ ಮಹಾನಗರ ಪಾಲಿಕೆಗೆ (ಬಿಎಂಸಿ) ಹೆಚ್ಚುವರಿಯಾಗಿ 3 ಕೋಟಿ ರೂ ಆರ್ಥಿಕ ನೆರವು ಕೊಟ್ಟಿದ್ದಾರೆ. ಮುಂದೆ ಓದಿ...

    ಪಿಪಿಇ ತಯಾರಿಸಲು ನೆರವು

    ಬೃಹನ್ ಮುಂಬೈ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಆರೋಗ್ಯ ಕಾರ್ಯಕರ್ತರು ಮತ್ತು ಪೌರ ಕಾರ್ಮಿಕರಿಗೆ ವೈಯಕ್ತಿಕ ಸುರಕ್ಷತಾ ಸಾಧನಗಳನ್ನು (ಪಿಪಿಇ) ತಯಾರಿಸಲು ಸಹಾಯ ಮಾಡುವ ಉದ್ದೇಶದಿಂದ ಅಕ್ಷಯ್ ಕುಮಾರ್ ಹಣವನ್ನು ದೇಣಿಗೆಯಾಗಿ ನೀಡಿದ್ದಾರೆ.

    ಪತ್ನಿಯನ್ನು ದಿಢೀರನೆ ಆಸ್ಪತ್ರೆಗೆ ಕರೆದೊಯ್ದ ನಟ ಅಕ್ಷಯ ಕುಮಾರ್: ವಿಡಿಯೋ ವೈರಲ್ಪತ್ನಿಯನ್ನು ದಿಢೀರನೆ ಆಸ್ಪತ್ರೆಗೆ ಕರೆದೊಯ್ದ ನಟ ಅಕ್ಷಯ ಕುಮಾರ್: ವಿಡಿಯೋ ವೈರಲ್

    ಕಷ್ಟ ಪಡುತ್ತಿರುವವರಿಗೆ ಕೃತಜ್ಞತೆ

    ಇಷ್ಟಲ್ಲದೆ ಅಕ್ಷಯ್ ಸ್ಥಳೀಯ ಅಧಿಕಾರಿಗಳಿಗೆ ಇತರೆ ಸಹಾಯಗಳನ್ನು ಮಾಡಲು ಸಹ ಮುಂದಾಗಿದ್ದಾರೆ ಎಂದು ವರದಿಯಾಗಿದೆ. ಗುರುವಾರ ಅಕ್ಷಯ್ ಕುಮಾರ್ 'ಹೃದಯದಾಳದಿಂದ ಧನ್ಯವಾದಗಳು' ಎಂದು ಬರೆದಿದ್ದ ಬಿತ್ತಿಪತ್ರ ಪ್ರದರ್ಶಿಸಿ ಟ್ವೀಟ್ ಮಾಡಿದ್ದರು. ಈ ಸಂಕಷ್ಟದ ಸಂದರ್ಭದಲ್ಲಿ ನಿರಂತರವಾಗಿ ಶ್ರಮಿಸುತ್ತಿರುವ ಎಲ್ಲ ಅಗತ್ಯ ವಸ್ತು ಸೇವೆಗಳ ಪೂರೈಕೆದಾರರಿಗೆ ಅವರು ಕೃತಜ್ಞತೆ ಸಲ್ಲಿಸಿದ್ದರು.

    ಧನ್ಯವಾದ ಹೇಳೋಣ

    ಇದರ ಜತೆಗೆ ಅಕ್ಷಯ್ ಮತ್ತೊಂದು ವಿಡಿಯೋ ಟ್ವೀಟ್ ಮಾಡಿದ್ದು, 'ಜನರು ಹಗಲು ರಾತ್ರಿ ಸೇನೆಯಂತೆ ಕೆಲಸ ಮಾಡಿ ನಮ್ಮನ್ನು ಮತ್ತು ನಮ್ಮಕುಟುಂಬಗಳನ್ನು ಸುರಕ್ಷಿತವಾಗಿರಿಸುತ್ತಿದ್ದಾರೆ. ಎಲ್ಲರೂ ಒಟ್ಟಿಗೆ ಹೃದಯದಿಂದ ಧನ್ಯವಾದ ಹೇಳೋಣ. ನಮ್ಮಿಂದ ಮಾಡಲಾಗುವ ಕಿಂಚಿತ್ ಕೆಲಸ ಅದು' ಎಂದಿದ್ದಾರೆ.

    ಕೊರೊನಾ ವಿರುದ್ಧ ಹೋರಾಟಕ್ಕೆ ಅಕ್ಷಯ್ ಭಾರಿ ಮೊತ್ತದ ದೇಣಿಗೆ: ಹೆಮ್ಮೆಯಾಗುತ್ತೆ ಎಂದ ಪತ್ನಿಕೊರೊನಾ ವಿರುದ್ಧ ಹೋರಾಟಕ್ಕೆ ಅಕ್ಷಯ್ ಭಾರಿ ಮೊತ್ತದ ದೇಣಿಗೆ: ಹೆಮ್ಮೆಯಾಗುತ್ತೆ ಎಂದ ಪತ್ನಿ

    ಮುಸ್ಕುರಾಯೇಗಾ ಇಂಡಿಯಾ ಹಾಡು

    ಬಾಲಿವುಡ್‌ನ ಅನೇಕ ಸೆಲೆಬ್ರಿಟಿಗಳನ್ನು 'ಮುಸ್ಕುರಾಯೇಗಾ ಇಂಡಿಯಾ' ಎಂಬ ಮ್ಯೂಸಿಕ್ ವಿಡಿಯೋಗಾಗಿ ಅವರು ಒಂದೆಡೆ ಸೇರಿಸಿದ್ದಾರೆ. ಈ ವಿಡಿಯೋದಲ್ಲಿ ಸೆಲೆಬ್ರಿಟಿಗಳು ಹಾಡುತ್ತಾ ಜನರನ್ನು ನಗುತ್ತಾ ಇರುವಂತೆ ಉತ್ತೇಜನ ನೀಡಿದ್ದಾರೆ. ಮಾರಕ ವೈರಸ್ ವಿರುದ್ಧದ ಹೋರಾಟದಲ್ಲಿ ನಿಮ್ಮ ಪ್ರೀತಿಪಾತ್ರದ ಜತೆಗಿರುವಂತೆ ಸಲಹೆ ನೀಡಿದ್ದಾರೆ.

    ನಾನು ಭಾರತೀಯನಷ್ಟೇ, ನನಗೆ ಧರ್ಮಗಳಲ್ಲಿ ನಂಬಿಕೆಯಿಲ್ಲ: ಅಕ್ಷಯ್ ಕುಮಾರ್ನಾನು ಭಾರತೀಯನಷ್ಟೇ, ನನಗೆ ಧರ್ಮಗಳಲ್ಲಿ ನಂಬಿಕೆಯಿಲ್ಲ: ಅಕ್ಷಯ್ ಕುಮಾರ್

    English summary
    Bollywood actor Akshay Kumar donates Rs 3 more crore to fight against coronavirus crisis. He donated money to BMC.
    Friday, April 10, 2020, 13:27
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X