Don't Miss!
- News Ballari Lok Sabha Election: ಶ್ರೀರಾಮುಲು ಪತ್ನಿ ನಾಮಪತ್ರ ವಾಪಸ್, ಅಂತಿಮ ಕಣದಲ್ಲಿ 10 ಅಭ್ಯರ್ಥಿಗಳು
- Technology ನಾಳೆ ವಿವೋದ ಈ ಹೊಸ ಫೋನ್ ಫಸ್ಟ್ ಸೇಲ್!..ಬಜೆಟ್ ಬೆಲೆಗೆ ಲಭ್ಯ!
- Lifestyle ಪ್ರತಿ ಲೀ ಕತ್ತೆ ಹಾಲಿಗೆ ₹5,000..! 20 ಕತ್ತೆಗಳ ಮೂಲಕ ₹2.5 ಕೋಟಿ ವ್ಯವಹಾರ..!
- Sports T20 World Cup 2024: ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಆರಂಭಿಕರನ್ನು ಸೂಚಿಸಿದ ಸೌರವ್ ಗಂಗೂಲಿ
- Automobiles ಫೋಕ್ಸ್ವ್ಯಾಗನ್ ವರ್ಟಸ್ ಕಾರಿಗೆ ಮನಸೋತ ಗ್ರಾಹಕರು: ಭಾರೀ ಬೇಡಿಕೆ
- Finance Bengaluru Karaga: ಇಂದು ಈ ರಸ್ತೆಗಳಲ್ಲಿ ಸಂಚಾರ ಬಂದ್, ಬದಲಿ ಮಾರ್ಗ ವಿವರ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬಾಲಿವುಡ್ನ ಸೆಲೆಕ್ಟಿವ್ ಸೆಕ್ಯುಲರಿಸಂ ವಿರುದ್ಧ ಕಿಡಿಕಾರಿದ ಕಂಗನಾ
ಬಾಲಿವುಡ್ನ ಅನೇಕ ಸೆಲೆಬ್ರಿಟಿಗಳ ಸೈದ್ಧಾಂತಿಕ ನಿಲುವುಗಳನ್ನು ಟೀಕಿಸುತ್ತಾ ಬಂದಿರುವ ನಟಿ ಕಂಗನಾ ರಣಾವತ್, ಆಯ್ಕೆಯಾಧಾರಿತ ಜಾತ್ಯತೀತತೆ ಪ್ರದರ್ಶಿಸುತ್ತಿದೆ ಎಂದು ಬಾಲಿವುಡ್ ವಿರುದ್ಧ ಕಿಡಿಕಾರಿದ್ದಾರೆ.
ಜೂನ್ 8ರಂದು ಅನಂತ್ ನಾಗ್ ಜಿಲ್ಲೆಯಲ್ಲಿ ಅಜಯ್ ಪಂಡಿತ ಎಂಬ ಕಾಶ್ಮೀರಿ ಪಂಡಿತ್ ಸಮುದಾಯದ ಸರಪಂಚ್ ಹತ್ಯೆಯ ವಿಚಾರದಲ್ಲಿ ಬಾಲಿವುಡ್ ಮೌನವಹಿಸಿರುವುದನ್ನು ಕಂಗನಾ ಖಂಡಿಸಿದ್ದಾರೆ. ಕಾಶ್ಮೀರದಲ್ಲಿ ಉಗ್ರರ ದಾಳಿಗೆ ಬಲಿಯಾದ ಅಜಯ್ ಪಂಡಿತ ಅವರಿಗೆ ನ್ಯಾಯ ಸಿಗಬೇಕು ಎಂದು ಕಂಗನಾ ಆಗ್ರಹಿಸಿದ್ದಾರೆ. ಬೇರೆ ಸಂದರ್ಭಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸುವ ಬಾಲಿವುಡ್ ಮಂದಿ ಕಾಶ್ಮೀರಿ ಪಂಡಿತನ ಹತ್ಯೆಗೆ ಯಾವ ಪ್ರತಿಕ್ರಿಯೆಯನ್ನೂ ನೀಡಿಲ್ಲ ಎಂದು ಕಂಗನಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮುಂದೆ ಓದಿ...
ಜಯಲಲಿತಾ ಕುರಿತ ಚಿತ್ರ ಅಮೆಜಾನ್, ನೆಟ್ ಫ್ಲಿಕ್ಸ್ ಎರಡಕ್ಕೂ ಸೇಲ್: ನಿರ್ಮಾಪಕರು ಸೇಫ್
ನಾನು ಹಿಂದೂಸ್ತಾನಿ
ಸಾಮಾಜಿಕ ಜಾಲತಾಣದಲ್ಲಿ ಫಲಕವೊಂದನ್ನು ಹಿಡಿದು ವಿಡಿಯೋದಲ್ಲಿ ಕಾಣಿಸಿಕೊಂಡಿರುವ ಕಂಗನಾ, ಸೆಲೆಕ್ಟಿವ್ ಸೆಕ್ಯುಲರಿಸಂ ಪ್ರದರ್ಶಿಸುವ ಬಾಲಿವುಡ್ ಮಂದಿ ವಿರುದ್ಧ ಹರಿಹಾಯ್ದಿದ್ದಾರೆ. 'ನಾನು ಹಿಂದೂಸ್ತಾನಿ, ನನಗೆ ನಾಚಿಕೆಯಾಗುತ್ತಿದೆ. ಅಜಯ್ ಪಂಡಿತಗೆ ನ್ಯಾಯ ಸಿಗಬೇಕು. ಅನಂತ್ ನಾಗ್ನಲ್ಲಿ ಕೊಲೆ. ಜಮ್ಮು ಕಾಶ್ಮೀರ' ಎಂದು ಫಲಕದಲ್ಲಿ ಬರೆಯಲಾಗಿದೆ.
ಬಾಲಿವುಡ್ ಮೌನ
'ಬಾಲಿವುಡ್ ಮಂದಿಯಲ್ಲಿ ಮಾನವೀಯತೆಯು ಜಿಹಾದಿ ಅಜೆಂಡಾದ ಬೆಂಬಲವಿದ್ದಾಗ ಮಾತ್ರವೇ ಪುಟಿದೇಳುತ್ತದೆ. ಆದರೆ ಬೇರೆಯವರಿಗೆ ನ್ಯಾಯ ದೊರಕಿಸುವ ವಿಚಾರದಲ್ಲಿ ಅವರು ಸಂಪೂರ್ಣ ಮೌನ ವಹಿಸುತ್ತಾರೆ' ಎಂದು ಕಂಗನಾ ಸಿಟ್ಟಿನಿಂದ ಹೇಳಿದ್ದಾರೆ.
ವಾವ್..! 48 ಕೋಟಿ ವೆಚ್ಚದ ಕಂಗನಾ ರಣಾವತ್ ಆಫೀಸ್ ಇದು
ಪಂಡಿತರಿಗೆ ನ್ಯಾಯ ಸಿಗಬೇಕು
'ಕಾಶ್ಮೀರಿ ಪಂಡಿತರನ್ನು ಅವರ ರಾಜ್ಯಕ್ಕೆ ಮರಳಿ ಕಳುಹಿಸಬೇಕು. ಅವರ ಹಕ್ಕಿನಂತೆ ಅವರಿಗೆ ಜಮೀನನ್ನು ಹಿಂದಿರುಗಿಸಬೇಕು. ಅವರಿಗೆಲ್ಲ ನ್ಯಾಯ ಒದಗಿಸಬೇಕು. ಹಾಗೆಯೇ ಅಜಯ್ ಪಂಡಿತ ಅವರ ತ್ಯಾಗ ವ್ಯರ್ಥವಾಗಬಾರದು' ಎಂದಿದ್ದಾರೆ.
ಪ್ರಧಾನಿ ಮೋದಿಗೆ ಮನವಿ
ಲಿಬರಲ್ಸ್ ಎಂದು ಗುರುತಿಸಿಕೊಳ್ಳುವವರು ಮತ್ತು ಬಾಲಿವುಡ್ನ ಸೆಲೆಕ್ಟಿವ್ ಸೆಕ್ಯುಲರಿಸಂ ಅದನ್ನು ಕಂಗನಾ ಖಂಡಿಸಿದ್ದಾರೆ. ಕಾಶ್ಮೀರಿ ಪಂಡಿತರ ವಿರುದ್ಧ ನಡೆಯುತ್ತಿರುವ ದೌರ್ಜನ್ಯ ತಡೆಯಲು ಕಠಿಣ ಕ್ರಮ ತೆಗೆದುಕೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದಾರೆ. ಹಾಗೆಯೇ ಅವರು ಸುರಕ್ಷಿತವಾಗಿ ತಾಯ್ನಾಡಿಗೆ ಮರಳಲು ಸಹಾಯ ಮಾಡುವಂತೆ ಕೇಳಿದ್ದಾರೆ ಎಂದು ಕಂಗನಾ ಟೀಮ್ ಬರೆದುಕೊಂಡಿದೆ.