Don't Miss!
- Lifestyle UPSCಯಲ್ಲಿ 2ನೇ ರ್ಯಾಂಕ್ ಗಳಿಸಿದ ಸಾಧಕನ ಡ್ಯಾನ್ಸ್ ವೀಡಿಯೋ ವೈರಲ್: ಇವರ ಬದುಕಿನಲ್ಲಿ ನಡೆದಿದೆ ಹಲವು ದುರಂತಗಳು
- News ಮಳೆ.. ಮಳೆ.. ಅಲ್ಲಲ್ಲ ಮುಂದಿನ 1 ವಾರ ಬೆಂಗಳೂರಲ್ಲಿ ಭಾರಿ ಬಿಸಿಲು!
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Sports CSK vs LSG IPL 2024: ಚೆನ್ನೈ vs ಲಕ್ನೋ ಹೈ-ವೋಲ್ಟೇಜ್ ಪಂದ್ಯದ ಟಾಸ್ ವರದಿ; ಆಡುವ 11ರ ಬಳಗ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸುಶಾಂತ್ ಸಿಂಗ್ ಜತೆ ಅಂದು ಮಾತನಾಡಬೇಕಿತ್ತು: ಕ್ರಿಕೆಟಿಗ ಶೋಯೆಬ್ ಅಖ್ತರ್ ಪಶ್ಚಾತ್ತಾಪ
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವು ಪಾಕಿಸ್ತಾನದ ಕ್ರಿಕೆಟಿಗ ಶೋಯೆಬ್ ಅಖ್ತರ್ ಅವರಲ್ಲಿ ತೀವ್ರ ನೋವುಂಟುಮಾಡಿದೆ. ಸುಶಾಂತ್ ಸಾವಿನ ಬಗ್ಗೆ ಮಾತನಾಡಿರುವ ಶೋಯೆಬ್ ಅಖ್ತರ್ ಸಂತಾಪ ವ್ಯಕ್ತಪಡಿಸಿದ್ದಾರೆ ಜತೆಗೆ ಜೀವನದ ಸಮಸ್ಯೆಗಳನ್ನು ಎದುರಿಸುವ ಮಾರ್ಗಗಳ ಬಗ್ಗೆಯೂ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.
Recommended Video
ಸುಶಾಂತ್ ಸಾವು ತಮ್ಮನ್ನು ವಿಚಲಿತಗೊಳಿಸಿದೆ ಎಂದಿರುವ ಅಖ್ತರ್, ಈ ಘಟನೆ ತುಂಬಾ ದುಃಖ ತಂದಿದೆ ಎಂದು ಹೇಳಿದ್ದಾರೆ. ನನಗೆ ಒಂದು ವಿಚಾರ ಪದೇ ಪದೇ ಕಾಡುತ್ತಿದೆ. 2016ರಲ್ಲಿ ನಾನು ಭಾರತ ತೊರೆಯುವ ಮುನ್ನ ಮುಂಬೈನ ಆಲಿವ್ನಲ್ಲಿ ಸುಶಾಂತ್ ಅವರನ್ನು ಭೇಟಿ ಮಾಡಿದ್ದೆ. ಉದ್ದನೆಯ ಕೂದಲು ಬಿಟ್ಟು ವಕ್ರವಾಗಿ ಟೊಪ್ಪಿ ಹಾಕಿದ್ದ ಹುಡುಗನನ್ನು ನೋಡಿದ್ದೆ ಎಂದಿದ್ದಾರೆ. ಮುಂದೆ ಓದಿ...
ಸುಶಾಂತ್ ಸಿಂಗ್ ಅನ್ನು ಸಿನಿಮಾವೊಂದರಿಂದ ಹೊರಹಾಕಲಾಗಿತ್ತು: ಸಂಜಯ್ ರಾವತ್
ಭರವಸೆ ಮೂಡಿರಲಿಲ್ಲ
ಆತ ಎಂ.ಎಸ್. ಧೋನಿಯ ಬಯೋಪಿಕ್ನಲ್ಲಿ ನಟಿಸಲಿದ್ದಾರೆ ಎಂದು ಯಾರೋ ನನಗೆ ಹೇಳಿದಾಗ ನನಗೆ ಅವರ ಬಗ್ಗೆ ಅಷ್ಟೇನೂ ವಿಶ್ವಾಸವೇ ಮೂಡಿರಲಿಲ್ಲ. ತಮ್ಮ ತಲೆ ಕೆಳಗೆ ಹಾಕಿಕೊಂಡು ನನ್ನ ಮುಂದೆ ಹೋಗಿದ್ದರು ಎಂದು ಹೇಳಿದ್ದಾರೆ.
ಸಿನಿಮಾ ನೋಡಬೇಕು ಎನಿಸಿತ್ತು
ಸುಶಾಂತ್ ಅವರನ್ನು ಆ ರೀತಿ ನೋಡಿದಾಗ ಅವರ ನಟನೆಯನ್ನು ನೋಡಬೇಕು ಎಂದು ನನಗೆ ಅನಿಸಿತ್ತು. ಅವರು ಬಹಳ ವಿನಮ್ರ ಹಿನ್ನೆಲೆಯಿಂದ ಬಂದವರು. ಅವರು ಒಳ್ಳೆಯ ಸಿನಿಮಾ ಮಾಡುತ್ತಿದ್ದರು. ಆ ಸಿನಿಮಾ ಯಶಸ್ವಿಯಾಗಿತ್ತು.
ಸುಶಾಂತ್ ಸಿಂಗ್ ನೆನಪಲ್ಲಿ ಮಹತ್ಕಾರ್ಯಕ್ಕೆ ಮುಂದಾದ ಕುಟುಂಬ
ಅನುಭವ ಹಂಚಿಕೊಳ್ಳಬೇಕಿತ್ತು
ಆದರೆ ಅಂದು ಅವರನ್ನು ಅಲ್ಲಿ ತಡೆದು ಜೀವನದ ಬಗ್ಗೆ ಮಾತನಾಡಲಿಲ್ಲ ಎಂದು ಈಗ ಪಶ್ಚಾತ್ತಾಪವಾಗುತ್ತಿದೆ. ಅಂದು ಅವರೊಂದಿಗೆ ನನ್ನ ಜೀವನದ ಅನುಭವವನ್ನು ಹಂಚಿಕೊಳ್ಳಬೇಕಿತ್ತು. ಅವರಿಗೆ ಜೀವನದ ವಿಶಾಲ ದೃಷ್ಟಿಕೋನವನ್ನು ನೀಡುವಂತೆ ಅಂದು ನಾನು ಮಾತನಾಡಬಹುದಾಗಿತ್ತೇನೋ. ಆದರೆ ಅವರೊಂದಿಗೆ ಮಾತನಾಡದಿರುವುದಕ್ಕೆ ಪಶ್ಚಾತ್ತಾಪ ಪಡುತ್ತಿದ್ದೇನೆ.
ದೀಪಿಕಾ ರೀತಿ ಮಾತನಾಡಬೇಕು...
ನಿಮ್ಮ ಬದುಕನ್ನು ಅಂತ್ಯಗೊಳಿಸುವುದು ಎಂದಿಗೂ ಆಯ್ಕೆಯಾಗಬಾರದು. ಜೀವನದಲ್ಲಿ ಹಿನ್ನಡೆಯೇ ದೊಡ್ಡ ಸಂಪತ್ತು. ಆದರೆ ನಿಮಗೆ ಸಮಸ್ಯೆ ಇದೆ ಎನ್ನುವುದು ಗೊತ್ತಾದಾಗ ಅದರ ಬಗ್ಗೆ ಚರ್ಚೆ ನಡೆಸಬೇಕು. ದೀಪಿಕಾ ಪಡುಕೋಣೆ ತಮ್ಮ ಬ್ರೇಕಪ್ ಬಳಿಕ ಉದ್ವೇಗಕ್ಕೆ ಒಳಗಾಗಿ ಸಹಾಯದ ಅಗತ್ಯ ಬಿದ್ದಾಗ ಅದರಿಂದ ಹೊರಬಂದು ಚರ್ಚಿಸಿದ್ದರು. ಸುಶಾಂತ್ ಅವರಿಗೂ ಸಹಾಯ ಬೇಕಿತ್ತು ಎನಿಸುತ್ತಿದೆ ಎಂದು ಹೇಳಿದ್ದಾರೆ.
ಕರಣ್ ಜೋಹರ್ ಶೋದಲ್ಲಿ ಸುಶಾಂತ್ ಬಗ್ಗೆ ಇಮ್ರಾನ್ ಹಶ್ಮಿ ಆಡಿದ್ದ ಮಾತುಗಳಿವು...