Don't Miss!
- Technology ಒಪ್ಪೋ ಸಂಸ್ಥೆಯ ಈ ಫೋನ್ ಬೆಲೆಯಲ್ಲಿ ಭರ್ಜರಿ ಇಳಿಕೆ; ಆಫರ್ಗೆ ಗ್ರಾಹಕರು ಫಿದಾ!
- News Tirumala Property: ತಿರುಪತಿ ತಿರುಮಲ ಶ್ರೀವಾರಿಯ 2023-24ರ ಆಸ್ತಿ ವಿವರ ಇಲ್ಲಿದೆ..
- Automobiles ಭಾರತದ ರಸ್ತೆಯಲ್ಲಿ ಘರ್ಜಿಸುತ್ತಿರುವ ಪವರ್ಫುಲ್ ಎಪ್ರಿಲಿಯಾ ಬೈಕ್ಗಾಗಿ ಅಕ್ಸೆಸರೀಸ್ ಬಿಡುಗಡೆ
- Sports ಐಪಿಎಲ್ನಿಂದ ದೂರವುಳಿದಿದ್ದ ಟೀಮ್ ಇಂಡಿಯಾ ವೇಗಿ ಟಿ20 ವಿಶ್ವಕಪ್ ಆಡುತ್ತಾರಾ?: ಆಟಗಾರ ಹೇಳಿದ್ದೇನು?
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಇಲ್ಲಿ ದೊಡ್ಡೋರ ಮಕ್ಕಳದ್ದೇ ಕಾರುಬಾರು: ಬಾಲಿವುಡ್ ಮೇಲೆ ತಾಪ್ಸಿ ಸಿಟ್ಟು
ತಮಿಳು ಚಿತ್ರರಂಗದಿಂದ ಬಾಲಿವುಡ್ಗೆ ಜಿಗಿದಿರುವ ತಾಪ್ಸಿ ಪನ್ನುಗೆ ಅಲ್ಲಿ ಕಹಿ ಅನುಭವಗಳೇ ಹೆಚ್ಚಾಗಿರುವಂತಿದೆ. ತನ್ನ ನಟನೆಯ ಕಾರಣದಿಂದ ಗಮನ ಸೆಳೆದರೂ ತಾಪ್ಸಿಗೆ ಎಷ್ಟೋ ಸಿನಿಮಾಗಳು ಕೈತಪ್ಪಿವೆ. ತಾನು ನಿಂತ ಜಾಗದಲ್ಲಿಯೇ ಅನಿಸಿದ್ದನ್ನು ಯಾವ ಮುಲಾಜೂ ಇಲ್ಲದೆ ತಾಪ್ಸಿ ನೇರವಾಗಿ ಹೇಳುವ ಛಾತಿಯವರು. ಬಾಲಿವುಡ್ನ ಪೈಪೋಟಿಯ ನಡುವೆಯೂ ಅವರು ತಮ್ಮ ಛಾಪು ಮೂಡಿಸಿದ್ದಾರೆ.
ಪೈಪೋಟಿ ಎಂದರೆ ಅವರಿಗೆ ಎದುರಾಗಿರುವುದು ಬಾಲಿವುಡ್ನ ತಾರೆಯರು, ಅವರ ಕುಟುಂಬ ಹಾಗೂ ಮಕ್ಕಳಿಂದ. ಬಾಲಿವುಡ್ ಎಂದರೆ ವಂಶಪಾರಂಪರ್ಯದ ಸ್ವತ್ತಿನಂತೆ ಕೆಲವರು ಭಾವಿಸುತ್ತಿದ್ದಾರೆ ಎಂದು ತಾಪ್ಸಿಗೆ ಅನಿಸಿದೆ. 'ಪಿಂಕ್' ಚಿತ್ರ ಖ್ಯಾತಿಯ ತಾಪ್ಸಿ ಪನ್ನು, ಬಾಲಿವುಡ್ನಲ್ಲಿ ಹೆಚ್ಚು ಚರ್ಚೆಯಲ್ಲಿರುವ 'ಸ್ವಜನಪಕ್ಷಪಾತ'ದ ಕುರಿತು ದಿಟ್ಟತನದಿಂದ ದನಿ ಎತ್ತಿದ್ದಾರೆ.
'ತಾಪ್ಸಿ ಫೀಮೇಲ್ ಆಯುಷ್ಮಾನ್' ಎಂದ ನಿರ್ಮಾಪಕ: ಮುನಿಸಿಕೊಂಡು ಪ್ರತಿಕ್ರಿಯಿಸಿದ ನಟಿ
ನನ್ನ ಜಾಗಕ್ಕೆ ತಾರೆಯರ ಮಕ್ಕಳು
ತಾಪ್ಸಿ ಪನ್ನು ನಟಿಸಿರುವ 'ತಪ್ಪಡ್' ಇತ್ತೀಚೆಗೆ ಬಿಡುಗಡೆಯಾಗಿದೆ. ಈ ಚಿತ್ರದ ಪ್ರಚಾರದ ವೇಳೆ ಅವರು, ಹಿಂದಿ ಚಿತ್ರರಂಗದ ಮೇಲೆ ಗಮನಾರ್ಹ ಆರೋಪ ಮಾಡಿದ್ದಾರೆ. ಅನೆಕ ಚಿತ್ರ ನಿರ್ದೇಶಕರು ತಮ್ಮನ್ನು 'ತಿರಸ್ಕರಿಸಿ', ಹಿಂದಿ ಚಿತ್ರರಂಗದ ತಾರಾ ಕಲಾವಿದರ ಮಕ್ಕಳಿಗೆ ಅವಕಾಶ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.
ದೊಡ್ಡ ನಟರ ಚಿತ್ರ ತಿರಸ್ಕರಿಸುವುದು 'ಸುರಕ್ಷಿತವಲ್ಲ' ಎಂದು ತಾಪ್ಸಿ ಹೇಳಿದ್ದೇಕೆ?
ಸ್ವಜನಪಕ್ಷಪಾತದಿಂದ ನೋವು
ತಮ್ಮಷ್ಟು ಪ್ರತಿಭಾವಂತರಲ್ಲದಿದ್ದರೂ ಸ್ಟಾರ್ ಕಲಾವಿದರ ಮಗಳು ಎಂಬ ಕಾರಣಕ್ಕೆ ಆಕೆಗೆ ಸಿನಿಮಾದಲ್ಲಿ ಪಾತ್ರ ನೀಡಲಾಗಿದೆ. ಬಾಲಿವುಡ್ನಲ್ಲಿ ಸ್ವಜನಪಕ್ಷಪಾತದಿಂದ ಅತ್ಯಂತ ಹೆಚ್ಚು ಸಮಸ್ಯೆ ಅನುಭವಿಸಿದ ನಟಿಯೆಂದರೆ ತಾವೇ ಎಂದು ತಾಪ್ಸಿ ಹೇಳಿದ್ದಾರೆ.
ಹೆಚ್ಚು ಸಮಯ ಉಳಿಯೊಲ್ಲ ಎಂದುಕೊಂಡಿದ್ದರು
ಆಫರ್ಗಳನ್ನು ಕಳೆದುಕೊಂಡಿದ್ದರಿಂದ ಅತೀವ ದುಃಖ ಮತ್ತು ನೋವುಂಟಾಗಿತ್ತು. ಹೀಗಾಗಿ ಸಾಕಷ್ಟು ಅತ್ತಿದ್ದಾಗಿ ಹೇಳಿಕೊಂಡಿದ್ದಾರೆ. ಆದರೆ ಬಾಲಿವುಡ್ ತಾನು ಉದ್ಯಮದಲ್ಲಿ ಅಸ್ತಿತ್ವ ಉಳಿಸಿಕೊಳ್ಳಲು ಸಾಧ್ಯವಿಲ್ಲ, ಬೇಗನೆ ವಾಪಸ್ ಓಡಿಹೋಗುತ್ತಾಳೆ ಎಂದೇ ಭಾವಿಸಿತ್ತು ಎಂದಿದ್ದಾರೆ. 'ನಾನು ಹೆಚ್ಚು ಸಮಯ ಉಳಿಯುವುದಿಲ್ಲ ಎಂದು ಜನರು ಭಾವಿಸಿದ್ದರು. ಅನೇಕರು ನಾನು ಕಂಗೆಡುತ್ತೇನೆ ಎಂದುಕೊಂಡಿದ್ದರು. ನನಗೆ ಯಶಸ್ಸು ಸಿಕ್ಕಾಗಲೂ ನಾನು ಒಂದು ಅಥವಾ ಎರಡು ಸಿನಿಮಾಗಳನ್ನು ಮಾಡಬಹುದು. ಬಳಿಕ ವಾಪಸ್ ಹೋಗುತ್ತೇನೆ ಎಂದುಕೊಂಡಿದ್ದರು' ಎಂದು ತಿಳಿಸಿದ್ದಾರೆ.
ಈಗಲೂ ಹಾಗೆಯೇ ಹೇಳುತ್ತಿದ್ದಾರೆ
'ನನಗೆ ಯಶಸ್ಸು ಸಿಕ್ಕ ಬಳಿಕವೂ ಒಂದು ಅಥವಾ ಎರಡು ಅಥವಾ ಇನ್ನು ಕೆಲವಷ್ಟೇ. ಬಳಿಕ ಆಕೆ ಓಡಿಹೋಗುವುದು ಖಚಿತ ಎಂದುಕೊಂಡಿದ್ದರು. ಅಷ್ಟೇ ಅಲ್ಲ, ಜನರು ಈಗಲೂ ನನ್ನ ಬಗ್ಗೆ ಹಾಗೆಯೇ ಅಂದುಕೊಂಡಿದ್ದಾರೆ' ಎಂದು ತಾಪ್ಸಿ ಬಾಲಿವುಡ್ ಮನಸ್ಥಿತಿಯ ಬಗ್ಗೆ ಅಚ್ಚರಿ ಮತ್ತು ಅಸಮಾಧಾನ ವ್ಯಕ್ತಪಡಿಸಿದ್ದಾರೆ.