Don't Miss!
- Automobiles ರಾಜ್ಯದಲ್ಲಿ ತಯಾರಾಗುವ ಟೊಯೊಟಾ ಇನ್ನೋವಾ ಹೈಕ್ರಾಸ್ಗೆ ಸೆಲೆಬ್ರಿಟಿಗಳು ಫಿಧಾ: ಈ ಕಾರು ಖರೀದಿಸಿದ ನಟಿ
- News Bengaluru Rain: ಸುದೀರ್ಘ ಕಾಯುವಿಕೆ ಅಂತ್ಯ: ಬೆಂಗಳೂರಿಗೆ ಎಂಟ್ರಿ ಕೊಟ್ಟ ಮಳೆ; ವಿಡಿಯೋ ನೋಡಿ
- Lifestyle 5 ನಿಮಿಷದಲ್ಲಿ ಪಾತ್ರೆಯನ್ನು ಹೊಳೆಯುವಂತೆ ಮಾಡಿ..! ಸುಲಭದ ಟಿಪ್ಸ್ ಇಲ್ಲಿದೆ
- Technology oneplus: ಒನ್ಪ್ಲಸ್ನಿಂದ ಫ್ಲ್ಯಾಗ್ಶಿಪ್ ಕ್ಯಾಮೆರಾ ಸೌಲಭ್ಯದೊಂದಿಗೆ ಫ್ಲಿಪ್ ಫೋನ್!
- Sports LSG vs CSK IPL 2024: ಲಕ್ನೋ vs ಚೆನ್ನೈ ಪಂದ್ಯದ ವರದಿ, ಫ್ಯಾಂಟಸಿ ಡ್ರೀಮ್ ಟೀಂ, ಸಂಭಾವ್ಯ ಆಡುವ 11ರ ಬಳಗ
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹಿಂದಿ ಸೀರಿಯಲ್ ಡಬ್ಬಿಂಗ್ : ಜೀ ಟಿವಿ ಕಚೇರಿ ಧ್ವಂಸ
'ಝಾನ್ಸಿ ಕಿ ರಾಣಿ' ಹಿಂದಿ ಧಾರವಾಹಿಯನ್ನು ಯಥಾವತ್ತಾಗಿ ಕನ್ನಡಕ್ಕೆ ಡಬ್ ಮಾಡಿ ಪ್ರಸಾರ ಮಾಡಲಾಗುತ್ತಿತ್ತು. ಈ ಸಂಬಂಧ ಲಿಖಿತ ಮನವಿಗೆ ಸ್ಪಂದಿಸದ ಜೀ ಟಿವಿ ಆಡಳಿತ ಮಂಡಳಿ ವಿರುದ್ದ ಪ್ರತಿಭಟನೆ ವಿಕೋಪಕ್ಕೆ ತಿರುಗಿ ಕಲಾವಿದರು ಕಚೇರಿಯ ಕಂಪ್ಯೂಟರ್, ಕಿಟಕಿ, ಗಾಜುಗಳನ್ನು ಪುಡಿಗೈದಿದ್ದಾರೆ. ರವಿಕಿರಣ್, ಅಭಿನಯಾ ಮುಂತಾದ ಕಲಾವಿದರ ವಿರುದ್ದ ಆಡಳಿತ ಮಂಡಳಿ ದೂರು ನೀಡಿದ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ತದನಂತರ, ಜೀ ಟಿವಿ ದೂರು ವಾಪಸು ಪಡೆದುಕೊಂಡ ಮೇಲೆ ಎಲ್ಲಾ ಕಲಾವಿದರನ್ನು ಬಿಡುಗಡೆ ಗೊಳಿಸಲಾಗಿದೆ.
"ನಾವು ಕಚೇರಿಗೆ ಏನೂ ತೊಂದರೆ ಮಾಡಿಲ್ಲ. ಮನವಿ ಸಲ್ಲಿಸಲಷ್ಟೇ ಹೋಗಿದ್ದೆವು. ನಗರದ ಎರಡು ಕೇಬಲ್ ಆಪರೇಟರ್ ಗಳು ಜೀ ಟಿವಿ ಪ್ರಸಾರವನ್ನು ಎರಡು ದಿನ ನಿಷೇಧಿಸಲು ಒಪ್ಪಿಕೊಂಡಿವೆ. ಕಳೆದ ಮೂರು ತಿಂಗಳಿನಿಂದ ನಾವು ಮನವಿ ಸಲ್ಲಿಸುತ್ತಲೇ ಬಂದಿದ್ದೇವೆ. ಸುಮಾರು ಹತ್ತು ಸಾವಿರ ಕಲಾವಿದರು ಇದನ್ನೇ ನಂಬಿ ಬದುಕುತ್ತಿದ್ದೇವೆ. ನಮ್ಮ ನೋವು ಅವರಿಗೆ ತಿಳಿಯಬೇಕು" ಎಂದು ರವಿ ಕಿರಣ್ ಹೇಳಿಕೆ ನೀಡಿದ್ದಾರೆ. ಈ ಮಧ್ಯೆ ಜೀ ಟಿವಿ ಡಬ್ಬಿಂಗ್ ಧಾರವಾಹಿಯನ್ನು ತಕ್ಷಣದಿಂದ ನಿಲ್ಲಿಸಲಾಗುವುದು ಎಂದು ಹೇಳಿಕೆ ನೀಡಿ ನಡೆದ ಘಟನೆಗೆ ಜೀ ಕನ್ನಡ ಚಾನಲ್ ಕ್ಷಮೆ ಯಾಚಿಸಿದೆ.