Adipurush: ಡಾರ್ಲಿಂಗ್ ಪ್ರಭಾಸ್ ಎಲ್ಲಿ? ಟ್ರೋಲ್ ಆದರೂ 'ಆದಿಪುರುಷ್' ಬಗ್ಗೆ ತುಟಿಬಿಚ್ಚಿಲ್ಲ ಏಕೆ?
ಪ್ರಭಾಸ್ ರೇಂಜ್ ಕಮ್ಮಿಯೇನಿಲ್ಲ. ಈ ಪ್ಯಾನ್ ಇಂಡಿಯಾ ಸ್ಟಾರ್ ನಂಬಿ ಸಿನಿಮಾಗೆ 500 ಕೋಟಿ ರೂ. ಹೂಡಿಕೆ ಮಾಡಿರಬೇಕಾದರೆ, ಡಾರ್ಲಿಂಗ್ ಸಣ್ಣ ಪುಟ್ಟ ನಟನಲ್ಲ ಅನ್ನೋದು ಸುಲಭವಾಗಿ ಹೇಳಬಹುದು.
ಇಷ್ಟೊಂದು ಜನಪ್ರಿಯತೆ ಕೊಟ್ಟಿದ್ದು ರಾಜಮೌಳಿ ನಿರ್ದೇಶಿಸಿದ 'ಬಾಹುಬಲಿ'. ಇದೇ ಸಿನಿಮಾ ಇಲ್ಲಿವರೆಗೂ ಪ್ರಭಾಸ್ ಜನಪ್ರಿಯತೆಯನ್ನು ಉಳಿಸಿಕೊಂಡು ಬಂದಿದೆ. ಆದರೆ, ಈ ಹೆಸರನ್ನು ಉಳಿಸಿಕೊಳ್ಳುವುದಕ್ಕೆ ಪ್ರಭಾಸ್ ಪರದಾಡುತ್ತಿರೋದು ಎಲ್ಲರ ಕಣ್ಣಿಗೂ ಕಾಣಿಸುತ್ತಿದೆ.

'ಬಾಹುಬಲಿ'ಯಂತಹ ಮೆಗಾ ಹಿಟ್ ಕೊಟ್ಟ ಪ್ರಭಾಸ್ ಸಾಲು ಸಾಲು ಸೋಲು ಕಂಡಿದ್ದಾರೆ. 'ಸಾಹೋ', 'ರಾಧೆಶ್ಯಾಮ್' ಈಗ 'ಆದಿಪುರುಷ್' ಕೂಡ ಇದೇ ಹಾದಿ ಹಿಡಿಯುವ ಲಕ್ಷಣಗಳು ಎದ್ದು ಕಾಣಿಸುತ್ತಿವೆ. 'ಆದಿಪುರುಷ್' ದೇಶಾದ್ಯಂತ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ. ಇಷ್ಟೆಲ್ಲ ಆದರೂ, ಪ್ರಭಾಸ್ ಮಾತ್ರ ಸೈಲೆಂಟ್ ಮೋಡ್ಗೆ ಜಾರಿದ್ದಾರೆ. ಎಲ್ಲಿದ್ದಾರೆ? ಸಿನಿಮಾ ಬಗ್ಗೆ ಯಾಕೆ ಮಾತಾಡುತ್ತಿಲ್ಲ? ಅನ್ನೋ ಗೊಂದಲದಲ್ಲಿ ಫ್ಯಾನ್ಸ್ ಇದ್ದಾರೆ.
ಡಾರ್ಲಿಂಗ್ ಪ್ರಭಾಸ್ ಎಲ್ಲಿ?
'ಆದಿಪುರುಷ್' ಬಿಡುಗಡೆ ಆದಲ್ಲಿಂದ ನೆಗೆಟಿವ್ ಕಮೆಂಟ್ಗಳು ಬರುತ್ತಲೇ ಇವೆ. ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಹೆವಿ ಟ್ರೋಲ್ ಆಗಿವೆ. ಇನ್ನೊಂದು ಕಡೆ 'ಆದಿಪುರುಷ್' ಬಿಡುಗಡೆಗೂ ಮುನ್ನ ಪ್ರಭಾಸ್ ಗಾಯಬ್ ಆಗಿದ್ದಾರೆ. ಇಷ್ಟೆಲ್ಲ ನೆಗೆಟಿವ್ ಕಮೆಂಟ್ಗಳು ಬಂದರೂ ಪ್ರಭಾಸ್ ಎಲ್ಲೂ ಏನೂ ಹೇಳಿಕೆ ಕೊಟ್ಟಿಲ್ಲ.
ಅಸಲಿಗೆ ಪ್ರಭಾಸ್ ಎಲ್ಲಿದ್ದಾರೆ? ಅನ್ನೋದೇ ಗೊತ್ತಿಲ್ಲ. 'ಆದಿಪುರುಷ್' ವಿರುದ್ಧ ಇಷ್ಟೊಂದು ವಿರೋಧ ವ್ಯಕ್ತವಾಗಿದ್ದರೂ ಯಾಕೆ ಸೈಲೆಂಟ್ ಆಗಿದ್ದಾರೆ ಅನ್ನೋದು ಗೊತ್ತಿಲ್ಲ. ಹೀಗಾಗಿ ಒಂದು ಗುಂಪು ಪ್ರಭಾಸ್ ಎಲ್ಲಿ? ಎಂದು ಪ್ರಶ್ನೆ ಮಾಡುತ್ತಿದೆ.

ಭಾರತದಲ್ಲಿ ಇಲ್ವಾ? ಪ್ರಭಾಸ್?
ಡಾರ್ಲಿಂಗ್ ಪ್ರಭಾಸ್ 'ಆದಿಪುರುಷ್' ಬಿಡುಗಡೆಗೂ ಮುನ್ನವೇ ವಿದೇಶಕ್ಕೆ ತೆರಳಿದ್ದಾರೆ ಎನ್ನಲಾಗಿದೆ. ನಿರಂತರ ಶೂಟಿಂಗ್ ಅಂತ ಬ್ಯುಸಿಯಾಗಿದ್ದ ಪ್ರಭಾಸ್ ಈಗ ಬ್ರೇಕ್ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಅಮೆರಿಕಾಗೆ ತೆರಳಿದ್ದಾರೆ ಅನ್ನೋ ಮಾತು ಕೇಳಿಬರುತ್ತಿದೆ.
ಅಲ್ಲದೆ 'ಆದಿಪುರುಷ್' ತಂಡದ ಬಗ್ಗೆ ಪ್ರಭಾಸ್ ಕೂಡ ಕೋಪಗೊಂಡಿದ್ದಾರೆ ಎನ್ನಲಾಗಿದೆ. ಅದರಲ್ಲೂ ನಿರ್ದೇಶಕ ಓಂ ರಾವುತ್ ವಿರುದ್ಧ ಪ್ರಭಾಸ್ ಬೇಸರ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಪ್ರಚಾರಕ್ಕೂ ಬರುತ್ತಿಲ್ಲ ಎಂದು ಟಾಲಿವುಡ್ ಮಾತಾಡಿಕೊಳ್ಳುತ್ತಿದೆ.
'ಸಾಹೋ' ವೇಳೆನೂ ಹೀಗೆ ಆಗಿತ್ತು
'ಆದಿಪುರುಷ್' ರಿಸಲ್ಟ್ನಿಂದ ಪ್ರಭಾಸ್ ಅಭಿಮಾನಿಗಳು ಕೆಂಡಕಾರುತ್ತಿದ್ದಾರೆ. ಇತ್ತ ಪ್ರಭಾಸ್ ಕೂಡ ನಿರ್ದೇಶಕರಿಂದ ನಿರಾಸೆಗೊಂಡಿದ್ದಾರೆ ಎನ್ನಲಾಗಿದೆ. 'ಬಾಹುಬಲಿ' ಬಳಿಕ ಪ್ರಭಾಸ್ಗೆ ಆಕ್ಷನ್ ಕಟ್ ಹೇಳಿದ ನಿರ್ದೇಶಕರು ಬಿಗ್ ಹಿಟ್ ಕೊಡುವಲ್ಲಿ ಸೋತಿದ್ದಾರೆ. ಇನ್ನೊಂದು ಕಡೆ ಅವರನ್ನು ನಂಬಿ ಪ್ರಭಾಸ್ ಮೋಸ ಹೋಗಿದ್ದಾರೆ ಅನ್ನೋ ಅಭಿಪ್ರಾಯ ವ್ಯಕ್ತವಾಗಿದೆ.
'ಸಾಹೋ' ಸಿನಿಮಾ ಬಿಡುಗಡೆ ವೇಳೆನೂ ಪ್ರಭಾಸ್ ಹೀಗೆ ಗಾಯಬ್ ಆಗಿದ್ದರು. ಸಿನಿಮಾಗೆ ಸಿಕ್ಕ ರೆಸ್ಪಾನ್ಸ್ನಿಂದ ಬೇಸರಗೊಂಡಿದ್ದರು. ಹೀಗಾಗಿ ಸಿನಿಮಾ ಪ್ರಚಾರಕ್ಕೂ ಬಂದಿರಲಿಲ್ಲ. ಸದ್ಯ 'ಸಾಹೋ', 'ರಾಧೆಶ್ಯಾಮ್' ಸೋಲಿನ ಬಳಿಕ ಈಗ 'ಆದಿಪುರುಷ್' ಕೂಡ ಅದೇ ಹಿಡಿದಿರೋದು ಬೇಸರ ತರಿಸಿದೆ.


Click it and Unblock the Notifications











