ಮಾಲ್ಡೀವ್ಸ್ನಲ್ಲಿ ಸೀಕ್ರೆಟ್ ಮೀಟಿಂಗ್ ಮಾಡೋಕೆ ಹೋಗಿದ್ರಾ ರಜನಿಕಾಂತ್? ವೈರಲ್ ಆಗ್ತಿರೋ ಸುದ್ದಿಯೇನು?
ಸೂಪರ್ಸ್ಟಾರ್ ರಜನಿಕಾಂತ್ 'ಜೈಲರ್' ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಇಂದು (ಜುಲೈ 27) ಜೈಲರ್ ಸಿನಿಮಾ ಆಡಿಯೋ ಲಾಂಚ್ ಅದ್ಧೂರಿ ಕಾರ್ಯಕ್ರಮವಿದೆ. ಈ ಕಾರ್ಯಕ್ರಮದಲ್ಲಿ ರಜನಿಕಾಂತ್ ಪ್ರಮುಖ ಅತಿಥಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
'ಜೈಲರ್' ಆಡಿಯೋ ಲಾಂಚ್ ಸದ್ದು ಮಾಡುತ್ತಿಲ್ಲ. ಆದರೆ, ರಜನಿ ಕೆಲವು ದಿನಗಳ ಹಿಂದಷ್ಟೇ ಮಾಲ್ಡೀವ್ಸ್ಗೆ ಹೋಗಿದ್ದ ಸುದ್ದಿನೇ ಟ್ರೆಂಡಿಂಗ್ನಲ್ಲಿದೆ. ಸೂಪರ್ಸ್ಟಾರ್ ರಜನಿಕಾಂತ್ ಮಾಲ್ಟೀವ್ಸ್ಗೆ ಹೋಗಿದ್ದು ಏಕೆ? ಅನ್ನೋ ಬಗ್ಗೆ ಚರ್ಚೆಯಾಗುತ್ತಿದೆ. ಮೂಲಗಳ ಪ್ರಕಾರ, ರಜನಿಕಾಂತ್ ಸೀಕ್ರೆಟ್ ಮೀಟಿಂಗ್ ಮಾಡುವುಕ್ಕೆ ಹೋಗಿದ್ದರು ಅಂತ ಸುದ್ದಿಯಾಗುತ್ತಿದೆ.

ಕೆಲವು ದಿನಗಳ ಹಿಂದೆ ರಜನಿಕಾಂತ್ ಮಾಲ್ಡೀವ್ಸ್ ಹಾರಿದ್ದ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದ್ದವು. ರಜನಿ ವಿಶ್ರಾಂತಿ ಪಡುವುದಕ್ಕಾಗಿ ಮಾಲ್ಡೀವ್ಸ್ಗೆ ಹೋಗಿದ್ದಾರೆಂದು ಈ ಹಿಂದೆ ಸುದ್ದಿ ಹಬ್ಬಿತ್ತು. ಆದ್ರೀಗ ಸೀಕ್ರೆಟ್ ಮೀಟಿಂಗ್ ಮಾಡುವುದಕ್ಕೆ ಹೋಗಿದ್ದರು ಎಂದು ಸುದ್ದಿ ಹಬ್ಬಿದೆ.\
ರಜನಿಕಾಂತ್ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿ
ರಜನಿಕಾಂತ್ ಒಂದರ ಹಿಂದೊಂದು ಸಿನಿಮಾಗಳಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಅಲ್ಲದೆ 'ಜೈಲರ್' ಶೂಟಿಂಗ್ ಈಗಾಗಲೇ ಮುಗಿದಿದೆ. ಅಲ್ಲದೆ ಪುತ್ರಿ ಐಶ್ವರ್ಯಾ ನಿರ್ದೇಶನದ 'ಲಾಲ್ ಸಲಾಮ್' ಸಿನಿಮಾದ ಶೂಟಿಂಗ್ ಕೂಡ ಕಂಪ್ಲೀಟ್ ಮಾಡಿದ್ದಾರೆ. ಇದರ ಬೆನ್ನಲ್ಲೇ ಲೈಕಾ ಪ್ರೊಡಕ್ಷನ್ ನಿರ್ಮಿಸುತ್ತಿರುವ ಜೈ ಭೀಮ್ ಖ್ಯಾತಿಯ ಜ್ಞಾನವೇಲ್ ನಿರ್ದೇಶನದ ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಲೋಕೇಶ್ ಕನಗರಾಜ್ ಸಿನಿಮಾ ಮೇಲೆ ರಜನಿ ಫ್ಯಾನ್ಸ್ ಕಣ್ಣಿಟ್ಟಿದ್ದಾರೆ. ಈ ಮಧ್ಯೆ ಮಾಲ್ಡೀವ್ಸ್ ಸೀಕ್ರೆಟ್ ಮೀಟಿಂಗ್ ಜೋರಾಗಿ ಸದ್ದು ಮಾಡುತ್ತಿದೆ.
ರಜನಿ ಮಾಲ್ಡೀವ್ಸ್ ಟೂರ್
ರಜನಿಕಾಂತ್ ಮಾಲ್ಟೀವ್ಗೆ ಟೂರ್ ಹೋಗಿದ್ದು ಈಗ ಸದ್ದು ಮಾಡುತ್ತಿದೆ. ಆರಂಭದಲ್ಲಿ 'ಜೈಲರ್' ಹಾಗೂ 'ಲಾಲ್ ಸಲಾಂ' ಸಿನಿಮಾಗಳ ಶೂಟಿಂಗ್ ಮುಗಿಸಿರೋ ಬೆನ್ನಲ್ಲಿ ವಿಶ್ರಾಂತಿಗೆಂದು ತೆರಳಿದ್ದಾರೆ ಎನ್ನಲಾಗಿತ್ತು. ಆದ್ರೀಗ ಹೊಸ ಸುದ್ದಿಯೊಂದು ಓಡಾಡುತ್ತಿದೆ. ಸೀಕ್ರೆಟ್ ಮೀಟಿಂಗ್ ಮಾಡುವುದಕ್ಕೆ ಹೋಗಿದ್ದರು ಎಂದು ತಮಿಳು ಮಾಧ್ಯಮಗಳು ಸುದ್ದಿ ಮಾಡಿವೆ. ಅಷ್ಟಕ್ಕೂ ಆ ಸೀಕ್ರೆಟ್ ಮೀಟಿಂಗ್ ಏನು? ಅನ್ನೋದು ಮತ್ತಷ್ಟು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.

ಏನಿದು ಸೀಕ್ರೆಟ್ ಮೀಟಿಂಗ್?
ರಜನಿಕಾಂತ್ ಕೆಲವು ದಿನಗಳಿಂದ ಟೆನ್ಷನ್ನಲ್ಲಿ ಇದ್ದರು. ಪುತ್ರಿ ಐಶ್ವರ್ಯಾ ರಜನಿಕಾಂತ್ ವಿಚ್ಚೇದನದ ಬಳಿಕ ಬೇಸರಗೊಂಡಿದ್ದರು. ಹೀಗಾಗಿ ಮಗಳ ಭವಿಷ್ಯವನ್ನು ಸರಿಪಡಿಸುವ ಬಗ್ಗೆ ಆಲೋಚಿಸುತ್ತಿದ್ದಾರೆ ಎನ್ನಲಾಗಿದೆ. ಈ ಕಾರಣಕ್ಕೆ ರಜನಿಕಾಂತ್ ಮಾಜಿ ಅಳಿಯ ಧನುಷ್ ಹಾಗೂ ಪುತ್ರಿ ಐಶ್ವರ್ಯಾರನ್ನು ರಹಸ್ಯವಾಗಿ ಭೇಟಿ ಮಾಡಿ, ಇಬ್ಬರನ್ನೂ ಒಂದು ಮಾಡುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಆ ವಿಚಾರವಾಗಿಯೇ ಇಬ್ಬರೊಂದಿಗೆ ಮೀಟಿಂಗ್ ಮಾಡುವುದಕ್ಕೆ ಮಾಲ್ಡೀವ್ಸ್ ಅನ್ನು ಆಯ್ಕೆ ಮಾಡಿಕೊಂಡಿದ್ದರು ಎನ್ನಲಾಗಿದೆ.
ಸಕಸ್ಸ್ ಆಯ್ತಾ ಸೀಕ್ರೆಟ್ ಮೀಟಿಂಗ್?
ಧನುಷ್ ಹಾಗೂ ಐಶ್ವರ್ಯಾ ಇಬ್ಬರೂ ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದಾರೆ. ರಜನಿಕಾಂತ್ಗೆ ಇದು ಇಷ್ಟವಿಲ್ಲ. ಹೀಗಾಗಿ ಇಬ್ಬರು ಮಕ್ಕಳ ದೃಷ್ಟಿಯಿಂದ ಇಬ್ಬರನ್ನು ಮತ್ತೆ ಒಂದು ಮಾಡುವುದಕ್ಕೆ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಮಾಲ್ಡೀವ್ಸ್ಗೆ ಕರೆಸಿ ಇಬ್ಬರ ಮನವೊಲಿಸುವ ಯತ್ನಕ್ಕೆ ಮುಂದಾಗಿದ್ದರು. ಆದರೆ, ಧನುಷ್ ಹಾಗೂ ಐಶ್ವರ್ಯಾ ಇಬ್ಬರೂ ಬ್ಯುಸಿ ಇದ್ದ ಕಾರಣ ಮೀಟಿಂಗ್ಗೆ ಬಂದಿಲ್ಲ ಎಂದು ಹೇಳಲಾಗುತ್ತಿದೆ. ಆದರೆ, ರಜನಿ ಬೆಂಗಲಿಗರು ಈ ವಿಷಯವನ್ನು ಒಪ್ಪಿಕೊಂಡಿಲ್ಲ.


Click it and Unblock the Notifications











