ಮಂಗಳಮುಖಿಯರ ಬಗ್ಗೆ ನಟ ಶ್ರೀಮುರಳಿ ಹೇಳಿದ್ದೇನು?
ಮೊದಲನೇ ಪುಟದಿಂದ ಮುಂದುವರಿದ ಭಾಗ.....
*'ರಥಾವರ' ಸಿನಿಮಾ ಶುರುವಾಗುವ ಮುನ್ನ ಮಂಗಳಮುಖಿಯರ ಬಗ್ಗೆ ಶ್ರೀಮುರಳಿಗೆ ಇದ್ದ ಅಭಿಪ್ರಾಯ....
- ನಾನು ಯಾವಾಗಲೂ ಅವರ ಬಗ್ಗೆ ಅಪಾರವಾದ ಗೌರವ ಇಟ್ಕೊಂಡಿದ್ದೆ. ಎಲ್ಲರಿಗೂ ಅವರದ್ದೇ ಆದ ಜೀವನ ಇರುತ್ತೆ. ಅವರ ಸ್ಪೇಸ್ ಅವರಿಗೆ ಬಿಟ್ಟು, ಅದಕ್ಕೆ ಮರ್ಯಾದೆ ಕೊಡ್ಬೇಕು ಅನ್ನೋ ಭಾವನೆ ನನ್ನಲ್ಲಿ ಇತ್ತು. ಅದಕ್ಕೆ ನಾನು ಈ ಸಬ್ಜೆಕ್ಟ್ ನ ನಾನು ಆಯ್ಕೆ ಮಾಡಿಕೊಂಡೆ. ['ಮಂಗಳಮುಖಿ'ಯರ ಬಗ್ಗೆ 'ಭಜರಂಗಿ' ಲೋಕಿ ಉವಾಚ]
* ಮಂಗಳಮುಖಿಯರು ಸಮಾಜದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿರುವವರು. ಆ ಸಮಾಜಕ್ಕೆ ನಿಮ್ಮ ಕಡೆಯಿಂದ ಏನಾದರೂ ಸಪೋರ್ಟ್ ಸಿಗಬಹುದಾ.?
- ನಾನು ಚೇಂಜ್ ಆಗ್ತೀನಿ ಅಂತ ಹೇಳುವುದು ಸುಲಭ. ಆದ್ರೆ ಎಲ್ಲರೂ ಚೇಂಜ್ ಆಗ್ಬೇಕು ಅಂತ ಹೇಳುವಷ್ಟು ದೊಡ್ಡವನು ನಾನಲ್ಲ. We should start thinking right thing at the right place at the right time.

* ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಆಕ್ಟೀವ್ ಆಗಿದ್ದೀರಾ. ಫ್ಯಾನ್ಸ್ ನ ಹೇಗೆ ಮ್ಯಾನೇಜ್ ಮಾಡ್ತೀರಾ?
- It's a new way of reaching people. ಇವಾಗ ಅದು strongest network today to get connected. [ರಥಾವರ ವಿಮರ್ಶೆ: ಉಗ್ರಂ, ಘೋರಂ, ಥರಥರ ಅನುಭವಂ.!]
* ಫ್ಯಾನ್ಸ್ ಜಗಳವಾಡೋದು ಕೂಡ ಅದರಲ್ಲೇ!
- ಅದು ಎಲ್ಲರ ಪರ್ಸನಲ್ ಚಾಯ್ಸ್.!
* ಚಿತ್ರರಂಗ ಒಗಟ್ಟಾಗಿದೆ. ಫ್ಯಾನ್ಸ್ ಕಿತ್ತಾಡಬಾರದು ಅಂತ ಯಶ್ ಕೂಡ ಹೇಳಿಕೆ ನೀಡಿದ್ದರು. ನೀವೇನ್ ಹೇಳ್ತೀರಾ...
- What he said was the good thing. ಯಾಕಂದ್ರೆ ಸಾಮಾನ್ಯವಾಗಿ ಎಲ್ಲರೂ ಅದನ್ನ ಓಪನ್ ಆಗಿ ಹೇಳುವುದಕ್ಕೆ ಆಗಲ್ಲ. ಎಲ್ಲರೂ ಅದನ್ನ ಅರ್ಥ ಮಾಡಿಕೊಂಡು Digest ಮಾಡಿಕೊಳ್ಳಬೇಕು. [ನಟ ಶ್ರೀಮುರಳಿ ಸ್ವಾರ್ಥಿ ಅಲ್ಲ.! ಯಾಕೆ ಗೊತ್ತಾ?]
* ನಿಮ್ಮ ಕಲಾಸೇವೆ ಕನ್ನಡಕ್ಕಷ್ಟೇ ಸೀಮಿತವಾಗಿರುತ್ತಾ?
- ನಾನೊಬ್ಬ ಕಲಾವಿದ. ನನ್ನ ಯಾರೇ ತಬ್ಬಿಕೊಂಡು, ಸ್ವೀಕಾರ ಮಾಡಿದರೂ ನಾನು ಓಡಾಡುತ್ತೇನೆ. ನಾವು ಎಲ್ಲರಿಗೂ ಸೀಮಿತರು.
ಸಂದರ್ಶನ - ಹರ್ಷಿತಾ ರಾಕೇಶ್


Click it and Unblock the Notifications











