Don't Miss!
- Automobiles ರಾಜ್ಯದಲ್ಲಿ ತಯಾರಾಗುವ ಟೊಯೊಟಾ ಇನ್ನೋವಾ ಹೈಕ್ರಾಸ್ಗೆ ಸೆಲೆಬ್ರಿಟಿಗಳು ಫಿಧಾ: ಈ ಕಾರು ಖರೀದಿಸಿದ ನಟಿ
- News Bengaluru Rain: ಸುದೀರ್ಘ ಕಾಯುವಿಕೆ ಅಂತ್ಯ: ಬೆಂಗಳೂರಿಗೆ ಎಂಟ್ರಿ ಕೊಟ್ಟ ಮಳೆ; ವಿಡಿಯೋ ನೋಡಿ
- Lifestyle 5 ನಿಮಿಷದಲ್ಲಿ ಪಾತ್ರೆಯನ್ನು ಹೊಳೆಯುವಂತೆ ಮಾಡಿ..! ಸುಲಭದ ಟಿಪ್ಸ್ ಇಲ್ಲಿದೆ
- Technology oneplus: ಒನ್ಪ್ಲಸ್ನಿಂದ ಫ್ಲ್ಯಾಗ್ಶಿಪ್ ಕ್ಯಾಮೆರಾ ಸೌಲಭ್ಯದೊಂದಿಗೆ ಫ್ಲಿಪ್ ಫೋನ್!
- Sports LSG vs CSK IPL 2024: ಲಕ್ನೋ vs ಚೆನ್ನೈ ಪಂದ್ಯದ ವರದಿ, ಫ್ಯಾಂಟಸಿ ಡ್ರೀಮ್ ಟೀಂ, ಸಂಭಾವ್ಯ ಆಡುವ 11ರ ಬಳಗ
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅನಂತ್ ನಾಗ್ ಬಗ್ಗೆ ಕವಿರಾಜ್ ಏನಂದ್ರು
ಚೊಚ್ಚಲ ಬಾರಿಗೆ ನಿರ್ದೇಶನ ಮಾಡುವಾಗ ಸಾಮಾನ್ಯವಾಗಿ ಎಲ್ಲರಿಗೂ ಇರುವಂತೆ ಕವಿರಾಜ್ ಅವರಿಗೂ ಸಣ್ಣ ಭಯ ಇದ್ದೇ ಇತ್ತು. ಅದರಲ್ಲೂ ಎವರ್ ಗ್ರೀನ್ ನಟ ಅನಂತ್ ನಾಗ್ ಅವರಿಗೆಲ್ಲ ಆಕ್ಷನ್-ಕಟ್ ಹೇಳುವಾಗ ಸ್ವಲ್ಪ ಅಳುಕಿದ್ರಂತೆ.
ಆದರೆ ಅನಂತ್ ಬಾಯ್ತುಂಬ ಹೊಗಳಿದಾಗ ತುಂಬಾ ಖುಷಿಪಟ್ಟ ಕವಿರಾಜ್ ಅವರು ಶೂಟಿಂಗ್ ಸಂದರ್ಭದ ಸಿಹಿ ನೆನಪುಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ. ಕವಿರಾಜ್ ಅವರೊಂದಿಗಿನ ಸಂದರ್ಶನದ ಮುಂದುವರಿದ ಭಾಗ ಇಲ್ಲಿದೆ..
* ಶೂಟಿಂಗ್ ಸಂದರ್ಭದಲ್ಲಿ ಮರೆಯದ ಕ್ಷಣಗಳು ಏನಾದ್ರೂ ಇದ್ಯಾ?
- ಶೂಟಿಂಗ್ ಸಂದರ್ಭದಲ್ಲಿ ಮರೆಯಲಾರದ್ದು, ಅಂದ್ರೆ ಅನಂತ್ ನಾಗ್ ಅಂತವರಿಗೆ ಆಕ್ಷನ್-ಕಟ್ ಹೇಳಿದ್ದು, ಅವರಿಗೆ ಸೀನ್ ಗಳನ್ನು ವಿವರಿಸೋದೆ ಒಂದು ಖುಷಿ. ಸಿನಿಮಾದಲ್ಲಿ ಒಂದು ಡೈಲಾಗ್ ಇದೆ ಅದನ್ನು ಅವರು ತುಂಬಾ ಹೊಗಳ್ತಾ ಇದ್ರು, ಅದಕ್ಕೆ ನಾನು ಅನಂತ್ ಅವರ ಹತ್ರ ಚೆನ್ನಾಗಿದ್ಯಾ ಸಾರ್ ಅಂತ ಕೇಳಿದಾಗ ಚೆನ್ನಾಗಿಲ್ಲದೆ ಯಾರು ಬರೆದಿದ್ದು ಅಂತ ನನ್ನ ಕೆನ್ನೆ ಹಿಂಡಿದ್ರು, ಅದೆಲ್ಲ ನನಗೆ ತುಂಬಾ ಖುಷಿ ಅನಿಸ್ತು.[ಬೆಸ್ಟ್ ಆಫ್ ಸ್ಯಾಂಡಲ್ ವುಡ್ : ನಿಮ್ಮ ಆಯ್ಕೆ ಯಾವುದು?]
ಯಾಕಂದ್ರೆ ಅನಂತ್ ನಾಗ್ ಅವರಂತ ನಟರಿಂದ ಆ ಮಟ್ಟಿನ ಪ್ರಶಂಸೆ ಗಿಟ್ಟಿಸಿಕೊಳ್ಳುವುದು, ಆವಾಗ ನಾನು ಧನ್ಯ ಅಂತ ಅನ್ನಿಸ್ತು. ನನಗೆ ತುಂಬಾ ಟೆನ್ಶನ್ ಇದ್ದಿದ್ದೇ ಅದು ದೊಡ್ಡ ನಟರನ್ನು ಹೇಗಪ್ಪಾ ಮ್ಯಾನೇಜ್ ಮಾಡೋದು ಅಂತ. ಅವರಿಗೆ ತುಂಬಾ ಗೊತ್ತಿರುತ್ತೆ, ಸಿನಿಮಾದ ಬಗ್ಗೆ ತುಂಬಾ ತಿಳ್ಕೊಂಡಿದ್ದಾರೆ. ನಾನು ಬೇರೆ ಹೊಸ ನಿರ್ದೇಶಕ ಅಂತ ಗೊಂದಲ, ಭಯ ಇತ್ತು.[ಕುಂಬಳಕಾಯಿಯತ್ತ, 'ಮದುವೆಯ ಮಮತೆಯ ಕರೆಯೋಲೆ']
* ಎಷ್ಟು ಚಿತ್ರಮಂದಿರದಲ್ಲಿ ಮದುವೆ ನಡೆಯುತ್ತೆ?
- ಮದುವೆ ಛತ್ರದಲ್ಲಿ ಅಲ್ಲ ಚಿತ್ರಮಂದಿರದಲ್ಲಿ ಅಂತ ನಾವು ಈ ಮೊದಲೇ ಹೇಳಿದ್ದೀವಿ. ಇಡೀ ಕರ್ನಾಟಕದಾದ್ಯಂತ 150 ಥಿಯೇಟರ್ ಗಳಲ್ಲಿ ಈ ಮದುವೆ ನಡೆಯುತ್ತೆ. ದಯವಿಟ್ಟು ಎಲ್ಲರೂ ತಪ್ಪದೇ ಬಂದು ನೋಡಬೇಕು. ನಿಮಗೆ ಮನರಂಜನೆಯ ಮೃಷ್ಟನ್ನಾ ಭೋಜನ, ಸುಮಾರು ಎರಡೂವರೆ ಘಂಟೆ ಮನೋರಂಜನೆ ಗ್ಯಾರಂಟಿ, ಮಿಸ್ಸೇ ಇಲ್ಲ. ಜೊತೆಗೆ ಒಂದು ಪುಟ್ಟ ಸಂದೇಶ ಇದೆ ಅದನ್ನು ನಿಮ್ಮ ಜೀವನದಲ್ಲೂ ಅಳವಡಿಸಿಕೊಳ್ಳಿ ನಿಮ್ಮ ಜೀವನ ಮತ್ತಷ್ಟು ಸುಂದರವಾಗುತ್ತೆ.
* ಎಲ್ಲೆಲ್ಲಿ ಶೂಟಿಂಗ್ ಆಗಿದೆ?
- ಹೆಚ್ಚಾಗಿ ಮಾಡಿರೋದು ಬೆಂಗಳೂರಲ್ಲಿ ನಂತರ ಬೆಂಗಳೂರಿನ ಹೊರವಲಯದ ಹಾರವಳ್ಳಿ ಎಂಬ ಮನೆಯಲ್ಲಿ ಶೂಟ್ ಮಾಡಿದ್ದೇವೆ. ಅದು ಬಿಟ್ರೆ ಹಾಡುಗಳಿಗೆ ಅಂತ ಮಲೇಷ್ಯಾ ಹೋಗಿದ್ದೇವೆ, ರಾಮನಗರದಲ್ಲಿ ಕ್ಲೈಮಾಕ್ಸ್, ಜಾಸ್ತಿ ಕರ್ನಾಟಕದಲ್ಲಿ ಚಿತ್ರೀಕರಣ ಆಗಿದೆ.
* 'ಮದುವೆಯ ಮಮತೆಯ ಕರೆಯೋಲೆ'ಯಲ್ಲಿ ಸರಳ ಮದುವೆಯ ಬಗ್ಗೆ ಏನಾದ್ರೂ ಸಂದೇಶ ಇದ್ಯಾ?
-ಸರಳ ಮದುವೆಗೆ ನಾನು ಮಂತ್ರ ಮಾಂಗಲ್ಯದ ಮೂಲಕ ಮದುವೆ ಆಗಿ ಸಂದೇಶ ಕೊಟ್ಟೆ. ಆದ್ರೆ ಸಿನಿಮಾದಲ್ಲಿ ತುಂಬಾ ಆಡಂಭರನೂ ಇಲ್ಲ ತುಂಬಾ ಸರಳವಾಗಿಯೂ ಇಲ್ಲ. ಇಡೀ ಸಿನಿಮಾ ತುಂಬಾ ಮದುವೆ ಇಲ್ಲ ಕ್ಲೈಮ್ಯಾಕ್ಸ್ ನಲ್ಲಿ ನಡೆಯುತ್ತೆ. ಒಟ್ಟು ಮದುವೆಯ ಸುತ್ತ ರಂಗಾಗಿ ನಡೆಯುವ ಕಥೆ. ಇಲ್ಲಿ ತುಂಬಾ ಕಾಮಿಡಿ, ಸ್ವಲ್ಪ ಸೆಂಟಿಮೆಂಟ್ ಇದೆ. ಒಟ್ಟು ಮನೋರಂಜನೆಯ ಮೂಟೆಯೇ ಇದೆ ನೋಡಿ.
ಕವಿರಾಜ್ ಅವರ ಅನುಭವಗಳನ್ನು ಅವರ ಮಾತುಗಳಲ್ಲಿಯೇ ಕೇಳಲು ಈ ವಿಡಿಯೋ ನೋಡಿ..