ಹೊಸ ಪ್ಯಾನ್ ಇಂಡಿಯಾ ಸಿನಿಮಾ 'ಆಕಾಶವಾಣಿ ಮೈಸೂರು ಕೇಂದ್ರ': ಹಾಡು ಸುಮಧುರ!
ಸ್ಯಾಂಡಲ್ವುಡ್ನಲ್ಲಿ ಪ್ಯಾನ್ ಇಂಡಿಯಾ ಸಿನಿಮಾ ಅನ್ನೋದು ಕಾಮನ್ ಆಗಿ ಬಿಟ್ಟಿದೆ. ಸೂಪರ್ಸ್ಟಾರ್ಗಳಿರಲಿ. ಇಲ್ಲವೇ ಹೊಸಬರು ಇರಲಿ ಪ್ಯಾನ್ ಇಂಡಿಯಾ ಸಿನಿಮಾಗೆ ಐ ಹಾಕುತ್ತಿದ್ದಾರೆ. ಹೊಸಬರ ಇಂತಹದ್ದೇ ಒಂದು ಪ್ರಯತ್ನವೇ 'ಆಕಾಶವಾಣಿ ಮೈಸೂರು ಕೇಂದ್ರ'.
ರೇಡಿಯೋ ಕೇಳುವ ಹವ್ಯಾಸ ಇರುವವರಿಗೆ ಈ ಸಿನಿಮಾದ ಟೈಟಲ್ ಸಖತ್ ಇಂಟ್ರೆಸ್ಟಿಂಗ್ ಆಗಿ ಕಾಣಿಸುತ್ತೆ. ರೇಡಿಯೋ ಆಸಕ್ತರು ಎಲ್ಲರೂ ಆಕಾಶವಾಣಿ ಮೈಸೂರು ಕೇಂದ್ರ ಎಂಬ ನಿರೂಪಕರ ಮಾತುಗಳನ್ನು ಕೇಳಿಯೇ ಕೇಳಿರುತ್ತಾರೆ. ಈಗ ಅದೇ ಹೆಸರಿನಲ್ಲಿ ಸಿನಿಮಾ ಆಗಿದೆ ಎಂದಾಗ, ಕುತೂಹಲ ಸಹಜವಾಗಿಯೇ ಮೂಡುತ್ತದೆ.
ಹೊಸಬರ ಪ್ಯಾನ್ ಇಂಡಿಯಾ ಸಿನಿಮಾ
'ಜಬರ್ದಸ್ತ್ ಶೋ' ಖ್ಯಾತಿಯ ಸತೀಶ್ ಬತ್ತುಲ 'ಆಕಾಶವಾಣಿ ಮೈಸೂರು ಕೇಂದ್ರ' ಎಂಬ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಕನ್ನಡ ಸೇರಿದಂತೆ ಮೂರು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಬಹುತೇಕ ಹೊಸ ಪ್ರತಿಭೆಗಳು ಪ್ಯಾನ್ ಇಂಡಿಯಾ ಸಾಹಸಕ್ಕೆ ಕೈ ಹಾಕಿದೆ.

ಇದೇ ಜೋಷ್ ಸಿನಿಮಾತಂಡ ಒಂದು ಸುಂದರವಾದ ಹಾಡನ್ನು ಬಿಡುಗಡೆ ಮಾಡಿದೆ. ಆ ಹಾಡು ಬಗ್ಗೆನೇ ಸಂಗೀತ ಪ್ರಿಯರು ಮಾತಾಡಿಕೊಳ್ಳುತ್ತಿದ್ದಾರೆ. ಮೆಲೋಡಿ ಹಾಡು ಕೇಳಗರ ಕಿವಿಯನ್ನು ಇಂಪಾಗಿಸುತ್ತಿದೆ.
ಲವ್ ಅಂಡ್ ಥ್ರಿಲ್ಲಿಂಗ್ ಸಿನಿಮಾ
'ಆಕಾಶವಾಣಿ ಮೈಸೂರು ಕೇಂದ್ರ' ಸಿನಿಮಾ ಲವ್ ಕಮ್ ಥ್ರಿಲ್ಲರ್ ಸ್ಟೋರಿ ಇರುವ ವಿಭಿನ್ನ ಸಿನಿಮಾ. ಈ ಸಿನಿಮಾ ಕನ್ನಡ ಸೇರಿದಂತೆ ತೆಲುಗು, ತಮಿಳು ಹಾಗೂ ಹಿಂದಿ ಭಾಷೆಗಳಲ್ಲಿ ನಿರ್ಮಾಣವಾಗಿದೆ. ಈಗ ಚಿತ್ರದ ಮೊದಲ ಹಾಡು ರಿಲೀಸ್ ಆಗಿದ್ದು,. ಸದ್ಯದಲ್ಲೇ ಬಿಡುಗಡೆ ಬಿಡುಗಡೆ ಮಾಡುವುದಕ್ಕೆ ಸಜ್ಜಾಗಿ ನಿಂತಿದೆ.

ನಿರ್ದೇಶಕ ಸತೀಶ್ ಕಥೆ ಹೇಳಿದ ಕೇಳಿ ನಿರ್ಮಾಪಕರು ಥ್ರಿಲ್ ಆಗಿದ್ದಾರೆ. ಅಲ್ಲದೆ ಅವರು ಕಥೆ ಹೇಳಿದ ರೀತಿಯಲ್ಲೇ ಸಿನಿಮಾವನ್ನು ಮಾಡಿದ್ದಾರೆ ಎಂಬುದು ನಿರ್ಮಾಪಕರ ಅಭಿಪ್ರಾಯ. ಎಲ್ಲಾ ಭಾಷೆಯವರು ನೋಡಬಹುದಾದ ಯೂನಿವರ್ಸಲ್ ಸಬ್ಜೆಟ್ ಸಿನಿಮಾವಿದು. ಕಲಾವಿದರ ಅಭಿನಯ ಹಾಗೂ ತಂತ್ರಜ್ಞರ ಕೆಲಸ ಅದ್ಭುತವಾಗಿದೆ ಎಂದು ನಿರ್ಮಾಪಕ ಎಂ.ಎಂ.ಅರ್ಜುನ್ ಅಭಿಪ್ರಾಯ ಪಟ್ಟಿದ್ದಾರೆ. ಶಿವಕುಮಾರ್, ಹುಮಯ್ ಚಂದ್, ಅಕ್ಷತ ಶ್ರೀಧರ್ ಹಾಗೂ ಅರ್ಚನಾ ಈ ಚಿತ್ರಡ ನಾಯಕ ಹಾಗೂ ನಾಯಕಿಯರಾಗಿ ನಟಿಸಿದ್ದಾರೆ. ಆರಿಫ್ ಈ ಚಿತ್ರದ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದಾರೆ.


Click it and Unblock the Notifications











