Don't Miss!
- Automobiles Kia Carens: ಗ್ಲೋಬಲ್ ಎನ್ಸಿಎಪಿ ಸುರಕ್ಷತಾ ಪರೀಕ್ಷೆ.. 3-ಸ್ಟಾರ್ ಪಡೆದ ಕಿಯಾ ಕ್ಯಾರೆನ್ಸ್
- Sports IPL 2024: ಮುಂಬೈ ಇಂಡಿಯನ್ಸ್ ವಿರುದ್ಧ ಶತಕ; ರೋಹಿತ್, ಕೊಹ್ಲಿಗೆ ಕ್ರೆಡಿಟ್ ನೀಡಿದ ಯಶಸ್ವಿ ಜೈಸ್ವಾಲ್!
- Technology Itel: ಭಾರತದಲ್ಲಿ ಐಟೆಲ್ S24 ಲಾಂಚ್! 108MP ಕ್ಯಾಮೆರಾ.. ಬೆಲೆ ಇಷ್ಟೇ
- News ದಲಿತರ ಅಭಿವೃದ್ಧಿಯನ್ನು ಬಿಜೆಪಿ ಮಾಡಿಲ್ಲ; ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಸಂಯುಕ್ತ ಪಾಟೀಲ್
- Lifestyle ಪ್ರವಾಹಕ್ಕೆ ಕಾರಣವಾಗೋದು ಮಳೆಯಲ್ಲ ಬೇಸಿಗೆಯ ಬಿಸಿಲು..! ನಂಬಲು ಸಾಧ್ಯವಿಲ್ಲ ಅಂದ್ರೆ ಈ ವಿಡಿಯೋ ನೋಡಿ..!
- Finance ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 10 ಹಳದಿ ಅನಕೊಂಡ ಸಹಿತ ವ್ಯಕ್ತಿ ಬಂಧನ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕರಿಬಸವಯ್ಯ ಕಾರು ಆಕ್ಸಿಡೆಂಟ್; ಡಿಂಗ್ರಿ ಹೇಳಿದ ಸತ್ಯ
ಡಿಕ್ಕಿ ಹೊಡೆದ ರಭಸಕ್ಕೆ ಕಾರು ಆಕ್ಷನ್ ಫಿಲಂನಲ್ಲಿ ತೋರಿಸುವಂತೆ ಉರುಳಿಕೊಂಡು ಹೋಗಿ ಕೆಳಗೆ ಬಿದ್ದಿದೆ. ಬಳಿಕ 5 ಗಂಟೆ ಸಮಯದಲ್ಲಿ ಅದೇ ರಸ್ತೆಯಲ್ಲಿ ಹೋಗುತ್ತಿದ್ದ ವ್ಯಾಪಾರಿ ಹುಡುಗರು ಕೆಳಗೆ ಬಿದ್ದಿದ್ದ ಕಾರಿನ ಇಂಡಿಕೇಟರ್ ಮಿಣಮಿಣ ಎನ್ನುತ್ತಿರುವುದನ್ನು ನೋಡಿದ್ದಾರೆ. ಯಾವುದೋ ಕಾರು ಕೆಳಗೆ ಬಿದ್ದಿದೆ ಬನ್ರೋ ಎಂದು ಹೋಗಿ ನೋಡಿದ್ದಾರೆ.
ಕರಿಬಸವಯ್ಯನದೇ ಮೊಬೈಲನ್ನು ತೆಗೆದುಕೊಂಡು ಅವರು ಕೊನೆಯದಾಗಿ ಮಾಡಿದ್ದ ಕರೆಗೆ ಫೋನು ಮಾಡಿದ್ದಾರೆ (ಕೆಬಿ ಕೊನೆಯದಾಗಿ ಅವರ ಪತ್ನಿಗೆ ಫೋನು ಮಾಡಿದ್ದರು). ಇಂತಹ ಕಡೆ ಕಾರು ಅಪಘಾತವಾಗಿದೆ. ಕಾರಿನಲ್ಲಿರುವ ವ್ಯಕ್ತಿ ಏನಾಗಿದ್ದಾನೋ ಗೊತ್ತಿಲ್ಲ. ದಯವಿಟ್ಟು ಬನ್ನಿ ಎಂದು ಎಲ್ಲ ವಿವರಗಳನ್ನೂ ಹೇಳಿದ್ದಾನೆ. ಕಾರು ಉರುಳಿಬಿದ್ದ ರಭಸಕ್ಕೆ ಕೆಬಿ ತಲೆ ಎರಡು ಸೀಟುಗಳ ನಡುವೆ ಸಿಕ್ಕಿಹಾಕಿಕೊಂಡಿತ್ತಂತೆ.
ಬಳಿಕ ಕರೆ ಮಾಡಿದ ಹುಡುಗ ಮೊಬೈಲ್ ಫೋನ್ನಿಂದ ಸಿಮ್ ತೆಗೆದು ಬಿಸಾಕಿ. ಮೊಬೈಲ್ ಸಮೇತ ಪರಾರಿಯಾಗಿದ್ದಾನೆ. ಬಳಿಕ ಅದೇ ರಸ್ತೆಯಲ್ಲಿ 6 ಗಂಟೆ ಸುಮಾರಿಗೆ ಬೆಳಗ್ಗೆ ಅವರನ್ನು 5 ಗಂಟೆಗೆ ಹೋಗಿ ಎಂದು ತಡೆದಿದ್ದ ವ್ಯಕ್ತಿ ಬಂದಿದ್ದಾರೆ. ಕಾರನ್ನು ನೋಡಿದವರೆ ಅಯ್ಯೋ ನಮ್ಮ ಕರಿಬಸವಣ್ಣನದಲ್ವೇ ಎಂದು ಹೋಗಿ ನೋಡಿದ್ದಾನೆ. ಪರಿಸ್ಥಿತಿ ಗೊತ್ತಾಗಿದೆ. ಅಲ್ಲೇ ಯಾವುದೋ ಸ್ಕಾರ್ಫಿಯೋ ಕಾರು ಹಿಡಿದು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾನೆ. ಮುಂದಿನದೆಲ್ಲಾ ನಿಮಗೆ ಗೊತ್ತೇ ಇದೆ. ಐದಾರು ತಿಂಗಳಲ್ಲಿ ಅವನು ಚೇತರಿಸಿಕೊಳ್ಳುತ್ತಾನೆ ಎಂದುಕೊಂಡಿದ್ದೆವು. ಆದರೆ ಹೀಗಾಗುತ್ತದೆ ಎಂದು ಊಹಿಸಿರಲಿಲ್ಲ ಎಂದು ಡಿಂಗ್ರಿ ಮೌನಕ್ಕೆ ಶರಣಾದರು.