ಮುತ್ತತ್ತಿಯಲ್ಲಿ ನಟಿ ಪ್ರಿಯಾಮಣಿ ಕಾರು ಅಪಘಾತ
ಕನ್ನಡ ಚಿತ್ರರಂಗದ ಸಿನಿಮಾ ತಾರೆ ಪ್ರಿಯಾಮಣಿಗ ಕಾರು ಅಪಘಾತಕ್ಕೀಡಾಗಿದ್ದು ಅವರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಂಗಳೂರಿನಿಂದ 90 ಕಿ.ಮೀ ದೂರದಲ್ಲಿರುವ ಮುತ್ತತ್ತಿಯಲ್ಲಿ ಈ ಅಪಘಾತ ಸಂಭವಿಸಿದೆ.
'ಅಣ್ಣಾ ಬಾಂಡ್' ಚಿತ್ರೀಕರಣಕ್ಕಾಗಿ ಪ್ರಿಯಾಮಣಿ ಹಾಗೂ ಚಿತ್ರತಂಡ ಕಾರಿನಲ್ಲಿ ಪ್ರಯಾಣಿಸುತ್ತಿರಬೇಕಾದರೆ ಈ ಅಪಘಾತ ಸಂಭವಿಸಿದೆ. ಆದರೆ ಕಾರಿನಲ್ಲಿ ಪ್ರಯಾಣಿಸುತ್ತ್ತಿದ್ದ ಯಾರೊಬ್ಬರಿಗೂ ಅಪಾಯವಾಗಿಲ್ಲ. ಅದೃಷ್ಟವಶಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
'ಅಣ್ಣಾ ಬಾಂಡ್' ಚಿತ್ರೀಕರಣಕ್ಕಾಗಿ ಮುತ್ತತ್ತಿಯ ದುರ್ಗಮ ಕಾಡನ್ನು ಆಯ್ಕೆ ಮಾಡಲಾಗಿತ್ತು. ಚಿತ್ರೀಕರಣ ಪ್ರದೇಶಕ್ಕೆ ಚಿತ್ರತಂಡದೊಂದಿಗೆ ಅವರು ಹೋಗುತ್ತಿರಬೇಕಾದರೆ ಈ ಅಪಘಾತ ಸಂಭವಿಸಿದೆ. ಈ ಅಪಘಾತ ಶನಿವಾರ (ಡಿ.3) ಬೆಳಗ್ಗೆ ಸಂಭವಿಸಿದ್ದರೂ ತಡವಾಗಿ ಬೆಳಕಿಗೆ ಬಂದಿದೆ.
ಪ್ರಿಯಾಮಣಿ ಅವರು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜೊತೆ ಅಭಿನಯಿಸುತ್ತಿರುವುದು ಗೊತ್ತೇ ಇದೆ. ಈ ಚಿತ್ರದ ಮತ್ತೊಬ್ಬ ನಾಯಕಿಯಾಗಿ ನಿಧಿ ಸುಬ್ಬಯ್ಯ ಕೂಡ ಅಭಿನಯಿಸಿದ್ದಾರೆ. ಪ್ರಿಯಾಮಣಿ ಅಭಿನಯದ ಮತ್ತೊಂದು ಕನ್ನಡ ಚಿತ್ರ 'ವಿಷ್ಣುವರ್ಧನ' ಈ ವಾರ ತೆರೆಕಾಣುತ್ತಿದೆ. (ಏಜೆನ್ಸೀಸ್)


Click it and Unblock the Notifications











