twitter
    For Quick Alerts
    ALLOW NOTIFICATIONS  
    For Daily Alerts

    ಮಾವ ಬಂಗಾರಪ್ಪ ನಿಧನಕ್ಕೆ ಕಣ್ಣೀರಿಟ್ಟ ಶಿವಣ್ಣ

    |

    Shivaraj Kumar
    ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪ ನಿಧನಕ್ಕೆ ಹ್ಯಾಟ್ರಿಕ್ ಹೀರೋ ಮತ್ತು ಅವರ ಅಳಿಯ ಶಿವರಾಜ್ ಕುಮಾರ್ ಕಂಬನಿ ಮಿಡಿದಿದ್ದಾರೆ. ಬಂಗಾರಪ್ಪ ನಿಧನದ ವಾರ್ತೆ ಕೇಳಿ ಮಲ್ಯ ಆಸ್ಪತ್ರೆಗೆ ಮಧ್ಯರಾತ್ರಿಯೇ ದೌಡಾಯಿಸಿದ ಶಿವಣ್ಣ ಹೆಣ್ಣು ಕೊಟ್ಟ ಮಾವನಿಗೆ ಅಂತಿಮ ನಮನ ಸಲ್ಲಿಸಿದ್ದಾರೆ.

    ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಶಿವಣ್ಣ ' ನನ್ನ ಮಾವ ಬಂಗಾರಪ್ಪ ಅವರ ಬಡವರ ಪರ ಕಾಳಜಿ ಮತ್ತು ಅಗಾಧ ಜ್ಞಾಪಕ ಶಕ್ತಿ ಎಲ್ಲರಿಗೂ ಮಾದರಿಯಾಗಲಿ' ಎಂದು ಹೇಳಿಕೆ ನೀಡಿದ್ದಾರೆ.

    ಈ ಸಂದರ್ಭದಲ್ಲಿ ಹೇಳಿಕೆ ನೀಡುತ್ತಾ ಭಾವೋದ್ವೇಗಕ್ಕೆ ಒಳಗಾದ ಶಿವಣ್ಣ, ಬಂಗಾರಪ್ಪ ಒಬ್ಬ ಶಿಸ್ತಿನ ಮನುಷ್ಯ. ಅವರು ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಮಧು ಬಂಗಾರಪ್ಪ ಅವರನ್ನು ತುಂಬಾ ಪ್ರೀತಿಯಿಂದ ನೋಡಿಕೊಂಡಿದ್ದಾರೆ. ಅವರೆಲ್ಲರಿಗೂ ದೇವರು ದುಃಖ ತಡೆದು ಕೊಳ್ಳುವ ಶಕ್ತಿ ನೀಡಲಿ ಎಂದು ಹೇಳಿದ್ದಾರೆ.

    English summary
    Kannada film actor, son-in-law Shivaraj Kumar condoles Karnataka ex-CM S Bangarappa. Bangarappa passed away in Bangalore on 26 Dec 2011
    Monday, December 26, 2011, 9:31
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X