Don't Miss!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಡಿಸ್ಚಾರ್ಜ್ ಆದ ಬಳಿಕ ದರ್ಶನ್ ಮೊದಲ ಪ್ರತಿಕ್ರಿಯೆ
ನಟ ದರ್ಶನ್ ಮೈಸೂರಿನ ಕೊಲಂಬಿಯ ಏಷ್ಯಾ ಆಸ್ಪತ್ರೆಯಿಂದ ಇಂದು ಡಿಸ್ಜಾರ್ಜ್ ಆಗಿದ್ದಾರೆ. ಆಸ್ಪತ್ರೆಯಿಂದ ಹೊರ ಬಂದ ದರ್ಶನ್ ಘಟನೆಯ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
''ಕಾರಿನಲ್ಲಿ ಆರು ಜನ ಇದ್ದರು ಎಂದು ಸುದ್ದಿ ಬಂತು. ಆದರೆ, ಅದೆಲ್ಲ ಸುಳ್ಳು. ನನ್ನ ಕಾರಿನಲ್ಲಿ ಇರುವುದು 5 ಸೀಟ್. ಅದಕ್ಕೂ ಹೆಚ್ಚು ಜನರನ್ನು ನಾನು ಎಂದು ಕೂರಿಸುವುದಿಲ್ಲ. ತಿರುವಿನಲ್ಲಿ ಕಾರು ಇರುವುದು ಬೇಡ ಎಂದು ಬೇರೆ ಕಡೆ ತೆಗೆದುಕೊಂಡು ಹೋಗಿದ್ದರು. ಈ ಘಟನೆಯ ಬಗ್ಗೆ ಮತ್ತೆ ಸಂಪೂರ್ಣವಾಗಿ ಮಾತನಾಡುತ್ತೇನೆ'' ಎಂದಿದ್ದಾರೆ ದರ್ಶನ್.
6 ದಿನಗಳ ಚಿಕಿತ್ಸೆ ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ದರ್ಶನ್
ತಮ್ಮ ಆರೋಗ್ಯದ ಬಗ್ಗೆ ಸ್ಪಷ್ಟನೆ ನೀಡಿದ ಅವರು ''ನನ್ನನ್ನು ಚೆನ್ನಾಗಿ ನೋಡಿಕೊಂಡ ಡಾಕ್ಟರ್ ಗಳಿಗೆ ಧನ್ಯವಾದ. ಒಂದು ತಿಂಗಳು ವಿಶ್ರಾಂತಿ ಹೇಳಿದ್ದಾರೆ. ಅದರಲ್ಲಿ ಚಿತ್ರದ ಡಬ್ಬಿಂಗ್ ಕೆಲಸಗಳನ್ನು ಮುಗಿಸುತ್ತೇನೆ.'' ಎಂದು ತಿಳಿಸಿದ್ದಾರೆ.
ಉಳಿದಂತೆ, ದರ್ಶನ್ ಗೆ ಚಿಕಿತ್ಸೆ ನೀಡಿದ ಡಾಕ್ಟರ್ ''ದರ್ಶನ್ ಈಗ ಚೆನ್ನಾಗಿದ್ದಾರೆ. ಅವರು ರಿಯಲ್ ಲೈಫ್ ಹೀರೋ. ತುಂಬ ಬೇಗ ಅವರು ಗುಣಮುಖರಾದರು. ಕೈನ ಒಂದು ಜಾಗದಲ್ಲಿ ಮೂಳೆ ಮುರಿದಿದೆ. ಅದಕ್ಕೆ ಸರಿಯಾದ ಚಿಕಿತ್ಸೆ ನೀಡಿ ಆಗಿದೆ.'' ಎಂದು ಹೇಳಿದ್ದಾರೆ.
ಘಟನೆಯ
ಹಿನ್ನಲೆ
:
ಕಳೆದ
ಸೋಮವಾರ
ದರ್ಶನ್,
ದೇವರಾಜ್,
ಪ್ರಜ್ವಲ್
ದೇವರಾಜ್,
ರಾಯ್
ಆಂಟೋನಿ
ಕಾರಿನಲ್ಲಿ
ಪ್ರಯಾಣ
ಮಾಡುವ
ವೇಳೆ
ಅಪಘಾತಕ್ಕಿಡಾಗಿದ್ದರು.
ಮೈಸೂರಿನ
ಹೊರ
ವಲಯದ
ಹಿನಕಲ್
ಬಳಿಯ
ರಿಂಗ್
ರಸ್ತೆ
ಯಲ್ಲಿ
ಬೆಳಗಿನ
ಜಾವ
3
ಗಂಟೆ
ಸುಮಾರಿಗೆ
ಈ
ಘಟನೆ
ನಡೆದಿತ್ತು.