"ನಾನು ಮಾಡಿದ್ದರ ಬಗ್ಗೆ ನನಗೆ ಹೆಮ್ಮೆಯಿಲ್ಲ.. 2 ವರ್ಷ ಆಯ್ತು ಹೊರಗೆ ಬಂದಿಲ್ಲ"; ಕಣ್ಣೀರಿಟ್ಟ ನಟಿ ಕೃಷಿ ತಾಪಂಡ
ಕೊಡಗಿನ ಕನ್ನಡದ ನಟಿ ಕೃಷಿ ತಾಪಂಡ ಕಳೆದ ಕೆಲವು ದಿನಗಳಿಂದ ವಿವಾದದಲ್ಲಿ ಸಿಲುಕಿದ್ದಾರೆ. ಉದ್ಯಮಿಯೊಂದಿಗೆ ಲಿವ್-ಇನ್ ರಿಲೇಷನ್ಶಿಪ್ ಅವರಿಗೆ ದೊಡ್ಡ ಕಂಟಕವಾಗಿತ್ತು. ಅದರಲ್ಲೂ ಉದ್ಯಮಿ ಹಾಗೂ ಮಾಜಿ ಬಾಯ್ಫ್ರೆಂಡ್ ವಿರುದ್ಧ ದೂರು ನೀಡಿದ ಬಳಿಕ ಈ ಸಮಸ್ಯೆ ಲೋಕಕ್ಕೆ ಜಾಹೀರಾಯ್ತು. ಇಲ್ಲಿಂದ ಕೃಷಿ ತಾಪಂಡ ವಿವಾದದ ಸುಳಿಯಿಂದ ಹೊರ ಬರುವುದಕ್ಕೆ ಶತ ಪ್ರಯತ್ನ ನಡೆಸುತ್ತಲೇ ಇದ್ದಾರೆ.
ಕೃಷಿ ತಾಪಂಡ ಈ ವಿವಾದದಲ್ಲಿ ಸಿಕ್ಕಿಕೊಂಡಾಗ ಪ್ರತಿಕ್ರಿಯೆ ನೀಡಿರಲಿಲ್ಲ. ಎಲ್ಲೂ ಕಾಣಿಸಿಕೊಂಡೂ ಇರಲಿಲ್ಲ. ಆದ್ರೀಗ ರಾಜೇಶ್ ಗೌಡ ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಉದ್ಯಮಿಯೊಂದಿಗಿನ ಸಂಬಂಧದ ಬಗ್ಗೆ, ಅವರಿಂದ ಅನುಭವಿಸಿದ ಕಷ್ಟಗಳ ಬಗ್ಗೆ, ನೋವು-ಯಾತನೆ ಬಗ್ಗೆ ರಿವೀಲ್ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ತನ್ನ ಸುತ್ತ ಸುತ್ತುಕೊಂಡಿರುವ ವಿವಾದದ ಘಟನೆಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.

"ಜನರಿಗೆ ಮೀಡಿಯಾಗೆ ಗೊತ್ತಿರೋ ಹಾಗೆ ಇದು 2026ನಲ್ಲಿ ಆಗಿದ್ದು, ಆದರೆ, ಇದು ಶುರುವಾಗಿದ್ದು 2024ರಲ್ಲಿ. ಎರಡು ವರ್ಷದಿಂದ ನಾನು ಇದನ್ನು ಅನುಭವಿಸುತ್ತಿದ್ದೇನೆ. ಯಾವುದೇ ಕಾರಣಕ್ಕೂ ಇದು ಹೊರ ಬರಬಾರದು ಅಂತ ನಾನು ಟ್ರೈ ಮಾಡುತ್ತಿದ್ದೆ. ಆದರೆ, ಅದು ಆಗುತ್ತಿರಲಿಲ್ಲ. ಆಗ ನನಗೆ ಇದರಿಂದ ನಾನು ಆಚೆ ಬರುವುದಕ್ಕೆ ಆಗುವುದಿಲ್ಲ ಅನಿಸಿತ್ತು."
"ನಾನು ಏನು ಮಾಡಿದ್ದೇನೆ ಅದರ ಬಗ್ಗೆ ನನಗೆ ಹೆಮ್ಮೆಯಿಲ್ಲ. 2026ರಲ್ಲಿ ಏನೆಲ್ಲ ಆಯ್ತಲ್ಲ. ಅದನ್ನು ತಡೆ ಹಿಡಿಯುವುದಕ್ಕೆ ನಾನು ಆ ಸ್ಟೆಪ್ ಅನ್ನು ತೆಗೆದುಕೊಂಡೆ. ನನಗೆ ಇದೆಲ್ಲ ಆಗುವುದು ಬೇಡವಾಗಿತ್ತು. ನನಗೆ ಈ ಅವಮಾನ ಎಲ್ಲಾ ಆಯ್ತಲ್ಲ. ಅದೆಲ್ಲ ಆಗುವುದು ನನಗೆ ಬೇಕಾಗಿರಲಿಲ್ಲ. ಅದನ್ನೆಲ್ಲ ತಡೆಯುವುದಕ್ಕೆ ನಾನು ಹೋಗಿಬಿಟ್ಟರೆ, ತೊಂದರೆನೇ ಇರಲ್ವಲ್ಲ. ನನಗೆ ದೌರ್ಜನ್ಯ ಆಗುತ್ತಿತ್ತು. ಅದಕ್ಕೆ ನಾನು ಹೋಗಿ ದೂರು ಕೊಟ್ಟೆ. ಯಾರಿಗೂ ತೊಂದರೆ ಕೊಡಬೇಕು ಅಂತಲ್ಲ. ನಾನು ದೂರು ಕೊಟ್ಟೆ ಅಷ್ಟೆ. ನನ್ನ ಪಾಡಿಗೆ ನಾನು ಇದ್ದೆ. ನನ್ನ ಜೀವನ ನೋಡಿಕೊಳ್ಳುತ್ತಿದ್ದೆ. ಎರಡು ವರ್ಷ ಆಯ್ತು. ನಾನು ಎಲ್ಲೂ ಹೊರಗೆ ಬಂದಿಲ್ಲ.


Click it and Unblock the Notifications