ನಾನು ಆರಾಮಾಗಿದ್ದೇನೆ ನಿಮ್ಮ ಕಾಳಜಿಗೆ ಧನ್ಯವಾದ ಎಂದ ಅಪ್ಪು
Recommended Video

Natasaarvabhowma Kannada movie : ಅದೃಷ್ಟವಶಾತ್ ಅಪಾಯದಿಂದ ಪಾರಾದ ಅಪ್ಪು..! | Filmibeat Kannada
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕಾರು ನೆನ್ನೆ ಅಪಘಾತಕ್ಕೊಳಗಾಗಿದೆ. ಬಳ್ಳಾರಿಯಲ್ಲಿ ನಟ ಸಾರ್ವಭೌಮ ಸಿನಿಮಾದ ಚಿತ್ರೀಕರಣ ಮುಗಿಸಿ ಬೆಂಗಳೂರಿಗೆ ಮರಳುತ್ತಿದ್ದ ಸಮಯದಲ್ಲಿ ಈ ದುರಂತ ಸಂಭವಿಸಿದೆ.
ಅಪ್ಪು ಪ್ರಯಾಣ ಮಾಡುತ್ತಿದ್ದ ಕಾರಿನ ಟೈರ್ ಬರ್ಸ್ಟ್ ಆದ ಕಾರಣ ಚಾಲಕನ ನಿಯಂತ್ರಣ ತಪ್ಪಿದೆ. ಆದರೆ ಅದೃಷ್ಟವಶಾತ್ ಯಾವುದೇ ದುರಂತ ಸಂಭವಿಸಿಲ್ಲ. ಪುನೀತ್ ರಾಜ್ ಕುಮಾರ್ ಪ್ರಯಾಣ ಮಾಡುತ್ತಿದ್ದ ಕಾರು ಅಪಘಾತವಾಗಿದೆ ಎಂದು ತಿಳಿದ ತಕ್ಷಣ ಅಭಿಮಾನಿಗಳು ಗಾಬರಿಯಾಗಿದ್ದರು.

ಅಭಿಮಾನಿಗಳಿಗಾಗಿ ನಿನ್ನೆ ರಾತ್ರಿಯೇ ನಟ ಪುನೀತ್ ರಾಜ್ ಕುಮಾರ್ ತಮ್ಮ ಫೇಸ್ ಬುಕ್, ಟ್ವಿಟ್ಟರ್ ಹಾಗೂ ಇನ್ಸ್ಟಾ ಗ್ರಾಂ ಮೂಲಕ ನಾನು ಆರಾಮಾಗಿದ್ದೇನೆ. ಚಿಂತೆ ಬೇಡ ನಿಮ್ಮ ಕಾಳಜಿದೆ ಧನ್ಯವಾದ ಎಂದಿದ್ದಾರೆ.

ಸಾಮಾನ್ಯವಾಗಿ ಕಲಾವಿದರ ಕಾರು ಅಪಘಾತಕ್ಕೊಳಗಾಗಿದೆ ಎಂದು ಸುದ್ದಿ ಆದರೆ ಸಾಕು ಸುಳ್ಳು ವದಂತಿಗಳು ಹಬ್ಬುತ್ತದೆ ಸದ್ಯ ಪುನೀತ್ ಅವರೇ ನಾನು ಕ್ಷೇಮವಾಗಿದ್ದೇನೆ ಎಂದು ತಿಳಿಸಿರುವುದು ಯಾವುದೇ ಸುಳ್ಳು ಸುದ್ದಿ ಹರಡಿಲ್ಲ.
More from Filmibeat
English summary
Kannada actor Puneeth Rajkumar's car met with an accident at Ananthapura, Andra Pradesh. after accident Puneet Raj Kumar has said that fans through FaceBook "Aaaramagi iddini not to worry, thank you for all your concerns"


Click it and Unblock the Notifications











