ಅಗಲಿದ ನಟನಿಗೆ ಸಂತಾಪ ಸೂಚಿಸಿದ ಮಹೇಶ್ ಬಾಬು, ಅಲ್ಲು ಅರ್ಜುನ್
ಟಾಲಿವುಡ್ ನಟ ಹರಿಕೃಷ್ಣ ರಸ್ತೆ ಅಪಘಾತದಲ್ಲಿ ಮೃತ ಪಟ್ಟಿದ್ದಾರೆ. ಅವರ ಅಭಿಮಾನಿಗಳು ಹಾಗೂ ಇಡೀ ತೆಲುಗು ಚಿತ್ರರಂಗ ಅವರ ಅಗಲಿಕೆಗೆ ಕಣ್ಣೀರು ಹಾಕಿದೆ. ಸಿನಿಮಾರಂಗದ ಪ್ರಮುಖ ನಟರು ಅವರಿಗೆ ಸಂತಾಪ ಸೂಚಿಸಿದ್ದಾರೆ.
ನಟ ಅಲ್ಲು ಅರ್ಜುನ್ ''ನಾನು ವಿದೇಶದಲ್ಲಿ ಇದ್ದೇನೆ. ಈ ಸುದ್ದಿಯನ್ನು ಕೇಳಿ ನನಗೆ ಆಘಾತವಾಗಿದೆ. ಇಡೀ ನಂದಮೂರಿ ಕುಟುಂಬಕ್ಕೆ ಮತ್ತು ಅವರ ಆಪ್ತರಿಗೆ ನಮ್ಮ ಸಂತಾಪಗಳು. ಅವರ ಆತ್ಮಕ್ಕೆ ಶಾಂತಿ ಸಿಗಲಿ'' ಎಂದು ಟ್ವೀಟ್ ಮಾಡಿದ್ದಾರೆ.
ನಟ ಮಹೇಶ್ ಬಾಬು ಹರಿಕೃಷ್ಣ ಅವರ ಅಕಾಲಕ ಮರಣದ ಸುದ್ದಿ ಕೇಳಿ ಬಹಳ ದುಖಃವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಈ ಸಂದರ್ಭದಲ್ಲಿ ಅವರ ಕುಟುಂಬಕ್ಕೆ ದುಖಃವನ್ನು ಅರಗಿಸಿಕೊಳ್ಳುವ ಶಕ್ತಿ ದೇವರು ನೀಡಲಿ ಎಂದು ದುಖಃ ಹಂಚಿಕೊಂಡಿದ್ದಾರೆ.

ಅಭಿಮಾನಿಯ ಮದುವೆಯಲ್ಲಿ ಭಾಗವಹಿಸಲು ಇಂದು ಬೆಳಗಿನ ಜಾವ 4.30ರ ಸಮಯದಲ್ಲಿ ಹರಿಕೃಷ್ಣ ಅವರು ಮನೆಯಿಂದ ಹೊರಟಿದ್ದರು. ನೆಲ್ಲೂರು ಜಿಲ್ಲೆಯ ಕಾವಲಿಗೆ ತೆರಳುತ್ತಿದ್ದಾಗ ತೆಲಂಗಾಣದ ನಲ್ಗೊಂಡ ಬಳಿಯ ಅನ್ನೆಪರ್ತಿಯಲ್ಲಿ ಈ ಅಪಘಾತ ಸಂಭವಿಸಿದೆ. ನಸುಕಿನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
More from Filmibeat
English summary
Actor Allu Arjun and Mahesh Babu tweets about Nandamuri Harikrishna death. Popular tollywood actor and politician NT Ramarao's son Nandamuri Harikrishna died in an accident on Wednesday near Nalginda, Telangana.
allu arjun mahesh babu ntr accident telugu cinema tollywood death ಎನ್ಟಿಆರ್ ಮಹೇಶ್ ಬಾಬು ಅಲ್ಲು ಅರ್ಜುನ್ ಅಪಘಾತ ತೆಲುಗು ಸಿನಿಮಾ ನಿಧನ ಟಾಲಿವುಡ್


Click it and Unblock the Notifications











