Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಚಂದನ್ ನಿರೂಪಣೆಗೆ ಅನುಶ್ರೀ ಕೂಡ ಅಭಿಮಾನಿ ಆಗಿದ್ರು!
ಅಚ್ಚ ಕನ್ನಡದ ನಿರೂಪಕ ಚಂದನ್ ಸಾವು ಸಾಕಷ್ಟು ಜನರಿಗೆ ನೋವು ತಂದಿದೆ. ಅದ್ಬುತವಾದ ಕಲೆಯನ್ನು ಹೊಂದಿದ್ದ ಚಂದನ್ ಅವರನ್ನು ಕಳೆದುಕೊಳ್ಳು ಯಾರು ಕೂಡ ತಯಾರಿರಲಿಲ್ಲ. ಬೆಳ್ಳಂಬೆಳಗ್ಗೆ ಸಾವಿನ ಸುದ್ದಿ ಕೇಳಿದವರ ಮನಸ್ಸಿಗೆ ನೋವು ಉಂಟಾಗಿದೆ.
ಚಂದನ್ ನಿರೂಪಣೆ ನೋಡಿ ಅವರ ಕನ್ನಡ ಉಚ್ಛಾರವನ್ನು ಕಂಡು ಸಾಕಷ್ಟು ಜನರು ನಿಬ್ಬೆರಗಾಗಿದ್ದರು. ಎಷ್ಟು ಸುಲಲಿತವಾಗಿ ಕನ್ನಡ ಮಾತನಾಡುತ್ತಾರೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದ್ದರು.
ಸ್ಟಾರ್ ಆಂಕರ್ ಚಂದನ್ ನಿಧನ : ಅಣ್ಣಾವ್ರ ಅಭಿಮಾನಿಯ ಕಥೆ-ವ್ಯಥೆ
ಸದ್ಯ ಕಿರುತೆರೆಯಲ್ಲಿ ಸ್ಟಾರ್ ಆಂಕರ್ ಆಗಿ ಗುರುತಿಸಿಕೊಂಡಿರುವ ಅನುಶ್ರೀ ಕೂಡ ಚಂದನ್ ಅವರ ಸಾವಿಗೆ ಬೇಸರ ವ್ಯಕ್ತ ಪಡಿಸಿದ್ದಾರೆ. ತಮ್ಮ ಫೇಸ್ ಬುಕ್ ಮೂಲಕ ಸಂತಾಪ ಸೂಚಿಸಿದ್ದಾರೆ. "ಕನ್ನಡದ ಕಂಪು ಇವರ ಕಂಠದಿಂದ ಬರುವ ಪದಗಳಲ್ಲಿ ಇತ್ತು. ಕನ್ನಡ ಕಿರುತೆರೆ ಕಂಡಂತ ಅಚ್ಚ ಕನ್ನಡ ನಿರೂಪಕರಲ್ಲಿ ಇವರು ಉನ್ನತ ಸ್ಥಾನದಲ್ಲಿದ್ದರು.. ನಾನು ಕೂಡ ಇವರ ಅಭಿಮಾನಿ.. ಅದನೊಮ್ಮೆ ಅವರಿಗೆ ಹೇಳಿದ್ದೆ ಕೂಡ..ಮತ್ತೆ ನಾ ಹೇಳಲು.. ಅವರು ಕೇಳಲು ಇಲ್ಲ.. ಅವರ ಕುಟುಂಬಕ್ಕೆ ಆ ದೇವರು ಶಕ್ತಿ ನೀಡಲಿ.. ಚಂದನ್ ಆತ್ಮಕ್ಕೆ ಶಾಂತಿ ಸಿಗಲಿ. ಎಂದು ಬರೆದಿದ್ದಾರೆ.
ಅನುಶ್ರೀ ಮಾತ್ರವಲ್ಲ ಇಡೀ ಕರ್ನಾಟಕದಾದ್ಯಂತ ನೆಲಸಿರುವ ಕನ್ನಡಿಗರು ಚಂದನ್ ಅವರನ್ನ ಕನ್ನಡದ ಹೆಮ್ಮೆಯ ಕುವರ ಎಂದೇ ಕರೆಯುತ್ತಿತ್ತು. ಅಷ್ಟರ ಮಟ್ಟಿಗೆ ಅವರ ತಮ್ಮ ನಿರೂಪಣೆಯಿಂದ ಎಲ್ಲರನ್ನೂ ಸೆಳೆದು ಬಿಟ್ಟಿದ್ದರು.