Don't Miss!
- News Toilet Photo Viral: ಕಡಿಮೆ ಖರ್ಚಿನಲ್ಲಿ 'ಲೀಕೆಜ್ ಟ್ಯಾಂಕರ್'ನಿಂದ ಟಾಯ್ಲೆಟ್ ನಿರ್ಮಾಣ: ನೀವೂ ಟ್ರೈ ಮಾಡಿ
- Sports IPL 2024: ಹೈದರಾಬಾದ್-ಡೆಲ್ಲಿ ನಡುವೆ ಮೆಗಾ ಫೈಟ್; ಟಾಸ್, ಆಡುವ 11ರ ಬಳಗದ ವರದಿ
- Automobiles ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅರ್ಜುನ್ ಸರ್ಜಾ 150ನೇ ಸಿನಿಮಾ ಆಡಿಯೋ ರಿಲೀಸ್
ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಅಭಿನಯದ 150 ನೇ ಸಿನಿಮಾ 'ವಿಸ್ಮಯ' ಚಿತ್ರತಂಡ ಕೆಲ ದಿನಗಳ ಹಿಂದಷ್ಟೆ ಟೀಸರ್ ಬಿಡುಗಡೆ ಮಾಡಿ ಪ್ರೇಕ್ಷಕರಲ್ಲಿ ಚಿತ್ರದ ಬಗ್ಗೆ ಕುತೂಹಲ ಮೂಡಿಸಿತ್ತು. ಈಗ ಚಿತ್ರದ ಆಡಿಯೋ ಬಿಡುಗಡೆ ಮಾಡಿದೆ.['ಆಕ್ಷನ್ ಕಿಂಗ್' ಅರ್ಜುನ್ ಸರ್ಜಾ 150ನೇ ಸಿನಿಮಾ 'ವಿಸ್ಮಯ' ಟೀಸರ್ ಔಟ್]
'ವಿಸ್ಮಯ' ಚಿತ್ರ ಕನ್ನಡ ಮತ್ತು ತಮಿಳು ಭಾಷೆಯಲ್ಲಿ ಏಕಕಾಲಕ್ಕೆ ನಿರ್ಮಾಣ ಆಗಿರುವ ಚಿತ್ರ. ಮೊನ್ನೆಯಷ್ಟೇ ಚಿತ್ರದ ಆಡಿಯೋ ಬಿಡುಗಡೆ ಆಗಿದ್ದು ಸಿನಿಮಾ ಬಿಡುಗಡೆ ದಿನಾಂಕವು ಹೊರಬಿದ್ದಿದೆ. ಮುಂದೆ ಓದಿರಿ..
ಅರ್ಜುನ್ ಸರ್ಜಾ ಜೊತೆ ಶೃತಿ ಹರಿಹರನ್
'ವಿಸ್ಮಯ' ಚಿತ್ರಕ್ಕೆ ಎಸ್.ನವೀನ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಚಿತ್ರದ ಆಡಿಯೋ ಲಾಂಚ್ ವೇಳೆ ಅರ್ಜುನ್ ಸರ್ಜಾ ರವರು ಹಾಜರಿದ್ದರು. ಆಡಿಯೋ ಲಾಂಚ್ ವೇಳೆ ಶೃತಿ ಹರಿಹರನ್ ನಿರೂಪಣೆ ಮಾಡುತ್ತ ಅರ್ಜುನ್ ಸರ್ಜಾರಿಗೆ ಪ್ರಶ್ನೆ ಕೇಳುವ ವೇಳೆ ಕ್ಲಿಕ್ಕಿಸಿದ ಫೋಟೋ ನೋಡಿ.
'ವಿಸ್ಮಯ' ದಲ್ಲಿ ಶೃತಿ ಹರಿಹರನ್
'ವಿಸ್ಮಯ'ದಲ್ಲಿ ಸ್ಯಾಂಡಲ್ ವುಡ್ ಬೆಡಗಿ ಶೃತಿ ಹರಿಹರನ್ ನಟಿಸಿದ್ದಾರೆ. ಚಿತ್ರದ ಆಡಿಯೋ ಲಾಂಚ್ ವೇಳೆ 'ಬ್ಯೂಟಿಫುಲ್ ಮನಸ್ಸುಗಳು' ಸುಂದರಿ ನಿರೂಪಣೆ ಮಾಡುತ್ತ ಕ್ಯಾಮೆರಾ ಕಣ್ಣಿಗೆ ಬಿದ್ದ ಅದ್ಭುತ ಕ್ಷಣಗಳು.
ಚಿತ್ರ ಬಿಡುಗಡೆ ಯಾವಾಗ?
ಸಸ್ಪೆನ್ಸ್ ಮತ್ತು ಥ್ರಿಲ್ಲಿಂಗ್ ಸಿನಿಮಾ 'ವಿಸ್ಮಯ' ಬಿಡುಗಡೆ ದಿನಾಂಕವನ್ನು ಚಿತ್ರತಂಡ ಆಡಿಯೋ ಲಾಂಚ್ ವೇಳೆ ಪ್ರಕಟಿಸಿದೆ. ಚಿತ್ರ ಜುಲೈ 7 ರಂದು ಬಿಡುಗಡೆ ಆಗಲಿದೆ.
'ವಿಸ್ಮಯ' ಹಾಡುಗಳನ್ನು ಕೇಳಿ..
'ವಿಸ್ಮಯ' ಚಿತ್ರದ ಎರಡು ಹಾಡುಗಳನ್ನು ವಾಸುಕಿ ವೈಭವ್ ರವರು ಹಾಡಿದ್ದಾರೆ. ಮತ್ತೊಂದು ಹಾಡನ್ನು 'ಕಬಾಲಿ' ಚಿತ್ರದಲ್ಲಿ 'ನಿರುಪ್ಪ.. ಡಾ' ಸಾಂಗ್ ಹಾಡಿರುವ ಅರುಣ್ ರಾಜ ರವರು ಹಾಡಿದ್ದಾರೆ. 'ವಿಸ್ಮಯ' ಹಾಡುಗಳನ್ನು ಕೇಳಲು ಕ್ಲಿಕ್ ಮಾಡಿ
ಚಿತ್ರದಲ್ಲಿ ಯಾರೆಲ್ಲಾ ಇದ್ದಾರೆ?
'ವಿಸ್ಮಯ' ಚಿತ್ರಕ್ಕೆ ಅರುಣ್ ವೈದ್ಯನಾಥ್ ರವರು ಆಕ್ಷನ್ ಕಟ್ ಹೇಳಿದ್ದಾರೆ. ಅರ್ಜುನ್ ಸರ್ಜಾ ಮುಖ್ಯ ಭೂಮಿಕೆಯ ಈ ಚಿತ್ರದಲ್ಲಿ ಶೃತಿ ಹರಿಹರನ್ ಸೇರಿದಂತೆ ಹಿರಿಯ ನಟಿ ಸುಹಾಸಿನಿ, ಸುಧಾರಾಣಿ, ವೈಭವ್, ವರಲಕ್ಷ್ಮಿ ಶರತ್ ಕುಮಾರ್, ಪ್ರಸನ್ನ ಮತ್ತು ಇತರರು ಅಭಿನಯಿಸಿದ್ದಾರೆ.