Don't Miss!
- News ನೇಹಾ ಹತ್ಯೆ: ಶೀಘ್ರವೇ ನ್ಯಾಯದಾನ ಎಂದ ಸಚಿವ: ವಿಶೇಷ ಕೋರ್ಟ್ಗೆ 'ನೇಹಾ' ಹೆಸರಿಡಲು ಮನವಿ
- Lifestyle ರೆಸಿಪಿ: ಮಾವಿನ ಕಾಯಿ ತುರಿದು ಮಾಡುವ ಉಪ್ಪಿನಕಾಯಿ, ಎಣ್ಣೆ ಬಳಸಿಲ್ಲ, ವರ್ಷದವರೆಗೆ ಇಡಲೂ ಬಹುದು
- Technology Google: ಗೂಗಲ್ ಪಿಕ್ಸೆಲ್ 8a ಬೆಲೆ ಮಾಹಿತಿ ಲೀಕ್! ಈ ಫೋನ್ ಫೀಚರ್ಸ್ ಏನು?
- Automobiles ಯುವಕರಿಗೆ ಸಿಹಿಸುದ್ದಿ: ಕೈಗೆಟುಕುವ ಬೆಲೆ, ಮಾಸ್ ಲುಕ್ನಲ್ಲಿ ಬರುತ್ತಿದೆ ಹೊಸ ಬಜಾಜ್ ಪಲ್ಸರ್ 400 ಬೈಕ್
- Finance ಇನ್ಮುಂದೆ ನಿಮ್ಮ ಜಮೀನಿನಲ್ಲಿ ನೀವು ಮನೆ ಕಟ್ಟೋದಕ್ಕೂ ಸರ್ಕಾರದ ಅನುಮತಿ ಅಗತ್ಯ, ಏನಿದು ಹೋಸ ನಿಯಮ?
- Sports IPL 2024: ಆರ್ಸಿಬಿ ಕಪ್ ಗೆಲ್ಲದಿರಲು ಅತಿಯಾದ ಪಾರ್ಟಿ ಕಾರಣವೇ?; ರೈನಾ ಬಿಚ್ಚಿಟ್ಟ ಸತ್ಯ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಡಾರ್ಲಿಂಗ್ ಕೃಷ್ಣ ನ 'ಮುಂಬೈ' ಪ್ರಯಾಣಕ್ಕೆ ದಿನಗಣನೆ ಶುರು
ಡಾರ್ಲಿಂಗ್ ಕೃಷ್ಣ ಇತ್ತೀಚೆಗೆತಾನೆ 'ಜಾನ್ ಜಾನಿ ಜನಾರ್ಧನ್' ಸಿನಿಮಾದಲ್ಲಿ ಜಾನಿ ಪಾತ್ರದಲ್ಲಿ ಮಿಂಚಿದ್ದರು. ಈದೀಗ ಅವರೇ ನಾಯಕ ನಟನಾಗಿ ಅಭಿನಯಿಸಿರುವ 'ಮುಂಬೈ' ಚಿತ್ರ ಜನವರಿ 26 ರಂದು ತೆರೆಕಾಣುತ್ತಿದೆ.[ವಿಮರ್ಶೆ: 'ಜಾನ್-ಜಾನಿ-ಜನಾರ್ಧನ್' ಚೆಲ್ಲಾಟ ಮತ್ತು ಸಾಮಾಜಿಕ ಸಂದೇಶ!]
ಡಿಸೆಂಬರ್ 26 ರಂದು 'ಮುಂಬೈ' ಚಿತ್ರತಂಡ ಪಡ್ಡೆ ಹುಡುಗರಿಗೆ ಹೇಳಿಮಾಡಿಸಿದಂತಹ ಹಾಡುಗಳನ್ನು ಬಿಡುಗಡೆ ಮಾಡಿತ್ತು. 'ಲವಿಂಗ್ ಹುಡಗೀರ್ ಪವರ್ರು ಡ್ಯಾಮೇಜ್' ಎಂಬ ಹಾಡನ್ನು ವಿಜಯ್ ಪ್ರಕಾಶ್ ವಾಯ್ಸ್ ನಲ್ಲಿ ಕೇಳಿ ಹಲವು ಲವರ್ ಬಾಯ್ ಗಳು ಫಿದಾ ಸಹ ಆಗಿದ್ರು.
'ಡೆಮೋ ಕೊಡೋಕೆ ನಾನೇನು ಸಂತೂರು ಸೋಪಲ್ಲಾ.. ಆರಡಿ ಬುಲೆಟ್' ಎಂಬ ಖದರ್ ಡೈಲಾಗ್ ಮೂಲಕ 'ಮುಂಬೈ' ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ ಅಬ್ಬರಿಸಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ವಾಯ್ಸ್ ನಲ್ಲಿ 'ದಾಸವಾಳದ ಹೂವಾ ಕಿವಿಗಿಡುತಾಳವ್ವ.. ಪಟೈಕಳಿಗೆಲ್ಲಾ ಹಾರ್ಟೆಲ್ಲಾ ಡವಾ' ಎಂಬ ಸಾಂಗ್ ಇರುವುದು ಚಿತ್ರದ ಬಗ್ಗೆ ಇನ್ನಷ್ಟು ಕ್ರೇಜ್ ಹೆಚ್ಚಿಸಿದೆ.
'ಮುಂಬೈ' ಚಿತ್ರಕ್ಕೆ ಎಸ್.ಆರ್.ರಮೇಶ್ ಆಕ್ಷನ್ ಕಟ್ ಹೇಳಿದ್ದು, ರಾಮು ಚಿತ್ರ ನಿರ್ಮಾಣ ಮಾಡಿದ್ದಾರೆ. ಡಾರ್ಲಿಂಗ್ ಕೃಷ್ಣನಿಗೆ ತೇಜು ನಾಯಕಿ ನಟಿ ಆಗಿ ಅಭಿನಯಿಸಿದ್ದಾರೆ. ವಿ ಶ್ರೀಧರ್ ಸಂಭ್ರಮ್ ಸಂಗೀತ ಸಂಯೋಜನೆ ಮಾಡಿದ್ದಾರೆ.