Don't Miss!
- Lifestyle ಮೊಲದ ಜೊತೆ ಓಡಿ ಮತ್ತೊಮ್ಮೆ ರೇಸ್ ಗೆದ್ದ ಆಮೆ..! ಈ ಕಥೆ ನಿಜವಾಗಿದ್ದು ಹೇಗೆ ನೋಡಿ.!
- Finance Bangalore Karaga: ಇಂದು ಈ ರಸ್ತೆಗಳಲ್ಲಿ ಸಂಚಾರ ಬಂದ್, ಬದಲಿ ಮಾರ್ಗ ವಿವರ
- News Mysuru: ಏಪ್ರಿಲ್ 26ಕ್ಕೆ ಮೈಸೂರಿನ ಪ್ರವಾಸಿ ತಾಣಗಳು ಬಂದ್, ಕಾರಣ ಇಲ್ಲಿದೆ
- Automobiles ಸಾಮಾನ್ಯರಂತೆ ಹಳ್ಳಿಯಲ್ಲಿರುವ ದೇಶದ 55ನೇ ಶ್ರೀಮಂತ ಶ್ರೀಧರ್ ವೆಂಬು: ಕಚೇರಿಗೆ ಹೋಗಲು ಎಲೆಕ್ಟ್ರಿಕ್ ಆಟೋ ಖರೀದಿ!
- Technology Google Chrome: ಗೂಗಲ್ ಕ್ರೋಮ್ ಬಳಕೆದಾರರು ಹ್ಯಾಕಿಂಗ್ ಅಪಾಯದಲ್ಲಿ! ಸುರಕ್ಷಿತವಾಗಿರೋದು ಹೇಗೆ?
- Sports IPL 2024: ವಿರಾಟ್ ಕೊಹ್ಲಿ ವಿವಾದಾತ್ಮಕ ಔಟ್; ಅಂಪೈರಿಂಗ್ ವಿರುದ್ಧ ಕೆಂಡಕಾರಿದ ಮೊಹಮ್ಮದ್ ಕೈಫ್!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ದಾಸ' ದರ್ಶನ್ ಅಪಘಾತದ ಸುತ್ತ ಹಲವು ಅನುಮಾನಗಳ ಹುತ್ತ.!
Recommended Video
ಆ ದುರ್ಘಟನೆಯೊಂದು ಸಂಭವಿಸದೇ ಹೋಗಿದ್ದರೆ, ಇಷ್ಟೊತ್ತಿಗೆ 'ಒಡೆಯ' ಚಿತ್ರದ ಶೂಟಿಂಗ್ ನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪಾಲ್ಗೊಳ್ಳುತ್ತಿದ್ದರು. ಆದ್ರೆ, ಅದ್ಯಾರ ಕೆಟ್ಟು ಕಣ್ಣು ಬಿತ್ತೋ ಏನೋ.. ದರ್ಶನ್ ಇದೀಗ ಆಸ್ಪತ್ರೆ ಸೇರಿದ್ದಾರೆ.
ಮೊನ್ನೆ ಮಧ್ಯರಾತ್ರಿ ಮೂರು ಗಂಟೆ ಸುಮಾರಿಗೆ ಸಂಭವಿಸಿದ ಅಪಘಾತದಿಂದಾಗಿ, 'ದಾಸ' ದರ್ಶನ್ ಕೈ ಮುರಿದುಕೊಂಡು ಆಸ್ಪತ್ರೆ ಸೇರಿದ್ದಾರೆ. ಅದೃಷ್ಟವಶಾತ್ ದೊಡ್ಡ ಅನಾಹುತದಿಂದ ಪಾರಾಗಿದ್ದಾರೆ.
ಪಾರ್ಟಿ ಮುಗಿಸಿ ಸಂಭ್ರಮದಲ್ಲಿ ಇದ್ದ ಡೈನಾಮಿಕ್ ಸ್ಟಾರ್ ದೇವರಾಜ್ ಹಾಗೂ ಪುತ್ರ ಪ್ರಜ್ವಲ್ ದೇವರಾಜ್ ಕೂಡ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ದರ್ಶನ್, ದೇವರಾಜ್, ಪ್ರಜ್ವಲ್ ದೇವರಾಜ್ ಹಾಗೂ ರಾಯ್ ಆಂಟೋನಿ ಪ್ರಯಾಣಿಸುತ್ತಿದ್ದ ಆಡಿ ಕ್ಯೂ 7 ಕಾರು ಅಪ್ಪಳಿಸಿದ ರಭಸಕ್ಕೆ ಕಬ್ಬಿಣದ ಕಂಬವೇ ಮುರಿದು ಬಿದ್ದಿದೆ. ಆಡಿ ಕ್ಯೂ 7 ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಹಾಗಾದ್ರೆ, ಶರವೇಗದಲ್ಲಿ ಕಾರನ್ನ ಚಲಾಯಿಸಲಾಗುತ್ತಿತ್ತಾ.?
ದರ್ಶನ್ ಅಪಘಾತದ ಸುತ್ತ ಇಂತಹ ಹತ್ತು ಹಲವು ಅನುಮಾನಗಳ ಹುತ್ತ ಹುಟ್ಟಿಕೊಂಡಿದೆ. ಎಲ್ಲದರ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ. ಓದಿರಿ...
ಆಡಿ ಕಾರು ದರ್ಶನ್ ಗೆ ಸೇರಿದ್ದಲ್ಲ.!
ದರ್ಶನ್ ಕಾರು ಅಪಘಾತಗೊಂಡಿದೆ ಎಂದೇ ಎಲ್ಲೆಡೆ ವರದಿ ಆಗುತ್ತಿದೆ. ಆದ್ರೆ, ಸತ್ಯ ಏನು ಅಂದ್ರೆ, ದರ್ಶನ್, ದೇವರಾಜ್, ಪ್ರಜ್ವಲ್ ದೇವರಾಜ್ ಪ್ರಯಾಣ ಮಾಡುತ್ತಿದ್ದ ಆಡಿ ಕಾರು (JA 51 JD 7999) ನಿರ್ಮಾಪಕ, ರಾಜಕಾರಣಿ ಸಂದೇಶ್ ನಾಗರಾಜ್ ಅವರಿಗೆ ಸೇರಿದ್ದು.!
ದರ್ಶನ್ ಸ್ಥಿತಿ ಈಗ ಹೇಗಿದೆ?: ಆಸ್ಪತ್ರೆಯಿಂದ ಇಂದು ಡಿಸ್ಚಾರ್ಜ್ ಆಗಲ್ಲ
ಅಪಘಾತ ನಡೆದ ಮೇಲೆ ಕಾರನ್ನ ಗೌಪ್ಯವಾಗಿ ತೆಗೆದುಕೊಂಡು ಹೋಗಿದ್ದೇಕೆ.?
ಮಧ್ಯರಾತ್ರಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು, ಎತ್ತರಕ್ಕೆ ಹಾರಿ ಬಿದ್ದ ಮೇಲೆ ಆಡಿ ಕಾರನ್ನ ಗೌಪ್ಯವಾಗಿ ಬೇರೆ ಸ್ಥಳಕ್ಕೆ ತೆಗೆದುಕೊಂಡು ಹೋಗಲಾಗಿತ್ತು. ಶ್ರೀರಂಗಪಟ್ಟಣದ ತೋಟದಲ್ಲಿ ಕಾರನ್ನ ಮುಚ್ಚಿಟ್ಟು, ಬಳಿಕ ಪೊಲೀಸ್ ಠಾಣೆಗೆ ತೆಗೆದುಕೊಂಡು ಬಂದಿದ್ದು ಈ ಅಪಘಾತ ಪ್ರಕರಣದಲ್ಲಿ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.
ಬಚ್ಚಿಟ್ಟಿದ್ದ ದಾಸನ ಅಪಘಾತದ ಕಾರು, ಶ್ರೀರಂಗಪಟ್ಟಣದಲ್ಲಿ ಪತ್ತೆ
ಪೊಲೀಸರು ಇದ್ದರಂತೆ.!
ಮಧ್ಯರಾತ್ರಿ ಅಪಘಾತವಾದ ಆಡಿ ಕಾರನ್ನು ಸಾಗಿಸುವಾಗ ಪೊಲೀಸರು ಇದ್ದರು ಅಂತ ಪ್ರತ್ಯಕ್ಷದರ್ಶಿಗಳು ಹೇಳ್ತಾರೆ. ಆದ್ರೆ, ಅಪಘಾತದ ನಡೆದ 14 ಗಂಟೆ ಬಳಿಕ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದು ಹಾಗೂ ಮಧ್ಯಾಹ್ನದ ಹೊತ್ತಿಗೆ ಅಪಘಾತ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ಕೊಟ್ಟಿದ್ದು ಸಾಮಾನ್ಯ ಜನರಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ವದಂತಿಗಳನ್ನ ನಂಬಬೇಡಿ: ದರ್ಶನ್ ಆರೋಗ್ಯದ ಬಗ್ಗೆ ಸ್ಪಷ್ಟ ಮಾಹಿತಿ ನೀಡಿದ ವೈದ್ಯರು
ಕಾರು ಚಲಾಯಿಸುತ್ತಿದ್ದವರು ಯಾರು.?
ಅಪಘಾತ ನಡೆದಾಗ ಆಡಿ ಕಾರನ್ನ ಚಲಾಯಿಸುತ್ತಿದ್ದವರು ಯಾರು ಎಂಬ ಪ್ರಶ್ನೆಗೆ ಇನ್ನೂ ಖಚಿತವಾದ ಉತ್ತರ ಲಭ್ಯವಾಗಿಲ್ಲ. ಆದ್ರೆ, ರಾಯ್ ಆಂಟೋನಿ ಎಂಬುವರು ಕಾರು ಚಲಾಯಿಸುತ್ತಿದ್ದರು ಎನ್ನಲಾಗಿದೆ.
ಅಪಘಾತದ ವೇಳೆ ದರ್ಶನ್ ಕಾರು ಚಲಾಯಿಸುತ್ತಿದ್ದ ರಾಯ್ ಅಂಟೋನಿ ಯಾರು.?
ಡ್ರಿಂಕ್ ಅಂಡ್ ಡ್ರೈವ್ ಕೇಸ್ ತಪ್ಪಿಸಿಕೊಳ್ಳಲು ಯತ್ನ.?
ಪಾರ್ಟಿಯಲ್ಲಿ ಎಲ್ಲರೂ ಮದ್ಯಪಾನ ಮಾಡಿದ್ರಾ.? ಡ್ರಿಂಕ್ ಅಂಡ್ ಡ್ರೈವ್ ಕೇಸ್ ನಿಂದ ತಪ್ಪಿಸಿಕೊಳ್ಳಲು ಕಾರನ್ನ ಮುಚ್ಚಿಡುವ ಪ್ರಯತ್ನ ನಡೆಯಿತಾ.? ಅಂತ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಎದ್ದಿವೆ.
ಅಪಘಾತಕ್ಕೂ ಮುಂಚೆ ದರ್ಶನ್-ದೇವರಾಜ್ ಪಾರ್ಟಿ ಫೋಟೋಗಳು
ವಿಮೆ ಬೇಡ
ದುಬಾರಿ ಆಡಿ ಕಾರಿನ ವಿಮೆ ಬೇಡ ಅಂತ ಹೇಳಲಾಗಿದ್ಯಂತೆ. ಮುಂಭಾಗ ಪೂರ್ತಿ ಜಖಂ ಆಗಿರುವ ಕಾರಿನ ವಿಮೆ ಬೇಡ ಎನ್ನಲು ಕಾರಣ ಏನು.? ಪ್ರಕರಣವನ್ನ ಮುಚ್ಚಿ ಹಾಕಲು ಹೀಗೆಲ್ಲ ಮಾಡ್ತಿದ್ದಾರಾ ಎಂಬ ಡೌಟ್ ಎಲ್ಲರನ್ನೂ ಕಾಡುತ್ತಿದೆ.