Don't Miss!
- News ಸಿಯಾಚಿನ್ ಬಳಿ ಚೀನಾ ಆಕ್ರಮಿತ ಕಾಶ್ಮೀರದಲ್ಲಿ ಹೊಸ ರಸ್ತೆ ನಿರ್ಮಾಣ; ಖಚಿತಪಡಿಸಿದ ಉಪಗ್ರಹ ಚಿತ್ರಗಳು
- Sports IPL 2024: ಆರ್ಸಿಬಿಗೆ ವಿರಾಟ್, ಪಾಟಿದಾರ್ ಆಸರೆ: ಹೈದರಾಬಾದ್ಗೆ ಸವಾಲಿನ ಟಾರ್ಗೆಟ್
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ದರ್ಶನ್ ಈಸ್ ಬ್ಯಾಕ್, ಫೀಲ್ಡ್ ಗೆ ಇಳಿದ ದಾಸ
ಕಾರು ಅಪಘಾತದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಲಗೈಗೆ ಪೆಟ್ಟಾಗಿತ್ತು. ಶಸ್ತ್ರ ಚಿಕಿತ್ಸೆ ಮಾಡಿದ್ದ ವೈದ್ಯರು ಬಲಗೈಗೆ ಕಟ್ಟು ಕಟ್ಟಿದ್ದರು. ಇದರ ಪರಿಣಾಮ ಸುಮಾರು ಒಂದು ತಿಂಗಳು ವಿಶ್ರಾಂತಿ ಸೂಚಿಸಿದ್ದರು.
ಬಹುಶಃ ದರ್ಶನ್ ಅವರ ಕೈ ಗಮನಿಸಿದ್ದ ಅಭಿಮಾನಿಗಳು, ಡಿ ಬಾಸ್ ಮತ್ತೆ ಮೊದಲಿನಂತೆ ಆಗಲು ತುಂಬಾ ದಿನ ಬೇಕಾಗಬಹುದು ಎಂದುಕೊಂಡಿದ್ದರು. ಆದ್ರೆ, ಚಕ್ರವರ್ತಿ ಸ್ವಲ್ಪ ಬೇಗನೇ ರೆಡಿಯಾಗ್ತಿದ್ದಾರೆ.
ದರ್ಶನ್ ಆರೋಗ್ಯ ವಿಚಾರಿಸಿದ ಯಶ್, 'ಮರಿ ರಾಜಾಹುಲಿ'ಗೆ ಶುಭಕೋರಿದ ದಾಸ.!
ಮತ್ತೆ ಮೊದಲಿನಂತೆ ತಮ್ಮ ಸಹಜ ಸ್ಥಿತಿಯತ್ತ ಹೆಜ್ಜೆ ಇಡುತ್ತಿದ್ದಾರೆ. ಇದಕ್ಕೆ ಪುಷ್ಠಿಯೆಂಬಂತೆ ಈಗ ಕೆಲವು ಫೋಟೋಗಳು ಸಿಕ್ಕಿದೆ. ಅಭಯಾರಣ್ಯದಲ್ಲಿ ದರ್ಶನ್ ಫೋಟೋ ಕ್ಲಿಕ್ಕಿಸುತ್ತಿರುವ ಫೋಟೋ ವೈರಲ್ ಆಗಿದ್ದು, ದರ್ಶನ್ ತಮ್ಮ ಎರಡೂ ಕೈಗಳಿಂದ ಫೋಟೋ ತೆಗೆಯುತ್ತಿದ್ದಾರೆ.
ದರ್ಶನ್ ಕಾರು ಅಪಘಾತ ಪ್ರಕರಣ: ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆ
ಕ್ಯಾಮೆರಾವನ್ನ ತಮ್ಮ ಎರಡು ಕೈಗಳಿಂದ ನಿಯಂತ್ರಿಸುತ್ತಿದ್ದಾರೆ. ಆದ್ರೆ, ಕೈಗೆ ಹಾಕಿರುವ ಕಟ್ಟನ್ನ ಇನ್ನು ಬಿಚ್ಚಿಲ್ಲ. ಬಟ್, ಇದನ್ನ ನೋಡಿದ್ರೆ, ದರ್ಶನ್ ಅವರ ತಮ್ಮ ಕೈಗಳನ್ನ ಮೊದಲಿನಂತೆ ಸರಾಗವಾಗಿ ಬಳಸುತ್ತಿದ್ದಾರೆ ಎಂಬುದು ಗೊತ್ತಾಗುತ್ತಿದೆ.
ಸದ್ಯ, ದರ್ಶನ್ ಅವರ ವಿಶ್ರಾಂತಿಯಿಂದ 'ಯಜಮಾನ', 'ಒಡೆಯ' ಸಿನಿಮಾಗಳು ಬ್ರೇಕ್ ತೆಗೆದುಕೊಂಡಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಗಿಸುತ್ತಿದ್ದು, ಬಾಕಿ ಚಿತ್ರೀಕರಣಕ್ಕಾಗಿ ಕಾಯುತ್ತಿದೆ. ಈ ಮಧ್ಯೆ 'ಗಂಡುಗಲಿ ಮದಕರಿ ನಾಯಕ' ಹಾಗೂ ತರುಣ್ ಸುಧೀರ್ ಸಿನಿಮಾ ಕೂಡ ಸೆಟ್ಟೇರಲಿದೆ. ದರ್ಶನ್ ವಾಪಸ್ ಆಗುತ್ತಿದ್ದಂತೆ ಈ ಎಲ್ಲ ಚಿತ್ರಗಳನ್ನ ಶುರು ಮಾಡಲಿದ್ದಾರೆ.